<p>ಬೀದರ್: ‘ವಿದ್ಯಾರ್ಥಿಗಳು ಒಳ್ಳೆಯ ಪ್ರಜೆಗಳಾಗಿ ರೂಪುಗೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು’ ಎಂದು ಡಿವಿಜನ್ ಲೀಡ್ ದೇಶಪಾಂಡೆ ಸ್ಕೀಲಿಂಗ್ ಫೌಂಡೇಷನ್ನ ಅಜೀತ ಕುಲಕರ್ಣಿ ಹೇಳಿದರು.</p>.<p>ನಗರದ ಬಿವಿಬಿ ಕಾಲೇಜಿನಲ್ಲಿ ಎನ್ಎಸ್ಎಸ್ ಶಿಬಿರದ 6ನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘‘ಇಂದಿನ ವಿದ್ಯಾರ್ಥಿಗಳ ತಾವು ಶಿಕ್ಷಣ ಪಡೆದ ನಂತರ ಹುದ್ದೆ ಪಡೆದುಕೊಳ್ಳಲು ದಾರಿ ಹುಡುಕುತ್ತಾ ಕೂಡದೆ ನಮ್ಮ ಫೌಂಡೇಷನ್ನಲ್ಲಿ 3 ತಿಂಗಳು ತರಬೇತಿಯ ನೀಡುವುದರ ಜೊತೆಗೆ ಉದ್ಯೋಗದ ಅವಕಾಶ ಮಾಡಿಕೊಡುತ್ತೇವೆ. ಇದರ ಲಾಭ ಕಲ್ಯಾಣ ಕರ್ನಾಟಕ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು’ ಎಂದರು.</p>.<p>ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಸದಸ್ಯ ಹಾಗೂ ಬಿವಿಬಿ ಶಾಲಾ ಕಾಲೇಜು ಸಂಚಾಲಕ ರಜನೀಶ್ ಎಸ್. ವಾಲಿ, ಪ್ರಾಚಾರ್ಯ ದೀಪಾ ರಾಗ, ಎನ್ಎಸ್ಎಸ್ ಘಟಕದ ಅಧಿಕಾರಿ ಲಕ್ಷ್ಮೀ ವಿಶ್ವನಾಥ, ಬಸವರಾಜ ಎಸ್. ಬಿರಾದಾರ, ಬೋಧಕ, ಬೋಧಕೇತರರ ಸಿಬ್ಬಂದಿಗಳು ಇದ್ದರು.</p>.<p>ಉಪನ್ಯಾಸಕಿ ಮೀನಾಕ್ಷಿ ಕಮಠಾಣೆ ಸ್ವಾಗತಿಸಿದರು. ವೀರೇಂದ್ರ ಜಿಂದೆ ನಿರೂಪಿಸಿದರು. ನೆಹರು ಪವಾರ ವಂದಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260412-33-2117095760</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೀದರ್: ‘ವಿದ್ಯಾರ್ಥಿಗಳು ಒಳ್ಳೆಯ ಪ್ರಜೆಗಳಾಗಿ ರೂಪುಗೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು’ ಎಂದು ಡಿವಿಜನ್ ಲೀಡ್ ದೇಶಪಾಂಡೆ ಸ್ಕೀಲಿಂಗ್ ಫೌಂಡೇಷನ್ನ ಅಜೀತ ಕುಲಕರ್ಣಿ ಹೇಳಿದರು.</p>.<p>ನಗರದ ಬಿವಿಬಿ ಕಾಲೇಜಿನಲ್ಲಿ ಎನ್ಎಸ್ಎಸ್ ಶಿಬಿರದ 6ನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘‘ಇಂದಿನ ವಿದ್ಯಾರ್ಥಿಗಳ ತಾವು ಶಿಕ್ಷಣ ಪಡೆದ ನಂತರ ಹುದ್ದೆ ಪಡೆದುಕೊಳ್ಳಲು ದಾರಿ ಹುಡುಕುತ್ತಾ ಕೂಡದೆ ನಮ್ಮ ಫೌಂಡೇಷನ್ನಲ್ಲಿ 3 ತಿಂಗಳು ತರಬೇತಿಯ ನೀಡುವುದರ ಜೊತೆಗೆ ಉದ್ಯೋಗದ ಅವಕಾಶ ಮಾಡಿಕೊಡುತ್ತೇವೆ. ಇದರ ಲಾಭ ಕಲ್ಯಾಣ ಕರ್ನಾಟಕ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು’ ಎಂದರು.</p>.<p>ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಸದಸ್ಯ ಹಾಗೂ ಬಿವಿಬಿ ಶಾಲಾ ಕಾಲೇಜು ಸಂಚಾಲಕ ರಜನೀಶ್ ಎಸ್. ವಾಲಿ, ಪ್ರಾಚಾರ್ಯ ದೀಪಾ ರಾಗ, ಎನ್ಎಸ್ಎಸ್ ಘಟಕದ ಅಧಿಕಾರಿ ಲಕ್ಷ್ಮೀ ವಿಶ್ವನಾಥ, ಬಸವರಾಜ ಎಸ್. ಬಿರಾದಾರ, ಬೋಧಕ, ಬೋಧಕೇತರರ ಸಿಬ್ಬಂದಿಗಳು ಇದ್ದರು.</p>.<p>ಉಪನ್ಯಾಸಕಿ ಮೀನಾಕ್ಷಿ ಕಮಠಾಣೆ ಸ್ವಾಗತಿಸಿದರು. ವೀರೇಂದ್ರ ಜಿಂದೆ ನಿರೂಪಿಸಿದರು. ನೆಹರು ಪವಾರ ವಂದಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260412-33-2117095760</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>