<p>ಬೆಳಗಾವಿ: ‘ಹೆಣ್ಣು ಅಬಲೆಯಲ್ಲ ಸಬಲೆ. ಜಗತ್ತಿನ ಸೃಷ್ಟಿಯ ಮೂಲವೇ ಮಹಿಳೆ. ಅವರು ಮಾಡುವ ಕೆಲಸಗಳಿಗೆ ಅಭಿನಂದಿಸಿ ಪ್ರೋತ್ಸಾಹಿಸಬೇಕೆ ಹೊರತು ತಾರತಮ್ಯ ಮಾಡಬಾರದು’ ಎಂದು ಕೀರ್ತಿ ಶಿವಕುಮಾರ್ ಹೇಳಿದರು.</p>.<p>ನಗರದ ಹಿಂದವಾಡಿಯ ಗೊಮ್ಮಟೇಶ್ ವಿದ್ಯಾಪೀಠದಲ್ಲಿ ಕ್ರಾಂತಿ ಮಹಿಳಾ ಮಂಡಳ ಮತ್ತು ಉಮಾ ಸಂಗೀತ ಪ್ರತಿಷ್ಠಾನ ವತಿಯಿಂದ ಈಚೆಗೆ ಆಯೋಜಿಸಲಾದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಮನೆಯ ಬೆಳಗುವ ದೀಪ ಹೆಣ್ಣು. ಈ ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ತನ್ನ ಛಾಪನ್ನು ಮೂಡಿಸುತ್ತಿರುವ ಮಹಿಳೆ ಅಸಾಮಾನ್ಯಳು’ ಎಂದರು.</p>.<p>ಸಂಜೀವ ಪಾಟೀಲ, ಆಶ್ರಯ ಫೌಂಡೇಶನ್ ಸಂಸ್ಥಾಪಕಿ ನಾಗರತ್ನ ರಾಮಗೌಡ ಮಾತನಾಡಿದರು. ಲೇಕ್ವ್ಯೂ ಆಸ್ಪತ್ರೆಯ ವೈದ್ಯೆ ಡಾ.ಸಂಗೀತ, ಡಾ.ಸಂಜೀವ್ ಪಾಟೀಲ ದಂಪತಿಗೆ ಆದರ್ಶ ದಂಪತಿ ಪ್ರಶಸ್ತಿ ನೀಡಲಾಯಿತು. ಚನ್ನಕ್ಕ ಕಾಗತಿಕರ ಮತ್ತು ನೀತಾ ಅಶೋಕ ಕಾಗತಿಕರ್ ಆದರ್ಶ ಅತ್ತೆ– ಸೊಸೆ ಪ್ರಶಸ್ತಿ ಪಡೆದರು.</p>.<p>ವಿದುಷಿ ಸೀಮಾ ಕುಲ್ಕರ್ಣಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಆಶ್ರಮದ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ₹5.52 ಲಕ್ಷದ ಚಕ್ ವಿತರಿಸಲಾಯಿತು. ಆರಾಧನಾ ಸ್ಕೂಲ್ ಮಕ್ಕಳಿಗಾಗಿ ₹5000ದ ಚೆಕ್ ವಿತರಿಸಲಾಯಿತು.</p>.<p>ಅಧ್ಯಕ್ಷೆ ಮಂಗಲಾ ಮಠದ ಸ್ವಾಗತಿಸಿದರು. ಕಾರ್ಯದರ್ಶಿ ಭಾರತಿರತ್ನಪಗೊಳ ಪ್ರಸ್ತಾವಿಕವಾಗಿ ಮಾತನಾಡಿದರು. ತ್ರಿಶಲಾ ಪಾಯಪ್ಪನವರ, ದರ್ಶನ ನಿಲಜಗಿ, ಮಮತಾ ಪತ್ರಾವಳಿ ಪರಚಯಿಸಿದರು. ರೋಹಿಣಿ ಇಂಡಿ, ಡಾ.ರಾಜೇಂದ್ರ ಮಠದ, ಡಾ.ಗುಡಗನಟ್ಟಿ ಇದ್ದರು. ಪುಷ್ಪ ನಿಲಜಗಿ ನಿರೂಪಿಸಿದರು. ಪದ್ಮಜಾ ತುರುಮುಂಡಿ ವಂದಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260401-21-907547214</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಳಗಾವಿ: ‘ಹೆಣ್ಣು ಅಬಲೆಯಲ್ಲ ಸಬಲೆ. ಜಗತ್ತಿನ ಸೃಷ್ಟಿಯ ಮೂಲವೇ ಮಹಿಳೆ. ಅವರು ಮಾಡುವ ಕೆಲಸಗಳಿಗೆ ಅಭಿನಂದಿಸಿ ಪ್ರೋತ್ಸಾಹಿಸಬೇಕೆ ಹೊರತು ತಾರತಮ್ಯ ಮಾಡಬಾರದು’ ಎಂದು ಕೀರ್ತಿ ಶಿವಕುಮಾರ್ ಹೇಳಿದರು.