<p>ದಾವಣಗೆರೆ: ‘ಹರ ಎಜುಕೇಷನಲ್ ಟ್ರಸ್ಟ್ನ ಡಾ. ಮಹಾಂತಸ್ವಾಮಿ ಪದವಿಪೂರ್ವ ಕಾಲೇಜಿಗೂ ಹರಿಹರದ ಪಂಚಮಸಾಲಿ ಪೀಠ ಅಥವಾ ವಚನಾನಂದ ಸ್ವಾಮೀಜಿಗೂ ಯಾವುದೇ ಸಂಬಂಧವಿಲ್ಲ’ ಎಂದು ಹರ ಎಜುಕೇಷನಲ್ ಟ್ರಸ್ಟ್ನ ಕಾರ್ಯದರ್ಶಿ ಅಂದನೂರು ಆನಂದ್ ಕುಮಾರ್ ಹೇಳಿದರು.</p>.<p>‘ಹರ ಎಜುಕೇಷನಲ್ ಟ್ರಸ್ಟ್ 16 ಜನ ಸದಸ್ಯರನ್ನು ಹೊಂದಿದೆ. ಸಮುದಾಯದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಡಾ. ಮಹಾಂತಸ್ವಾಮಿ ಹೆಸರಿನಲ್ಲಿ ಕಾಲೇಜು ಆರಂಭಿಸಲಾಗಿದೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>‘ಪಂಚಮಸಾಲಿ ಮಠದಿಂದ ಕಾಲೇಜಿಗೆ ಭೂಮಿಯಾಗಲೀ, ದೇಣಿಗೆಯಾಗಲೀ ಪಡೆದಿಲ್ಲ. ಕಾಲೇಜಿನಿಂದ ಹರ ಜಾತ್ರೆಗೆ ಬಸ್ಗಳನ್ನು ಕಳಿಸಿದ್ದೆವು. ಮಠದಿಂದ ಯಾವುದೇ ಪ್ರಯೋಜನ ಪಡೆದಿಲ್ಲ’ ಎಂದು ಸ್ಪಷ್ಟಪಡಿಸಿದರು.</p>.<p>‘ವಿದ್ಯಾರ್ಥಿಗಳಿಗಾಗಿ ಎರಡು ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಮಾಡಲಾಗಿದೆ. ಟ್ರಸ್ಟಿನ ಎಲ್ಲಾ ಸದಸ್ಯರು ಪ್ರತಿ ತಿಂಗಳು ದೇಣಿಗೆ ನೀಡುತ್ತಾ ಬರುತ್ತಿದ್ದು, ಟ್ರಸ್ಟಿನ ವತಿಯಿಂದ ಆಡಿಟ್ ವರದಿಯನ್ನು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸುತ್ತಿದ್ದೇವೆ’ ಎಂದರು.</p>.<p>ಟ್ರಸ್ಟ್ ಸದಸ್ಯರಾದ ಎಸ್.ಕೆ. ಶ್ರೀಧರ್, ವಾಣಿ ಶಿವಣ್ಣ, ಎಂ.ದೊಡ್ಡಪ್ಪ, ಅಂದನೂರು ಮುರುಗೇಶಪ್ಪ, ಕೆ.ಎನ್. ರಾಜು ಕಡೆಕೊಪ್ಪ, ಬಾದಾಮಿ ಜಯಣ್ಣ, ಎಚ್.ಎಂ.ನಾಗರಾಜ್, ಎಚ್.ಎಸ್. ಅವ್ವಣ್ಣಪ್ಪ, ಅಂದನೂರು ಕೆ.ರುದ್ರಮನಿ, ಕೆ.ಶಿವಕುಮಾರ್ ಇತರರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260416-43-890131504</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದಾವಣಗೆರೆ: ‘ಹರ ಎಜುಕೇಷನಲ್ ಟ್ರಸ್ಟ್ನ ಡಾ. ಮಹಾಂತಸ್ವಾಮಿ ಪದವಿಪೂರ್ವ ಕಾಲೇಜಿಗೂ ಹರಿಹರದ ಪಂಚಮಸಾಲಿ ಪೀಠ ಅಥವಾ ವಚನಾನಂದ ಸ್ವಾಮೀಜಿಗೂ ಯಾವುದೇ ಸಂಬಂಧವಿಲ್ಲ’ ಎಂದು ಹರ ಎಜುಕೇಷನಲ್ ಟ್ರಸ್ಟ್ನ ಕಾರ್ಯದರ್ಶಿ ಅಂದನೂರು ಆನಂದ್ ಕುಮಾರ್ ಹೇಳಿದರು.</p>.<p>‘ಹರ ಎಜುಕೇಷನಲ್ ಟ್ರಸ್ಟ್ 16 ಜನ ಸದಸ್ಯರನ್ನು ಹೊಂದಿದೆ. ಸಮುದಾಯದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಡಾ. ಮಹಾಂತಸ್ವಾಮಿ ಹೆಸರಿನಲ್ಲಿ ಕಾಲೇಜು ಆರಂಭಿಸಲಾಗಿದೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>‘ಪಂಚಮಸಾಲಿ ಮಠದಿಂದ ಕಾಲೇಜಿಗೆ ಭೂಮಿಯಾಗಲೀ, ದೇಣಿಗೆಯಾಗಲೀ ಪಡೆದಿಲ್ಲ. ಕಾಲೇಜಿನಿಂದ ಹರ ಜಾತ್ರೆಗೆ ಬಸ್ಗಳನ್ನು ಕಳಿಸಿದ್ದೆವು. ಮಠದಿಂದ ಯಾವುದೇ ಪ್ರಯೋಜನ ಪಡೆದಿಲ್ಲ’ ಎಂದು ಸ್ಪಷ್ಟಪಡಿಸಿದರು.</p>.<p>‘ವಿದ್ಯಾರ್ಥಿಗಳಿಗಾಗಿ ಎರಡು ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಮಾಡಲಾಗಿದೆ. ಟ್ರಸ್ಟಿನ ಎಲ್ಲಾ ಸದಸ್ಯರು ಪ್ರತಿ ತಿಂಗಳು ದೇಣಿಗೆ ನೀಡುತ್ತಾ ಬರುತ್ತಿದ್ದು, ಟ್ರಸ್ಟಿನ ವತಿಯಿಂದ ಆಡಿಟ್ ವರದಿಯನ್ನು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸುತ್ತಿದ್ದೇವೆ’ ಎಂದರು.</p>.<p>ಟ್ರಸ್ಟ್ ಸದಸ್ಯರಾದ ಎಸ್.ಕೆ. ಶ್ರೀಧರ್, ವಾಣಿ ಶಿವಣ್ಣ, ಎಂ.ದೊಡ್ಡಪ್ಪ, ಅಂದನೂರು ಮುರುಗೇಶಪ್ಪ, ಕೆ.ಎನ್. ರಾಜು ಕಡೆಕೊಪ್ಪ, ಬಾದಾಮಿ ಜಯಣ್ಣ, ಎಚ್.ಎಂ.ನಾಗರಾಜ್, ಎಚ್.ಎಸ್. ಅವ್ವಣ್ಣಪ್ಪ, ಅಂದನೂರು ಕೆ.ರುದ್ರಮನಿ, ಕೆ.ಶಿವಕುಮಾರ್ ಇತರರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260416-43-890131504</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>