<p><strong>ಚಿಕ್ಕೋಡಿ</strong>: ತಾಲ್ಲೂಕಿನ ಧುಳಗನವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಬೇಸಿಗೆ ಶಿಬಿರ ನಡೆಸಲಾಗುತ್ತಿದೆ. 1 ರಿಂದ 7ನೇ ತರಗತಿಯ 65 ಮಕ್ಕಳು ಭಾಗವಹಿಸಿದ್ದು, ಚಿತ್ರಕಲೆ, ಯೋಗ, ಧ್ಯಾನ, ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಣೆಯನ್ನು ಉಚಿತವಾಗಿ ಹೇಳಿಕೊಡಲಾಗುತ್ತಿದೆ.</p>.<p>ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ವಿಶ್ವನಾಥ ಧುಮಾಳ ನೇತೃತ್ವದಲ್ಲಿ ನಡೆಯುತ್ತಿರುವ ಶಿಬಿರದಲ್ಲಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಲಾಗುತ್ತದೆ. ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ 7.30ರವರೆಗೆ ವ್ಯಾಯಾಮ, ಯೋಗ, ಧ್ಯಾನ, ಟ್ರಕ್ಕಿಂಗ್ ಹೇಳಿಕೊಡಲಾಗುತ್ತಿದೆ. 8 ಗಂಟೆಯಿಂದ 10 ಗಂಟೆಯವರೆಗೆ ಇಂಗ್ಲಿಷ್ ಭಾಷಾಜ್ಞಾನ ಕಲಿಸಲಾಗುತ್ತದೆ.</p>.<p>10.30 ರಿಂದ 12.30ರವರೆಗೆ ಗಣಿತ ಮತ್ತು ವಿಜ್ಞಾನ ವಿಷಯ ಹೇಳಿಕೊಡಲಾಗುತ್ತದೆ. ಮಧ್ಯಾಹ್ನ 12.30 ರಿಂದ 1.30ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಣೆ, ಭಾಷಣ, ನಾಟಕ ಅಭಿನಯ ಹೇಳಿಕೊಡಲಾಗುತ್ತಿದೆ. ರಜೆಯ ಮಜಾದೊಂದಿಗೆ ಕಲಿಕೆಯಲ್ಲಿ ಮಕ್ಕಳನ್ನು ತೊಡಗಿಸಿರುವ ಸರ್ಕಾರಿ ಶಾಲೆಯ ಉಚಿತ ಬೇಸಿಗೆ ಶಿಬಿರ ಪಾಲಕರ ಮೆಚ್ಚುಗೆಯನ್ನು ಪಡೆದಿದೆ.</p>.<p>ಧುಳಗನವಾಡಿ ಗ್ರಾಮದ ನಿವಾಸಿಗಳು ಹಾಗೂ ಕಲಾವಿದರಾದ ಸುಜಾತ ಮಗದುಮ್ಮ ಹಾಗೂ ಸುಪ್ರಿಯಾ ಕಲಾಚಂದ್ರ ಎಂಬ ಇಬ್ಬರು ಯುವತಿಯರು ಯಾವುದೇ ವೇತನ ಪಡೆಯದೇ ಶಿಬಿರದಲ್ಲಿ ಮಕ್ಕಳಿಗೆ ಅಭಿನಯ, ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಣೆಯನ್ನು ಉಚಿತವಾಗಿ ಹೇಳಿಕೊಡುತ್ತಿದ್ದಾರೆ.</p>.<p>ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ವಿಶ್ವನಾಥ ಧುಮಾಳ ಅವರು ಮೂವರು ಅತಿಥಿ ಶಿಕ್ಷಕರ ಎರಡು ತಿಂಗಳ ವೇತವನ್ನು ತಾವೇ ಭರಿಸುತ್ತಿದ್ದಾರೆ. ಧುಳಗನವಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 75 ವಿದ್ಯಾರ್ಥಿಗಳ ಪೈಕಿ 65 ವಿದ್ಯಾರ್ಥಿಗಳು ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ್ದಾರೆ.</p>.