</p>.<p>ನಗರದ ಹಿಂದವಾಡಿಯ ಗೊಮ್ಮಟೇಶ್ ವಿದ್ಯಾಪೀಠದಲ್ಲಿ ಕ್ರಾಂತಿ ಮಹಿಳಾ ಮಂಡಳ ಮತ್ತು ಉಮಾ ಸಂಗೀತ ಪ್ರತಿಷ್ಠಾನ ವತಿಯಿಂದ ಈಚೆಗೆ ಆಯೋಜಿಸಲಾದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಮನೆಯ ಬೆಳಗುವ ದೀಪ ಹೆಣ್ಣು. ಈ ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ತನ್ನ ಛಾಪನ್ನು ಮೂಡಿಸುತ್ತಿರುವ ಮಹಿಳೆ ಅಸಾಮಾನ್ಯಳು’ ಎಂದರು.</p>.<p>ಸಂಜೀವ ಪಾಟೀಲ, ಆಶ್ರಯ ಫೌಂಡೇಶನ್ ಸಂಸ್ಥಾಪಕಿ ನಾಗರತ್ನ ರಾಮಗೌಡ ಮಾತನಾಡಿದರು. ಲೇಕ್ವ್ಯೂ ಆಸ್ಪತ್ರೆಯ ವೈದ್ಯೆ ಡಾ.ಸಂಗೀತ, ಡಾ.ಸಂಜೀವ್ ಪಾಟೀಲ ದಂಪತಿಗೆ ಆದರ್ಶ ದಂಪತಿ ಪ್ರಶಸ್ತಿ ನೀಡಲಾಯಿತು. ಚನ್ನಕ್ಕ ಕಾಗತಿಕರ ಮತ್ತು ನೀತಾ ಅಶೋಕ ಕಾಗತಿಕರ್ ಆದರ್ಶ ಅತ್ತೆ– ಸೊಸೆ ಪ್ರಶಸ್ತಿ ಪಡೆದರು.</p>.<p>ವಿದುಷಿ ಸೀಮಾ ಕುಲ್ಕರ್ಣಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಆಶ್ರಮದ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ₹5.52 ಲಕ್ಷದ ಚಕ್ ವಿತರಿಸಲಾಯಿತು. ಆರಾಧನಾ ಸ್ಕೂಲ್ ಮಕ್ಕಳಿಗಾಗಿ ₹5000ದ ಚೆಕ್ ವಿತರಿಸಲಾಯಿತು.</p>.<p>ಅಧ್ಯಕ್ಷೆ ಮಂಗಲಾ ಮಠದ ಸ್ವಾಗತಿಸಿದರು. ಕಾರ್ಯದರ್ಶಿ ಭಾರತಿರತ್ನಪಗೊಳ ಪ್ರಸ್ತಾವಿಕವಾಗಿ ಮಾತನಾಡಿದರು. ತ್ರಿಶಲಾ ಪಾಯಪ್ಪನವರ, ದರ್ಶನ ನಿಲಜಗಿ, ಮಮತಾ ಪತ್ರಾವಳಿ ಪರಚಯಿಸಿದರು. ರೋಹಿಣಿ ಇಂಡಿ, ಡಾ.ರಾಜೇಂದ್ರ ಮಠದ, ಡಾ.ಗುಡಗನಟ್ಟಿ ಇದ್ದರು. ಪುಷ್ಪ ನಿಲಜಗಿ ನಿರೂಪಿಸಿದರು. ಪದ್ಮಜಾ ತುರುಮುಂಡಿ ವಂದಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260401-21-907547214</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>