<p>ಬೀದರ್: ‘ನಗು ಎನ್ನುವುದು ದೇವರು ಮನುಷ್ಯರಿಗೆ ನೀಡಿದ ಅಮೂಲ್ಯವಾದ ವರ. ಮನಸ್ಸು ಬಿಚ್ಚಿ ಮಾತನಾಡುವುದು ಮತ್ತು ನಗು ಆರೋಗ್ಯಕರ ಜೀವನಕ್ಕೆ ದಿವ್ಯೌಷಧ’ ಎಂದು ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಗಂಗಾಂಬಿಕಾ ಅಕ್ಕ ತಿಳಿಸಿದರು.</p>.<p>ವಿಶ್ವ ನಗೆ ದಿನಾಚರಣೆ ಅಂಗವಾಗಿ ನಗರದ ಪಾಪನಾಶದಲ್ಲಿ ಏರ್ಪಡಿಸಿದ್ದ ನಗೆ ಯೋಗ ಕೂಟದ ಸಾನ್ನಿಧ್ಯ ವಹಿಸಿ ಮಾತನಾಡಿದರು.</p>.<p>‘ಒಳಗೆ ಒಂದು, ಹೊರಗೆ ಒಂದು ರೀತಿಯಲ್ಲಿ ಬದುಕುವವರು ನಿಜವಾದ ಸುಖ ಅನುಭವಿಸಲು ಸಾಧ್ಯವಿಲ್ಲ. ನಗು ಮನಸ್ಸಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಮಾನಸಿಕ ಸಮತೋಲನ ಕಾಪಾಡುತ್ತದೆ’ ಎಂದು ತಿಳಿಸಿದರು.</p>.<p>‘ಶರಣರು ಅನಾದಿ ಕಾಲದಿಂದ ಜನರನ್ನು ನಗಿಸುವ ಕಾಯಕವನ್ನು ಪ್ರೋತ್ಸಾಹಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಲೆಯನ್ನು ಕಾಯಕ ಮಾಡಿಕೊಂಡು ಹಲವರು ಸಮಾಜಕ್ಕೆ ಹಾಸ್ಯ ಮೂಲಕ ಸಂತೋಷ ಹಂಚುತ್ತಿದ್ದಾರೆ. ಹಿರಿಯರ ಅನುಭವ ಸಮಾಜಕ್ಕೆ ಅಮೂಲ್ಯವಾಗಿದ್ದು, ಅವರನ್ನು ಗೌರವಿಸಿ ಕಾಪಾಡುವುದು ನಮ್ಮ ಕರ್ತವ್ಯ’ ಎಂದು ಹೇಳಿದರು.</p>.<p>ಅಮರನಾಥ ಸೋಲಪೂರ್ ಮಾತನಾಡಿ, ನಗುವಿನಿಂದ ಆರೋಗ್ಯದ ಮೇಲೆ ಆಗುವ ಸಕಾರಾತ್ಮಕ ಪರಿಣಾಮಗಳನ್ನು ವಿವರಿಸಿದರು.</p>.<p>ಅಕ್ಕಮಹಾದೇವಿ ಮಹಿಳಾ ನಗೆ ಯೋಗ ಕೂಟವನ್ನು ಗಂಗಾಂಬಿಕಾ ಅಕ್ಕ ಉದ್ಘಾಟಿಸಿದರು. ಸರಸ್ವತಿ ಬೆಳ್ಳಾ ಅಧ್ಯಕ್ಷರಾಗಿ ಆಯ್ಕೆಯಾದರು.</p>.<p>ಈ ಸಂದರ್ಭದಲ್ಲಿ ಸಿದ್ದಯ್ಯ ಕವಡಿಮಠ, ಗಂಗಪ್ಪ ಸಾವಳ, ಶಂಕರ್ ರಾವ್ ಚಿದರಿ, ಅಶೋಕ್ ಕುಮಾರ್ ಕರಂಜಿ, ಸುನೀಲ್ ಗಂಗಾಶ್ರೀ, ಯೋಗೇಂದ್ರ ಯದಲಾಪೂರೆ, ಎಸ್.ಬಿ. ಬಿರಾದಾರ, ದೇಶಪ್ಪ ಬೋರುಗುಡ್ಡೆ, ಪಂಚಾಕ್ಷರಿ ಮಲ್ಲಿಕಾರ್ಜುನ, ಅಶೋಕ್ ಶಾಲಕ್ಕೆ, ಶಿವರಾಜ್ ಬುಕ್ಕ ಸೇರಿದಂತೆ ಇತರರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260505-33-2068553484</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೀದರ್: ‘ನಗು ಎನ್ನುವುದು ದೇವರು ಮನುಷ್ಯರಿಗೆ ನೀಡಿದ ಅಮೂಲ್ಯವಾದ ವರ. ಮನಸ್ಸು ಬಿಚ್ಚಿ ಮಾತನಾಡುವುದು ಮತ್ತು ನಗು ಆರೋಗ್ಯಕರ ಜೀವನಕ್ಕೆ ದಿವ್ಯೌಷಧ’ ಎಂದು ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಗಂಗಾಂಬಿಕಾ ಅಕ್ಕ ತಿಳಿಸಿದರು.</p>.<p>ವಿಶ್ವ ನಗೆ ದಿನಾಚರಣೆ ಅಂಗವಾಗಿ ನಗರದ ಪಾಪನಾಶದಲ್ಲಿ ಏರ್ಪಡಿಸಿದ್ದ ನಗೆ ಯೋಗ ಕೂಟದ ಸಾನ್ನಿಧ್ಯ ವಹಿಸಿ ಮಾತನಾಡಿದರು.</p>.<p>‘ಒಳಗೆ ಒಂದು, ಹೊರಗೆ ಒಂದು ರೀತಿಯಲ್ಲಿ ಬದುಕುವವರು ನಿಜವಾದ ಸುಖ ಅನುಭವಿಸಲು ಸಾಧ್ಯವಿಲ್ಲ. ನಗು ಮನಸ್ಸಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಮಾನಸಿಕ ಸಮತೋಲನ ಕಾಪಾಡುತ್ತದೆ’ ಎಂದು ತಿಳಿಸಿದರು.</p>.<p>‘ಶರಣರು ಅನಾದಿ ಕಾಲದಿಂದ ಜನರನ್ನು ನಗಿಸುವ ಕಾಯಕವನ್ನು ಪ್ರೋತ್ಸಾಹಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಲೆಯನ್ನು ಕಾಯಕ ಮಾಡಿಕೊಂಡು ಹಲವರು ಸಮಾಜಕ್ಕೆ ಹಾಸ್ಯ ಮೂಲಕ ಸಂತೋಷ ಹಂಚುತ್ತಿದ್ದಾರೆ. ಹಿರಿಯರ ಅನುಭವ ಸಮಾಜಕ್ಕೆ ಅಮೂಲ್ಯವಾಗಿದ್ದು, ಅವರನ್ನು ಗೌರವಿಸಿ ಕಾಪಾಡುವುದು ನಮ್ಮ ಕರ್ತವ್ಯ’ ಎಂದು ಹೇಳಿದರು.</p>.<p>ಅಮರನಾಥ ಸೋಲಪೂರ್ ಮಾತನಾಡಿ, ನಗುವಿನಿಂದ ಆರೋಗ್ಯದ ಮೇಲೆ ಆಗುವ ಸಕಾರಾತ್ಮಕ ಪರಿಣಾಮಗಳನ್ನು ವಿವರಿಸಿದರು.</p>.<p>ಅಕ್ಕಮಹಾದೇವಿ ಮಹಿಳಾ ನಗೆ ಯೋಗ ಕೂಟವನ್ನು ಗಂಗಾಂಬಿಕಾ ಅಕ್ಕ ಉದ್ಘಾಟಿಸಿದರು. ಸರಸ್ವತಿ ಬೆಳ್ಳಾ ಅಧ್ಯಕ್ಷರಾಗಿ ಆಯ್ಕೆಯಾದರು.</p>.<p>ಈ ಸಂದರ್ಭದಲ್ಲಿ ಸಿದ್ದಯ್ಯ ಕವಡಿಮಠ, ಗಂಗಪ್ಪ ಸಾವಳ, ಶಂಕರ್ ರಾವ್ ಚಿದರಿ, ಅಶೋಕ್ ಕುಮಾರ್ ಕರಂಜಿ, ಸುನೀಲ್ ಗಂಗಾಶ್ರೀ, ಯೋಗೇಂದ್ರ ಯದಲಾಪೂರೆ, ಎಸ್.ಬಿ. ಬಿರಾದಾರ, ದೇಶಪ್ಪ ಬೋರುಗುಡ್ಡೆ, ಪಂಚಾಕ್ಷರಿ ಮಲ್ಲಿಕಾರ್ಜುನ, ಅಶೋಕ್ ಶಾಲಕ್ಕೆ, ಶಿವರಾಜ್ ಬುಕ್ಕ ಸೇರಿದಂತೆ ಇತರರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260505-33-2068553484</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>