<p>ಬೇಸಿಗೆ ಶಿಬಿರ ಆಯೋಜನೆ ಮಾಡುವದರೊಂದಿಗೆ 2026–27ನೇ ಸಾಲಿನಲ್ಲಿ ಶಾಲಾ ದಾಖಲಾತಿ ಮಾಡಿಕೊಳ್ಳಲು ಕರಪತ್ರ ಹಂಚಿಕೆ, ಫ್ಲೆಕ್ಸ್ ಅಳವಡಿಕೆಯನ್ನು ಗ್ರಾಮ ಹಾಗೂ ತೋಟದ ವಸತಿ ಪ್ರದೇಶದಲ್ಲಿ ಕೈಗೊಳ್ಳಲಾಗಿದೆ. ಮನೆ ಮನೆಗೂ ಕರಪತ್ರ ಹಂಚಿಕೆ ಮಾಡುವ ಮೂಲಕ ಖಾಸಗಿ ಶಾಲೆಗಳಿಗೆ ಗ್ರಾಮದ ಸರ್ಕಾರಿ ಶಾಲೆಯ ಪೈಪೋಟಿ ಒಡ್ಡುತ್ತಿರುವುದು ಸುತ್ತಮುತ್ತಲಿನ ಗ್ರಾಮಸ್ಥರು ತಮ್ಮ ಮಕ್ಕಳನ್ನು ಧುಳಗನವಾಡಿಯ ಸರ್ಕಾರಿ ಶಾಲೆಗೆ ಸೇರಿಸಲು ಮುಂದೆ ಬಂದಿದ್ದಾರೆ.</p>.<div><blockquote>6 ತಿಂಗಳ ಹಿಂದಷ್ಟೇ ಈ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿರುವೆ. ಬೇಸಿಗೆ ಶಿಬಿರ ಆಯೋಜನೆಯಿಂದ ದಾಖಲಾತಿ, ಹಾಜರಾತಿ, ಕಲಿಕಾ ಗುಣಮಟ್ಟ ಹೆಚ್ಚಳವಾಗುತ್ತಿದೆ </blockquote><span class="attribution">ವಿಶ್ವನಾಥ ಧುಮಾಳ, ಪ್ರಭಾರಿ ಮುಖ್ಯ ಶಿಕ್ಷಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಧುಳಗನವಾಡಿ</span></div>.<div><blockquote>ಬೇಸಿಗೆ ಶಿಬಿರದಲ್ಲಿ ಯೋಗ, ಧ್ಯಾನ, ಅಭಿನಯ, ಟ್ರಕ್ಕಿಂಗ್ ಹೇಳಿಕೊಡುವದಷ್ಟೇ ಅಲ್ಲದೇ, ಇಂಗ್ಲಿಷ್, ವಿಜ್ಞಾನ, ಗಣಿತ ಪಾಠವನ್ನು ಹೇಳಿಕೊಡುತ್ತಿರುವುದು ಹೆಮ್ಮೆಯ ಸಂಗತಿ </blockquote><span class="attribution"> ರಕ್ಷಿತಾ ಮಗದುಮ್ಮ, 7ನೇ ತರಗತಿ ವಿದ್ಯಾರ್ಥಿನಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕೋಡಿ</strong>: ತಾಲ್ಲೂಕಿನ ಧುಳಗನವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಬೇಸಿಗೆ ಶಿಬಿರ ನಡೆಸಲಾಗುತ್ತಿದೆ. 1 ರಿಂದ 7ನೇ ತರಗತಿಯ 65 ಮಕ್ಕಳು ಭಾಗವಹಿಸಿದ್ದು, ಚಿತ್ರಕಲೆ, ಯೋಗ, ಧ್ಯಾನ, ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಣೆಯನ್ನು ಉಚಿತವಾಗಿ ಹೇಳಿಕೊಡಲಾಗುತ್ತಿದೆ.</p>.<p>ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ವಿಶ್ವನಾಥ ಧುಮಾಳ ನೇತೃತ್ವದಲ್ಲಿ ನಡೆಯುತ್ತಿರುವ ಶಿಬಿರದಲ್ಲಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಲಾಗುತ್ತದೆ. ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ 7.30ರವರೆಗೆ ವ್ಯಾಯಾಮ, ಯೋಗ, ಧ್ಯಾನ, ಟ್ರಕ್ಕಿಂಗ್ ಹೇಳಿಕೊಡಲಾಗುತ್ತಿದೆ. 8 ಗಂಟೆಯಿಂದ 10 ಗಂಟೆಯವರೆಗೆ ಇಂಗ್ಲಿಷ್ ಭಾಷಾಜ್ಞಾನ ಕಲಿಸಲಾಗುತ್ತದೆ.</p>.<p>10.30 ರಿಂದ 12.30ರವರೆಗೆ ಗಣಿತ ಮತ್ತು ವಿಜ್ಞಾನ ವಿಷಯ ಹೇಳಿಕೊಡಲಾಗುತ್ತದೆ. ಮಧ್ಯಾಹ್ನ 12.30 ರಿಂದ 1.30ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಣೆ, ಭಾಷಣ, ನಾಟಕ ಅಭಿನಯ ಹೇಳಿಕೊಡಲಾಗುತ್ತಿದೆ. ರಜೆಯ ಮಜಾದೊಂದಿಗೆ ಕಲಿಕೆಯಲ್ಲಿ ಮಕ್ಕಳನ್ನು ತೊಡಗಿಸಿರುವ ಸರ್ಕಾರಿ ಶಾಲೆಯ ಉಚಿತ ಬೇಸಿಗೆ ಶಿಬಿರ ಪಾಲಕರ ಮೆಚ್ಚುಗೆಯನ್ನು ಪಡೆದಿದೆ.