<p>ಬೆಳಗಾವಿ: ಪಿರನವಾಡಿಯ ಮಹಾಲಕ್ಷ್ಮೀ ಕಮಾಂಡೋ ಆರ್ಮಿ ಕೋಚಿಂಗ್ ಅಕಾಡೆಮಿ ವಿದ್ಯಾರ್ಥಿಗಳಿಗಾಗಿ, ಇಲ್ಲಿನ ನಂದಾದೀಪ ನೇತ್ರಾಲಯದಲ್ಲಿ ಶುಕ್ರವಾರ ಸಮಗ್ರ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.</p>.<p>ಮುಖ್ಯ ಅತಿಥಿಯಾಗಿ ನಿವೃತ್ತ ಎನ್ಎಸ್ಜಿ ಬ್ಲ್ಯಾಕ್ ಕ್ಯಾಟ್ ಕಮಾಂಡೋ ಸುರೇಶ್ ಸನದಿ ಆಗಮಿಸಿದ್ದರು. ತಮ್ಮ ವಿಶಿಷ್ಟ ಸೈನಿಕ ಅನುಭವವನ್ನು ಹಂಚಿಕೊಂಡ ಅವರು, ಕರ್ತವ್ಯ ನಿರ್ವಹಣೆಯಲ್ಲಿ ಪರಿಪೂರ್ಣ ದೃಷ್ಟಿ ಹಾಗೂ ದೈಹಿಕ ಕ್ಷಮತೆಯ ಮಹತ್ವ ಒತ್ತಿ ಹೇಳಿದರು.</p>.<p>ನಂದಾದೀಪ ನೇತ್ರಾಲಯದ ನಿರ್ದೇಶಕಿ ಡಾ.ನಿಧಿ ಪಾಟವರ್ಧನ್ ಮಾತನಾಡಿ, ಆಸ್ಪತ್ರೆಯ ಇತ್ತೀಚಿನ ತಾಂತ್ರಿಕ ಅಭಿವೃದ್ಧಿ, ವಿಶೇಷ ಲಾಸಿಕ್ ಶಸ್ತ್ರಚಿಕಿತ್ಸಾ ಅಭಿಯಾನ, ದೃಷ್ಟಿದೋಷ ಸರಿಪಡಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗಾಗಿ ವಿಶೇಷ ಪರಿಹಾರಗಳನ್ನು ಒದಗಿಸಿದ ಬಗ್ಗೆ ವಿವರಿಸಿದರು.</p>.<p>ಮಹಾಲಕ್ಷ್ಮೀ ಕಮಾಂಡೋ ಆರ್ಮಿ ಕೋಚಿಂಗ್ ಅಕಾಡೆಮಿಯ ಒಟ್ಟು 80 ವಿದ್ಯಾರ್ಥಿಗಳು ಶಿಬಿರದಲ್ಲಿ ತಪಾಸಣೆಗೆ ಒಳಪಟ್ಟರು. ಡಾ.ಸೌರವ್ ಪಾಟೀಲ ಹಾಗೂ ಡಾ.ಎ.ಆರ್. ಪರಾಯಿ ಅವರ ತಂಡ ತಪಾಸಣೆ ಮಾಡಿತು. ನಂದಾದೀಪ ನೇತ್ರಾಲಯದ ಆಡಳಿತಾಧಿಕಾರಿ ಆನಂದ ತುಪ್ಪದ ಸಂಯೋಜಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260502-21-1090485467</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಳಗಾವಿ: ಪಿರನವಾಡಿಯ ಮಹಾಲಕ್ಷ್ಮೀ ಕಮಾಂಡೋ ಆರ್ಮಿ ಕೋಚಿಂಗ್ ಅಕಾಡೆಮಿ ವಿದ್ಯಾರ್ಥಿಗಳಿಗಾಗಿ, ಇಲ್ಲಿನ ನಂದಾದೀಪ ನೇತ್ರಾಲಯದಲ್ಲಿ ಶುಕ್ರವಾರ ಸಮಗ್ರ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.</p>.<p>ಮುಖ್ಯ ಅತಿಥಿಯಾಗಿ ನಿವೃತ್ತ ಎನ್ಎಸ್ಜಿ ಬ್ಲ್ಯಾಕ್ ಕ್ಯಾಟ್ ಕಮಾಂಡೋ ಸುರೇಶ್ ಸನದಿ ಆಗಮಿಸಿದ್ದರು. ತಮ್ಮ ವಿಶಿಷ್ಟ ಸೈನಿಕ ಅನುಭವವನ್ನು ಹಂಚಿಕೊಂಡ ಅವರು, ಕರ್ತವ್ಯ ನಿರ್ವಹಣೆಯಲ್ಲಿ ಪರಿಪೂರ್ಣ ದೃಷ್ಟಿ ಹಾಗೂ ದೈಹಿಕ ಕ್ಷಮತೆಯ ಮಹತ್ವ ಒತ್ತಿ ಹೇಳಿದರು.</p>.<p>ನಂದಾದೀಪ ನೇತ್ರಾಲಯದ ನಿರ್ದೇಶಕಿ ಡಾ.ನಿಧಿ ಪಾಟವರ್ಧನ್ ಮಾತನಾಡಿ, ಆಸ್ಪತ್ರೆಯ ಇತ್ತೀಚಿನ ತಾಂತ್ರಿಕ ಅಭಿವೃದ್ಧಿ, ವಿಶೇಷ ಲಾಸಿಕ್ ಶಸ್ತ್ರಚಿಕಿತ್ಸಾ ಅಭಿಯಾನ, ದೃಷ್ಟಿದೋಷ ಸರಿಪಡಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗಾಗಿ ವಿಶೇಷ ಪರಿಹಾರಗಳನ್ನು ಒದಗಿಸಿದ ಬಗ್ಗೆ ವಿವರಿಸಿದರು.</p>.<p>ಮಹಾಲಕ್ಷ್ಮೀ ಕಮಾಂಡೋ ಆರ್ಮಿ ಕೋಚಿಂಗ್ ಅಕಾಡೆಮಿಯ ಒಟ್ಟು 80 ವಿದ್ಯಾರ್ಥಿಗಳು ಶಿಬಿರದಲ್ಲಿ ತಪಾಸಣೆಗೆ ಒಳಪಟ್ಟರು. ಡಾ.ಸೌರವ್ ಪಾಟೀಲ ಹಾಗೂ ಡಾ.ಎ.ಆರ್. ಪರಾಯಿ ಅವರ ತಂಡ ತಪಾಸಣೆ ಮಾಡಿತು. ನಂದಾದೀಪ ನೇತ್ರಾಲಯದ ಆಡಳಿತಾಧಿಕಾರಿ ಆನಂದ ತುಪ್ಪದ ಸಂಯೋಜಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260502-21-1090485467</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>