<p>ಚೆನ್ನೈ: ಇಲ್ಲಿನ ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂ (ಎಸಿಜೆ) ಹಾಗೂ ಮೀಡಿಯಾ ಡೆವಲಪ್ಮೆಂಟ್ ಫೌಂಡೇಷನ್ ನೀಡುವ 2025ನೇ ಸಾಲಿನ ‘ಎಸಿಜೆ ಪತ್ರಿಕೋದ್ಯಮ ಪ್ರಶಸ್ತಿ’ಗೆ ಪತ್ರಕರ್ತರಾದ ಆಯುಷ್ ತಿವಾರಿ, ಜೇನ್ ಅಲ್ಕಾಜಿ ಮತ್ತು ಪತ್ರಿಕಾ ಛಾಯಾಗ್ರಾಹಕ ಸಂಖದೀಪ್ ಬ್ಯಾನರ್ಜಿ ಆಯ್ಕೆಯಾಗಿದ್ದಾರೆ.</p>.<p>ಮೂವರು ಸದಸ್ಯರನ್ನು ಒಳಗೊಂಡ ಸಮಿತಿಯು ಕಾಲೇಜಿನ ಕ್ಯಾಂಪಸ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಗಳನ್ನು ಪ್ರಕಟಿಸಿತು.</p>.<p>ತನಿಖಾ ಪತ್ರಿಕೋದ್ಯಮ ವಿಭಾಗದಲ್ಲಿ ನೀಡುವ ‘ಎಸಿಜೆ–2025’ ಪ್ರಶಸ್ತಿಗೆ ಆಯುಷ್ ತಿವಾರಿ ಅವರು ಭಾಜನರಾಗಿದ್ದಾರೆ. ‘ಸ್ಕ್ರೋಲ್ ಡಾಟ್ ಇನ್’ನಲ್ಲಿ ಪ್ರಕಟವಾದ ‘ಭಾರತದ ಸೈಬರ್ ವಂಚನೆಯ ಪಿಡುಗು ಬಹುಕೋಟಿ ಡಾಲರ್ ಮೊತ್ತದ ಜಾಗತಿಕ ಉದ್ಯಮದ ಒಂದು ಭಾಗ’ ಎಂಬ ವಿಶೇಷ ವರದಿಗೆ ಈ ಪ್ರಶಸ್ತಿ ಸಂದಿದೆ.</p>.<p>ಸಾಮಾಜಿಕ ಪರಿಣಾಮ ಉಂಟು ಮಾಡಿದ ಪತ್ರಿಕೋದ್ಯಮ ವಿಭಾಗದಲ್ಲಿ ನೀಡುವ ‘ಕೆ.ಪಿ. ನಾರಾಯಣ ಕುಮಾರ್ ಸ್ಮಾರಕ ಪ್ರಶಸ್ತಿ’ಯು ಜೇನ್ ಅಲ್ಕಾಜಿ ಅವರಿಗೆ ಸಂದಿದೆ. ‘ದ ಕ್ಯಾರವಾನ್’ನಲ್ಲಿ ಪ್ರಕಟವಾದ ‘ಹಳಿಗಳ ಮೇಲೆ ನೆತ್ತರು: ಪ್ರತಿ ವರ್ಷ ರೈಲ್ವೆ ಹಳಿ ನಿರ್ವಹಣೆಯ ಸುಮಾರು 100 ಸಿಬ್ಬಂದಿ ಕೆಲಸದ ಸಮಯದಲ್ಲಿ ಏಕೆ ಸಾವಿಗೀಡಾಗುತ್ತಿದ್ದಾರೆ?’ ಎಂಬ ವಿಶೇಷ ವರದಿಗೆ ಈ ಪ್ರಶಸ್ತಿ ದೊರೆತಿದೆ.</p>.<p>‘ಆಶೀಷ್ ಯೆಚೂರಿ ಸ್ಮಾರಕ ಪ್ರಶಸ್ತಿ’ಯು ಪತ್ರಿಕಾ ಛಾಯಾಗ್ರಾಹಕ ಸಂಖದೀಪ್ ಬ್ಯಾನರ್ಜಿ ಅವರಿಗೆ ಸಂದಿದೆ. ‘ದ ಇಂಡಿಯನ್ ಎಕ್ಸ್ಪ್ರೆಸ್’ನಲ್ಲಿ ಪ್ರಕಟ ಗೊಂಡ ಮರಾಠಿಗರ ಪ್ರತಿಭಟನೆಯ ‘ವಿಶ್ರಾಂತಿಯಲ್ಲಿರುವ ಪ್ರತಿಭಟನಕಾರರು’ ಎಂಬ ಶೀರ್ಷಿಕೆಯ ಅವರ ಛಾಯಾಚಿತ್ರಕ್ಕೆ ಈ ಪ್ರಶಸ್ತಿ ಸಿಕ್ಕಿದೆ.