<p>ಬೆಳಗಾವಿ: ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಿಶ್ವ ತಾಯಂದಿರ ದಿನದ ಅಂಗವಾಗಿ ಸುನೀಲ ಪರೀಟ ಅವರ ‘ನಮ್ಮ ತಾಯಿ ದೇವರು’ ಹಾಗೂ ‘ವ್ಯಕ್ತಿ ಶಕ್ತಿ’ ಎಂಬ ಎರಡು ಕೃತಿಗಳ ಲೋಕಾರ್ಪಣೆ ಮಾಡಲಾಯಿತು.</p>.<p>ಕನ್ನಡ ಸಾಹಿತ್ಯ ಭವನದ ಕಾರ್ಯದರ್ಶಿ ಬಿ.ಎಂ. ಕಟ್ಟಿ ಮಾತನಾಡಿ, ‘ತಾಯಿಗೆ ಸಮರ್ಪಿತವಾದ ಇಂಥ ಕೃತಿಗಳು ಯಾವುದೇ ಕಾಲದಲ್ಲಿ ಉತ್ತಮ ಪ್ರಭಾವವನ್ನು ಬೀರುತ್ತವೆ’ ಎಂದು ಹೇಳಿದರು.</p>.<p>ಕನ್ನಡ ಪ್ರಾಧ್ಯಾಪಕ ರಾಜಶೇಖರ ಬಿರಾದಾರ 'ನಮ್ಮ ತಾಯಿ ದೇವರು' ಪುಸ್ತಕ ಹಾಗೂ ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಅಡಿವೇಶ ಇಟಗಿ ಅವರು ‘ವ್ಯಕ್ಯಿ ಶಕ್ತಿ’ ಕೃತಿ ಪರಿಚಯಿಸಿದರು.</p>.<p>ಹಿರಿಯ ಸಾಹಿತಿ ಜಯಶೀಲಾ ಬ್ಯಾಕೋಡ ಅವರು ಅಧ್ಯಕ್ಷೀಯ ಭಾಷಣ ಮಾಡಿದರು.</p>.<p>ಸಂಪಾದಕ ಹಾಗೂ ಲೇಖಕ ಸುನೀಲ ಪರೀಟ ಅವರು ತಮ್ಮಭಾಷಣದಲ್ಲಿ, ‘ಕೃತಿಗಳ ಕುರಿತು ತಮ್ಮ ಒಡಲಾಳದ ಅನುಭವವನ್ನು ಹಂಚಿಕೊಂಡರು. ಸುಮಾ ದೊಡಮನಿ, ಎಂ.ಎಸ್. ಹಿರೇಮಠ,ಹೇಮಾ ಸೊನ್ನೊಳ್ಳಿ, ಶಿವು ನಂದಗಾಂವ, ಎಂ.ವೈ. ಮೆಣಸಿನಕಾಯಿ, ಈರಣ್ಣ ಆಲೂರ, ಸುಮತಿ ಶಂಕರಗೌಡ ಮುಂತಾದವರು ಇದ್ದರು.</p>.<p>ಸಾಹಿತ್ಯಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ರಾಜ್ಯಮಟ್ಟದ ಮಾತೃ ಸಾಹಿತ್ಯ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.</p>.<p>ಅನುರಾಧಾ ಕೋಲ್ಕಾರ ನಾಡಗೀತೆ ಪ್ರಸ್ತುತಪಡಿಸಿದರು, ಗಂಗಮ್ಮಾ ಪಾಟೀಲ ನಿರೂಪಿಸಿದರು, ಎಂ. ವೈ. ಮೆಣಸಿನಕಾಯಿ ವಂದಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260602-21-2074990411</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಳಗಾವಿ: ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಿಶ್ವ ತಾಯಂದಿರ ದಿನದ ಅಂಗವಾಗಿ ಸುನೀಲ ಪರೀಟ ಅವರ ‘ನಮ್ಮ ತಾಯಿ ದೇವರು’ ಹಾಗೂ ‘ವ್ಯಕ್ತಿ ಶಕ್ತಿ’ ಎಂಬ ಎರಡು ಕೃತಿಗಳ ಲೋಕಾರ್ಪಣೆ ಮಾಡಲಾಯಿತು.</p>.<p>ಕನ್ನಡ ಸಾಹಿತ್ಯ ಭವನದ ಕಾರ್ಯದರ್ಶಿ ಬಿ.ಎಂ. ಕಟ್ಟಿ ಮಾತನಾಡಿ, ‘ತಾಯಿಗೆ ಸಮರ್ಪಿತವಾದ ಇಂಥ ಕೃತಿಗಳು ಯಾವುದೇ ಕಾಲದಲ್ಲಿ ಉತ್ತಮ ಪ್ರಭಾವವನ್ನು ಬೀರುತ್ತವೆ’ ಎಂದು ಹೇಳಿದರು.</p>.<p>ಕನ್ನಡ ಪ್ರಾಧ್ಯಾಪಕ ರಾಜಶೇಖರ ಬಿರಾದಾರ 'ನಮ್ಮ ತಾಯಿ ದೇವರು' ಪುಸ್ತಕ ಹಾಗೂ ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಅಡಿವೇಶ ಇಟಗಿ ಅವರು ‘ವ್ಯಕ್ಯಿ ಶಕ್ತಿ’ ಕೃತಿ ಪರಿಚಯಿಸಿದರು.</p>.<p>ಹಿರಿಯ ಸಾಹಿತಿ ಜಯಶೀಲಾ ಬ್ಯಾಕೋಡ ಅವರು ಅಧ್ಯಕ್ಷೀಯ ಭಾಷಣ ಮಾಡಿದರು.</p>.<p>ಸಂಪಾದಕ ಹಾಗೂ ಲೇಖಕ ಸುನೀಲ ಪರೀಟ ಅವರು ತಮ್ಮಭಾಷಣದಲ್ಲಿ, ‘ಕೃತಿಗಳ ಕುರಿತು ತಮ್ಮ ಒಡಲಾಳದ ಅನುಭವವನ್ನು ಹಂಚಿಕೊಂಡರು. ಸುಮಾ ದೊಡಮನಿ, ಎಂ.ಎಸ್. ಹಿರೇಮಠ,ಹೇಮಾ ಸೊನ್ನೊಳ್ಳಿ, ಶಿವು ನಂದಗಾಂವ, ಎಂ.ವೈ. ಮೆಣಸಿನಕಾಯಿ, ಈರಣ್ಣ ಆಲೂರ, ಸುಮತಿ ಶಂಕರಗೌಡ ಮುಂತಾದವರು ಇದ್ದರು.</p>.<p>ಸಾಹಿತ್ಯಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ರಾಜ್ಯಮಟ್ಟದ ಮಾತೃ ಸಾಹಿತ್ಯ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.</p>.<p>ಅನುರಾಧಾ ಕೋಲ್ಕಾರ ನಾಡಗೀತೆ ಪ್ರಸ್ತುತಪಡಿಸಿದರು, ಗಂಗಮ್ಮಾ ಪಾಟೀಲ ನಿರೂಪಿಸಿದರು, ಎಂ. ವೈ. ಮೆಣಸಿನಕಾಯಿ ವಂದಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260602-21-2074990411</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>