<p>ಆಲ್ದೂರು: ಇಲ್ಲಿನ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಬೇಸಿಗೆ ಬೆಸುಗೆ ಶಿಬಿರದಲ್ಲಿ ಫೋಟೋಗ್ರಫಿ ಕುರಿತ ಕಾರ್ಯಾಗಾರ ನಡೆಯಿತು</p>.<p>ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಂಶೂನ್ ನಹರ್ ಕಾರ್ಯಾಗಾರವನ್ನು ಉದ್ಘಾಟಿಸಿದರು.</p>.<p>ಬೆಂಗಳೂರಿನ ವನ್ಯಜೀವಿ ಛಾಯಾಗ್ರಾಹಕ ಮ್ಯಾಥ್ಯೂ ಅವರು, ಫೋಟೊಗಳನ್ನು ತೆಗೆಯುವಾಗ ಬಳಸಬೇಕಾದ ಎಚ್ಚರಿಕೆ, ಫೋನ್ಗಳಲ್ಲಿ ಫೋಟೊ ತೆಗೆಯುವ ವಿಧಾನ ಮತ್ತು ಹೆಚ್ಚಿನ ತಾಂತ್ರಿಕತೆ ಹೊಂದಿರುವ ಕ್ಯಾಮೆರಾಗಳ ಮಾಹಿತಿ, ಕ್ಯಾಮೆರಾಗಳಲ್ಲಿ ಇರುವಂತಹ ಸೆಟ್ಟಿಂಗ್ಸ್ಗಳನ್ನು ಬಳಸಿ ಗುಣಮಟ್ಟದ ಛಾಯಾಚಿತ್ರ ತೆಗೆಯುವ ರೀತಿಯನ್ನು ತಿಳಿಸಿದರು.</p>.<p>ಬಸರವಳ್ಳಿ, ಆಲ್ದೂರು, ಸತ್ತಿಹಳ್ಳಿ, ದೊಡ್ಡ ಮಾಗರವಳ್ಳಿ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಿಂದ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.</p>.<p>ಛಾಯಾಗ್ರಾಹಕ ಮ್ಯಾಥ್ಯೂ ಅವರನ್ನು ಗ್ರಾಮ ಪಂಚಾಯಿತಿ ವತಿಯಿಂದ ಸನ್ಮಾನಿಸಲಾಯಿತು. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.</p>.<p>ಗ್ರಂಥಪಾಲಕರಾದ ಕೆಂಚಯ್ಯ ಆಲ್ದೂರು, ಪೂರ್ಣೇಶ್ ಬೈಗೂರು, ರಾಗಿಣಿ ಡಿ.ಪಿ., ಶಬನಂ ಸತ್ತಿಹಳ್ಳಿ, ಗೀತಾ ಬಸರವಳ್ಳಿ, ಪಂಚಾಯಿತಿ ಮಾಜಿ ಸದಸ್ಯರಾದ ಪ್ರತಿಭಾ ನವೀನ್, ಬಿಲ್ ಕಲೆಕ್ಟರ್ ಮಂಜುನಾಥ್, ಡಿಇಒ ವಾಣಿ, ಸಿಬ್ಬಂದಿ ಪೂರ್ಣೇಶ್ ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260424-126-423343281</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಆಲ್ದೂರು: ಇಲ್ಲಿನ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಬೇಸಿಗೆ ಬೆಸುಗೆ ಶಿಬಿರದಲ್ಲಿ ಫೋಟೋಗ್ರಫಿ ಕುರಿತ ಕಾರ್ಯಾಗಾರ ನಡೆಯಿತು</p>.<p>ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಂಶೂನ್ ನಹರ್ ಕಾರ್ಯಾಗಾರವನ್ನು ಉದ್ಘಾಟಿಸಿದರು.</p>.<p>ಬೆಂಗಳೂರಿನ ವನ್ಯಜೀವಿ ಛಾಯಾಗ್ರಾಹಕ ಮ್ಯಾಥ್ಯೂ ಅವರು, ಫೋಟೊಗಳನ್ನು ತೆಗೆಯುವಾಗ ಬಳಸಬೇಕಾದ ಎಚ್ಚರಿಕೆ, ಫೋನ್ಗಳಲ್ಲಿ ಫೋಟೊ ತೆಗೆಯುವ ವಿಧಾನ ಮತ್ತು ಹೆಚ್ಚಿನ ತಾಂತ್ರಿಕತೆ ಹೊಂದಿರುವ ಕ್ಯಾಮೆರಾಗಳ ಮಾಹಿತಿ, ಕ್ಯಾಮೆರಾಗಳಲ್ಲಿ ಇರುವಂತಹ ಸೆಟ್ಟಿಂಗ್ಸ್ಗಳನ್ನು ಬಳಸಿ ಗುಣಮಟ್ಟದ ಛಾಯಾಚಿತ್ರ ತೆಗೆಯುವ ರೀತಿಯನ್ನು ತಿಳಿಸಿದರು.</p>.<p>ಬಸರವಳ್ಳಿ, ಆಲ್ದೂರು, ಸತ್ತಿಹಳ್ಳಿ, ದೊಡ್ಡ ಮಾಗರವಳ್ಳಿ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಿಂದ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.</p>.<p>ಛಾಯಾಗ್ರಾಹಕ ಮ್ಯಾಥ್ಯೂ ಅವರನ್ನು ಗ್ರಾಮ ಪಂಚಾಯಿತಿ ವತಿಯಿಂದ ಸನ್ಮಾನಿಸಲಾಯಿತು. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.</p>.<p>ಗ್ರಂಥಪಾಲಕರಾದ ಕೆಂಚಯ್ಯ ಆಲ್ದೂರು, ಪೂರ್ಣೇಶ್ ಬೈಗೂರು, ರಾಗಿಣಿ ಡಿ.ಪಿ., ಶಬನಂ ಸತ್ತಿಹಳ್ಳಿ, ಗೀತಾ ಬಸರವಳ್ಳಿ, ಪಂಚಾಯಿತಿ ಮಾಜಿ ಸದಸ್ಯರಾದ ಪ್ರತಿಭಾ ನವೀನ್, ಬಿಲ್ ಕಲೆಕ್ಟರ್ ಮಂಜುನಾಥ್, ಡಿಇಒ ವಾಣಿ, ಸಿಬ್ಬಂದಿ ಪೂರ್ಣೇಶ್ ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260424-126-423343281</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>