</p>.<p>ತನಿಖಾ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತರಿಗೆ ₹2 ಲಕ್ಷ ನಗದು ಮತ್ತು ಸ್ಮರಣಿಕೆ, ಸಾಮಾಜಿಕ ಪರಿಣಾಮ ಪ್ರಶಸ್ತಿ ಮತ್ತು ಛಾಯಾಚಿತ್ರ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತರಿಗೆ ತಲಾ ₹1 ಲಕ್ಷ ನಗದು ಮತ್ತು ಸ್ಮರಣಿಕೆ ನೀಡಲಾಗುತ್ತದೆ.</p>.<p>ನಿರೂಪಕಿ ಸೇವಂತಿ ನಿನಾನ್ ಅಧ್ಯಕ್ಷತೆಯ ತೀರ್ಪುಗಾರರ ಸಮಿತಿಯು ಈ ಆಯ್ಕೆಗಳನ್ನು ಮಾಡಿದೆ.</p>.<p>ಪತ್ರಕರ್ತೆ ನಿರುಪಮಾ ಸುಬ್ರಮಣಿಯನ್ ಮತ್ತು ಪತ್ರಿಕಾ ಛಾಯಾಗ್ರಾಹಕ ಸುಧಾರಕ್ ಓಳ್ವೆ ಸದಸ್ಯರಾಗಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260507-51-1696566939</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚೆನ್ನೈ: ಇಲ್ಲಿನ ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂ (ಎಸಿಜೆ) ಹಾಗೂ ಮೀಡಿಯಾ ಡೆವಲಪ್ಮೆಂಟ್ ಫೌಂಡೇಷನ್ ನೀಡುವ 2025ನೇ ಸಾಲಿನ ‘ಎಸಿಜೆ ಪತ್ರಿಕೋದ್ಯಮ ಪ್ರಶಸ್ತಿ’ಗೆ ಪತ್ರಕರ್ತರಾದ ಆಯುಷ್ ತಿವಾರಿ, ಜೇನ್ ಅಲ್ಕಾಜಿ ಮತ್ತು ಪತ್ರಿಕಾ ಛಾಯಾಗ್ರಾಹಕ ಸಂಖದೀಪ್ ಬ್ಯಾನರ್ಜಿ ಆಯ್ಕೆಯಾಗಿದ್ದಾರೆ.</p>.<p>ಮೂವರು ಸದಸ್ಯರನ್ನು ಒಳಗೊಂಡ ಸಮಿತಿಯು ಕಾಲೇಜಿನ ಕ್ಯಾಂಪಸ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಗಳನ್ನು ಪ್ರಕಟಿಸಿತು.</p>.<p>ತನಿಖಾ ಪತ್ರಿಕೋದ್ಯಮ ವಿಭಾಗದಲ್ಲಿ ನೀಡುವ ‘ಎಸಿಜೆ–2025’ ಪ್ರಶಸ್ತಿಗೆ ಆಯುಷ್ ತಿವಾರಿ ಅವರು ಭಾಜನರಾಗಿದ್ದಾರೆ. ‘ಸ್ಕ್ರೋಲ್ ಡಾಟ್ ಇನ್’ನಲ್ಲಿ ಪ್ರಕಟವಾದ ‘ಭಾರತದ ಸೈಬರ್ ವಂಚನೆಯ ಪಿಡುಗು ಬಹುಕೋಟಿ ಡಾಲರ್ ಮೊತ್ತದ ಜಾಗತಿಕ ಉದ್ಯಮದ ಒಂದು ಭಾಗ’ ಎಂಬ ವಿಶೇಷ ವರದಿಗೆ ಈ ಪ್ರಶಸ್ತಿ ಸಂದಿದೆ.