<p>ಬೆಳಗಾವಿ: ‘ಸಂಗೀತ ಮನಸನ್ನು ಅರಳಿಸುತ್ತದೆ. ಭಾವನೆಗಳಿಗೆ ಶಕ್ತಿ ತುಂಬುತ್ತದೆ. ಮನಸಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಭಾರತೀಯ ದರ್ಶನವಿರುವುದು ಸಂಗೀತದಲ್ಲಿ. ಅದನ್ನು ಮಕ್ಕಳಿಗೆ ಉಣಬಡಿಸಬೇಕು’ ಎಂದು ಕಾಹೆರ್ ಉಪಕುಲಪತಿ ಪ್ರೊ.ಸಂದೀಪ್ ಶ್ರೀವಾತ್ಸವ ಹೇಳಿದರು.</p>.<p>ಜೆಎನ್ಎಂಸಿ ಕನ್ವೆನ್ಷನ್ ಸೆಂಟರ್ನ ಡಾ.ಎಚ್.ಬಿ.ರಾಜಶೇಖರ ಸಭಾಂಗಣದಲ್ಲಿ ಕಾಹೆರ್ ವಿ.ವಿ. ಸಂಗೀತ ಶಾಲೆಯು ಮಕ್ಕಳಿಗಾಗಿ ಶನಿವಾರ ಆಯೋಜಿಸಿದ್ದ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದರು.</p>.<p>ಕೆಎಲ್ಈ ವಿಶ್ವವಿದ್ಯಾಲಯದ ಕುಲಸಚಿವ ವಿ.ಎನ್. ಪಟ್ಟಣಶೆಟ್ಟಿಶೆಟ್ಟಿ ಮಾತನಾಡಿ, ‘ಮಕ್ಕಳಿಗೆ ಸಂಗೀತ, ನೃತ್ಯ, ವಾದ್ಯ ಸಂಗೀತದ ಲಲಿತ ಕಲೆಗಳ ಅಭಿರುಚಿಯನ್ನು ಮೂಡಿಸಬೇಕು. ಈ ನಿಟ್ಟಿನಲ್ಲಿ ಕೆಎಲ್ಇ ಸಂಗೀತ ಶಾಲೆ ಪ್ರತಿವರ್ಷ ಮಕ್ಕಳಿಗೆ ಸಂಗೀತ ಶಿಬಿರಗಳನ್ನು ಆಯೋಜಿಸುತ್ತಿದೆ’ ಎಂದು ಹೇಳಿದರು.</p>.<p>ಶಿಬಿರದಲ್ಲಿ 106 ಮಕ್ಕಳು ಪಾಲ್ಗೊಂಡಿದ್ದರು. ಶಾಸ್ತ್ರೀಯ ಗಾಯನ ಹಾಗೂ ಬಾಲ ಗೀತೆಗಳು, ಭರತನಾಟ್ಯ, ಹಾರ್ಮೋನಿಯಂ, ತಬಲಾ ವಾದ್ಯಗಳ ತರಬೇತಿ ನೀಡಲಾಯಿತು.</p>.<p>ಪುಟ್ಟ ಕೈಗಳು ತಬಲಾ, ಹಾರ್ಮೋನಿಯಂ ವಾದ್ಯಗಳಲ್ಲಿ ಅನೇಕ ರಾಗಗಳನ್ನು, ಭಕ್ತಿಗೀತೆಗಳನ್ನು ನುಡಿಸಿ ಪ್ರೇಕ್ಷಕರ ಹೃದಯ ಸೂರೆಗೊಳಿಸಿದರು.</p>.<p>ಸಂಗೀತ ಶಾಲೆಯ ಸಂಯೋಜಕ ರಾಜೇಂದ್ರ ಭಂಡಾನಕರ, ಪ್ರಾಚಾರ್ಯ ಪಂಡಿತ ರಾಜಾರಾಮ ಅಂಬರಡಿಕರ, ಸುನೀತಾ ಪಾಟೀಲ, ದುರ್ಗಾ ನಾಡಕರ್ಣಿ, ಸಂಗೀತ ಶಿಕ್ಷಕಿ ಸಂಗೀತಾ ಕುಲಕರ್ಣಿ, ವಿಲಾಸ ಭೋಸ್ಲೆ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260525-21-401750479</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಳಗಾವಿ: ‘ಸಂಗೀತ ಮನಸನ್ನು ಅರಳಿಸುತ್ತದೆ. ಭಾವನೆಗಳಿಗೆ ಶಕ್ತಿ ತುಂಬುತ್ತದೆ. ಮನಸಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಭಾರತೀಯ ದರ್ಶನವಿರುವುದು ಸಂಗೀತದಲ್ಲಿ. ಅದನ್ನು ಮಕ್ಕಳಿಗೆ ಉಣಬಡಿಸಬೇಕು’ ಎಂದು ಕಾಹೆರ್ ಉಪಕುಲಪತಿ ಪ್ರೊ.ಸಂದೀಪ್ ಶ್ರೀವಾತ್ಸವ ಹೇಳಿದರು.</p>.<p>ಜೆಎನ್ಎಂಸಿ ಕನ್ವೆನ್ಷನ್ ಸೆಂಟರ್ನ ಡಾ.ಎಚ್.ಬಿ.ರಾಜಶೇಖರ ಸಭಾಂಗಣದಲ್ಲಿ ಕಾಹೆರ್ ವಿ.ವಿ. ಸಂಗೀತ ಶಾಲೆಯು ಮಕ್ಕಳಿಗಾಗಿ ಶನಿವಾರ ಆಯೋಜಿಸಿದ್ದ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದರು.</p>.<p>ಕೆಎಲ್ಈ ವಿಶ್ವವಿದ್ಯಾಲಯದ ಕುಲಸಚಿವ ವಿ.ಎನ್. ಪಟ್ಟಣಶೆಟ್ಟಿಶೆಟ್ಟಿ ಮಾತನಾಡಿ, ‘ಮಕ್ಕಳಿಗೆ ಸಂಗೀತ, ನೃತ್ಯ, ವಾದ್ಯ ಸಂಗೀತದ ಲಲಿತ ಕಲೆಗಳ ಅಭಿರುಚಿಯನ್ನು ಮೂಡಿಸಬೇಕು. ಈ ನಿಟ್ಟಿನಲ್ಲಿ ಕೆಎಲ್ಇ ಸಂಗೀತ ಶಾಲೆ ಪ್ರತಿವರ್ಷ ಮಕ್ಕಳಿಗೆ ಸಂಗೀತ ಶಿಬಿರಗಳನ್ನು ಆಯೋಜಿಸುತ್ತಿದೆ’ ಎಂದು ಹೇಳಿದರು.</p>.<p>ಶಿಬಿರದಲ್ಲಿ 106 ಮಕ್ಕಳು ಪಾಲ್ಗೊಂಡಿದ್ದರು. ಶಾಸ್ತ್ರೀಯ ಗಾಯನ ಹಾಗೂ ಬಾಲ ಗೀತೆಗಳು, ಭರತನಾಟ್ಯ, ಹಾರ್ಮೋನಿಯಂ, ತಬಲಾ ವಾದ್ಯಗಳ ತರಬೇತಿ ನೀಡಲಾಯಿತು.</p>.<p>ಪುಟ್ಟ ಕೈಗಳು ತಬಲಾ, ಹಾರ್ಮೋನಿಯಂ ವಾದ್ಯಗಳಲ್ಲಿ ಅನೇಕ ರಾಗಗಳನ್ನು, ಭಕ್ತಿಗೀತೆಗಳನ್ನು ನುಡಿಸಿ ಪ್ರೇಕ್ಷಕರ ಹೃದಯ ಸೂರೆಗೊಳಿಸಿದರು.</p>.<p>ಸಂಗೀತ ಶಾಲೆಯ ಸಂಯೋಜಕ ರಾಜೇಂದ್ರ ಭಂಡಾನಕರ, ಪ್ರಾಚಾರ್ಯ ಪಂಡಿತ ರಾಜಾರಾಮ ಅಂಬರಡಿಕರ, ಸುನೀತಾ ಪಾಟೀಲ, ದುರ್ಗಾ ನಾಡಕರ್ಣಿ, ಸಂಗೀತ ಶಿಕ್ಷಕಿ ಸಂಗೀತಾ ಕುಲಕರ್ಣಿ, ವಿಲಾಸ ಭೋಸ್ಲೆ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260525-21-401750479</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>