<p>ದಾವಣಗೆರೆ: ನಗರದ ಎಸ್.ಎಸ್.ಬಡಾವಣೆಯ ‘ಎ’ ಬ್ಲಾಕ್, 5ನೇ ಕ್ರಾಸ್ನಲ್ಲಿರುವ ವಿಶೇಷ ಮಕ್ಕಳ ಆಶಾಕಿರಣ ಟ್ರಸ್ಟ್ನ ಭಾವೈಕ್ಯತಾ ವಸತಿಯುತ ವಿಶೇಷ ಶಾಲೆಯಲ್ಲಿ 2026-27ನೇ ಸಾಲಿಗೆ ಬುದ್ಧಿಮಾಂದ್ಯ ಮಕ್ಕಳನ್ನು ಉಚಿತವಾಗಿ ಸೇರಿಸಿಕೊಳ್ಳಲಾಗುತ್ತದೆ ಎಂದು ಟ್ರಸ್ಟ್ನ ಕಾರ್ಯಾಧ್ಯಕ್ಷ ರಮಣ್ಲಾಲ್ ಪಿ. ಸಂಘವಿ ಮತ್ತು ಗೌರವ ಕಾರ್ಯದರ್ಶಿ ಪೊಪಟ್ ಲಾಲ್ ಜೈನ್ ತಿಳಿಸಿದ್ದಾರೆ.</p>.<p>ಶಾಲೆ ಉತ್ತಮವಾದ ಕಟ್ಟಡ, ಸುಶಿಕ್ಷಿತ ಶಿಕ್ಷಕರನ್ನು ಹೊಂದಿದ್ದು, 6 ರಿಂದ 23 ವರ್ಷ ವಯಸ್ಸಿನ ಬುದ್ಧಿಮಾಂದ್ಯ ಮಕ್ಕಳನ್ನು ಸೇರಿಸಿಕೊಳ್ಳಲಾಗುತ್ತದೆ. ಉಚಿತ ವಸತಿ, ಸಮವಸ್ತ್ರ, ಊಟದ ವ್ಯವಸ್ಥೆ ಇದೆ. ವೈದ್ಯಕೀಯ ಸೇವೆ, ಭೌತಿಕ ವ್ಯಾಯಾಮ, ಯೋಗ ಮತ್ತು ವಿಶೇಷ ಕ್ರೀಡೆಗಳಿಗೆ ಅವಕಾಶವಿದೆ.</p>.<p>ಆಸಕ್ತ ಪೋಷಕರು ಮಗುವಿನ ಯುಡಿಐಡಿ ಕಾರ್ಡ್, ಗುರುತಿನ ಚೀಟಿ, ರೇಷನ್ ಕಾರ್ಡ್, ಆದಾಯ ಪ್ರಮಾಣ ಪತ್ರ, ಫೋಟೊಗಳೊಂದಿಗೆ ಮಕ್ಕಳನ್ನು ಕರೆದುಕೊಂಡು ಬಂದು ಮೌಲ್ಯಮಾಪನ ಮಾಡಿಸಿ ಸೇರಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ದೂ.ಸಂಖ್ಯೆ: 08192 222822 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260531-43-831202795</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದಾವಣಗೆರೆ: ನಗರದ ಎಸ್.ಎಸ್.ಬಡಾವಣೆಯ ‘ಎ’ ಬ್ಲಾಕ್, 5ನೇ ಕ್ರಾಸ್ನಲ್ಲಿರುವ ವಿಶೇಷ ಮಕ್ಕಳ ಆಶಾಕಿರಣ ಟ್ರಸ್ಟ್ನ ಭಾವೈಕ್ಯತಾ ವಸತಿಯುತ ವಿಶೇಷ ಶಾಲೆಯಲ್ಲಿ 2026-27ನೇ ಸಾಲಿಗೆ ಬುದ್ಧಿಮಾಂದ್ಯ ಮಕ್ಕಳನ್ನು ಉಚಿತವಾಗಿ ಸೇರಿಸಿಕೊಳ್ಳಲಾಗುತ್ತದೆ ಎಂದು ಟ್ರಸ್ಟ್ನ ಕಾರ್ಯಾಧ್ಯಕ್ಷ ರಮಣ್ಲಾಲ್ ಪಿ. ಸಂಘವಿ ಮತ್ತು ಗೌರವ ಕಾರ್ಯದರ್ಶಿ ಪೊಪಟ್ ಲಾಲ್ ಜೈನ್ ತಿಳಿಸಿದ್ದಾರೆ.</p>.<p>ಶಾಲೆ ಉತ್ತಮವಾದ ಕಟ್ಟಡ, ಸುಶಿಕ್ಷಿತ ಶಿಕ್ಷಕರನ್ನು ಹೊಂದಿದ್ದು, 6 ರಿಂದ 23 ವರ್ಷ ವಯಸ್ಸಿನ ಬುದ್ಧಿಮಾಂದ್ಯ ಮಕ್ಕಳನ್ನು ಸೇರಿಸಿಕೊಳ್ಳಲಾಗುತ್ತದೆ. ಉಚಿತ ವಸತಿ, ಸಮವಸ್ತ್ರ, ಊಟದ ವ್ಯವಸ್ಥೆ ಇದೆ. ವೈದ್ಯಕೀಯ ಸೇವೆ, ಭೌತಿಕ ವ್ಯಾಯಾಮ, ಯೋಗ ಮತ್ತು ವಿಶೇಷ ಕ್ರೀಡೆಗಳಿಗೆ ಅವಕಾಶವಿದೆ.</p>.<p>ಆಸಕ್ತ ಪೋಷಕರು ಮಗುವಿನ ಯುಡಿಐಡಿ ಕಾರ್ಡ್, ಗುರುತಿನ ಚೀಟಿ, ರೇಷನ್ ಕಾರ್ಡ್, ಆದಾಯ ಪ್ರಮಾಣ ಪತ್ರ, ಫೋಟೊಗಳೊಂದಿಗೆ ಮಕ್ಕಳನ್ನು ಕರೆದುಕೊಂಡು ಬಂದು ಮೌಲ್ಯಮಾಪನ ಮಾಡಿಸಿ ಸೇರಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ದೂ.ಸಂಖ್ಯೆ: 08192 222822 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260531-43-831202795</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>