</p>.<p>ಸಾಮಾಜಿಕ ಪರಿಣಾಮ ಉಂಟು ಮಾಡಿದ ಪತ್ರಿಕೋದ್ಯಮ ವಿಭಾಗದಲ್ಲಿ ನೀಡುವ ‘ಕೆ.ಪಿ. ನಾರಾಯಣ ಕುಮಾರ್ ಸ್ಮಾರಕ ಪ್ರಶಸ್ತಿ’ಯು ಜೇನ್ ಅಲ್ಕಾಜಿ ಅವರಿಗೆ ಸಂದಿದೆ. ‘ದ ಕ್ಯಾರವಾನ್’ನಲ್ಲಿ ಪ್ರಕಟವಾದ ‘ಹಳಿಗಳ ಮೇಲೆ ನೆತ್ತರು: ಪ್ರತಿ ವರ್ಷ ರೈಲ್ವೆ ಹಳಿ ನಿರ್ವಹಣೆಯ ಸುಮಾರು 100 ಸಿಬ್ಬಂದಿ ಕೆಲಸದ ಸಮಯದಲ್ಲಿ ಏಕೆ ಸಾವಿಗೀಡಾಗುತ್ತಿದ್ದಾರೆ?’ ಎಂಬ ವಿಶೇಷ ವರದಿಗೆ ಈ ಪ್ರಶಸ್ತಿ ದೊರೆತಿದೆ.</p>.<p>‘ಆಶೀಷ್ ಯೆಚೂರಿ ಸ್ಮಾರಕ ಪ್ರಶಸ್ತಿ’ಯು ಪತ್ರಿಕಾ ಛಾಯಾಗ್ರಾಹಕ ಸಂಖದೀಪ್ ಬ್ಯಾನರ್ಜಿ ಅವರಿಗೆ ಸಂದಿದೆ. ‘ದ ಇಂಡಿಯನ್ ಎಕ್ಸ್ಪ್ರೆಸ್’ನಲ್ಲಿ ಪ್ರಕಟ ಗೊಂಡ ಮರಾಠಿಗರ ಪ್ರತಿಭಟನೆಯ ‘ವಿಶ್ರಾಂತಿಯಲ್ಲಿರುವ ಪ್ರತಿಭಟನಕಾರರು’ ಎಂಬ ಶೀರ್ಷಿಕೆಯ ಅವರ ಛಾಯಾಚಿತ್ರಕ್ಕೆ ಈ ಪ್ರಶಸ್ತಿ ಸಿಕ್ಕಿದೆ.</p>.<p>ತನಿಖಾ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತರಿಗೆ ₹2 ಲಕ್ಷ ನಗದು ಮತ್ತು ಸ್ಮರಣಿಕೆ, ಸಾಮಾಜಿಕ ಪರಿಣಾಮ ಪ್ರಶಸ್ತಿ ಮತ್ತು ಛಾಯಾಚಿತ್ರ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತರಿಗೆ ತಲಾ ₹1 ಲಕ್ಷ ನಗದು ಮತ್ತು ಸ್ಮರಣಿಕೆ ನೀಡಲಾಗುತ್ತದೆ.</p>.<p>ನಿರೂಪಕಿ ಸೇವಂತಿ ನಿನಾನ್ ಅಧ್ಯಕ್ಷತೆಯ ತೀರ್ಪುಗಾರರ ಸಮಿತಿಯು ಈ ಆಯ್ಕೆಗಳನ್ನು ಮಾಡಿದೆ.</p>.<p>ಪತ್ರಕರ್ತೆ ನಿರುಪಮಾ ಸುಬ್ರಮಣಿಯನ್ ಮತ್ತು ಪತ್ರಿಕಾ ಛಾಯಾಗ್ರಾಹಕ ಸುಧಾರಕ್ ಓಳ್ವೆ ಸದಸ್ಯರಾಗಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260507-51-1696566939</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>