</p>.<p>ಧುಳಗನವಾಡಿ ಗ್ರಾಮದ ನಿವಾಸಿಗಳು ಹಾಗೂ ಕಲಾವಿದರಾದ ಸುಜಾತ ಮಗದುಮ್ಮ ಹಾಗೂ ಸುಪ್ರಿಯಾ ಕಲಾಚಂದ್ರ ಎಂಬ ಇಬ್ಬರು ಯುವತಿಯರು ಯಾವುದೇ ವೇತನ ಪಡೆಯದೇ ಶಿಬಿರದಲ್ಲಿ ಮಕ್ಕಳಿಗೆ ಅಭಿನಯ, ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಣೆಯನ್ನು ಉಚಿತವಾಗಿ ಹೇಳಿಕೊಡುತ್ತಿದ್ದಾರೆ.</p>.<p>ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ವಿಶ್ವನಾಥ ಧುಮಾಳ ಅವರು ಮೂವರು ಅತಿಥಿ ಶಿಕ್ಷಕರ ಎರಡು ತಿಂಗಳ ವೇತವನ್ನು ತಾವೇ ಭರಿಸುತ್ತಿದ್ದಾರೆ. ಧುಳಗನವಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 75 ವಿದ್ಯಾರ್ಥಿಗಳ ಪೈಕಿ 65 ವಿದ್ಯಾರ್ಥಿಗಳು ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ್ದಾರೆ.</p>.<p>ಬೇಸಿಗೆ ಶಿಬಿರ ಆಯೋಜನೆ ಮಾಡುವದರೊಂದಿಗೆ 2026–27ನೇ ಸಾಲಿನಲ್ಲಿ ಶಾಲಾ ದಾಖಲಾತಿ ಮಾಡಿಕೊಳ್ಳಲು ಕರಪತ್ರ ಹಂಚಿಕೆ, ಫ್ಲೆಕ್ಸ್ ಅಳವಡಿಕೆಯನ್ನು ಗ್ರಾಮ ಹಾಗೂ ತೋಟದ ವಸತಿ ಪ್ರದೇಶದಲ್ಲಿ ಕೈಗೊಳ್ಳಲಾಗಿದೆ. ಮನೆ ಮನೆಗೂ ಕರಪತ್ರ ಹಂಚಿಕೆ ಮಾಡುವ ಮೂಲಕ ಖಾಸಗಿ ಶಾಲೆಗಳಿಗೆ ಗ್ರಾಮದ ಸರ್ಕಾರಿ ಶಾಲೆಯ ಪೈಪೋಟಿ ಒಡ್ಡುತ್ತಿರುವುದು ಸುತ್ತಮುತ್ತಲಿನ ಗ್ರಾಮಸ್ಥರು ತಮ್ಮ ಮಕ್ಕಳನ್ನು ಧುಳಗನವಾಡಿಯ ಸರ್ಕಾರಿ ಶಾಲೆಗೆ ಸೇರಿಸಲು ಮುಂದೆ ಬಂದಿದ್ದಾರೆ.</p>.<div><blockquote>6 ತಿಂಗಳ ಹಿಂದಷ್ಟೇ ಈ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿರುವೆ. ಬೇಸಿಗೆ ಶಿಬಿರ ಆಯೋಜನೆಯಿಂದ ದಾಖಲಾತಿ, ಹಾಜರಾತಿ, ಕಲಿಕಾ ಗುಣಮಟ್ಟ ಹೆಚ್ಚಳವಾಗುತ್ತಿದೆ </blockquote><span class="attribution">ವಿಶ್ವನಾಥ ಧುಮಾಳ, ಪ್ರಭಾರಿ ಮುಖ್ಯ ಶಿಕ್ಷಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಧುಳಗನವಾಡಿ</span></div>.<div><blockquote>ಬೇಸಿಗೆ ಶಿಬಿರದಲ್ಲಿ ಯೋಗ, ಧ್ಯಾನ, ಅಭಿನಯ, ಟ್ರಕ್ಕಿಂಗ್ ಹೇಳಿಕೊಡುವದಷ್ಟೇ ಅಲ್ಲದೇ, ಇಂಗ್ಲಿಷ್, ವಿಜ್ಞಾನ, ಗಣಿತ ಪಾಠವನ್ನು ಹೇಳಿಕೊಡುತ್ತಿರುವುದು ಹೆಮ್ಮೆಯ ಸಂಗತಿ </blockquote><span class="attribution"> ರಕ್ಷಿತಾ ಮಗದುಮ್ಮ, 7ನೇ ತರಗತಿ ವಿದ್ಯಾರ್ಥಿನಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>