<p>ಮುನಿರಾಬಾದ್: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ತನ್ನ ಸ್ವ ಸಹಾಯ ಸಂಘದ ಸದಸ್ಯರಿಗೆ ಖಾತೆಯಿಂದ ಹಣ ತೆಗೆದುಕೊಳ್ಳುವ ಶುಲ್ಕ ರಹಿತ ನೂತನ ‘ಡಿಜಿ ಪೇ’ ಪದ್ಧತಿಯನ್ನು ಪರಿಚಯಿಸಿದೆ.</p>.<p>ಸಮೀಪದ ಬೂದುಗುಂಪ ಗ್ರಾಮದಲ್ಲಿ ಬುಧವಾರ ಯೋಜನೆಯ ಸಿ.ಎಸ್.ಸಿ (ಕಾಮನ್ ಸರ್ವಿಸ್ ಸೆಂಟರ್)ನಲ್ಲಿ ನೂತನ ಸೇವೆಗೆ ಚಾಲನೆ ನೀಡಲಾಯಿತು.</p>.<p>ವಲಯದ ಮೇಲ್ವಿಚಾರಕ ರವಿಚಂದ್ರ ಮಾತನಾಡಿ, ‘ಸಂಘದ ಸದಸ್ಯೆಯರು ಬ್ಯಾಂಕ್ ಅಥವಾ ಎಟಿಎಂಗೆ ಹೋಗುವ ಬದಲು ಸಿ.ಎಸ್.ಸಿ ಕೇಂದ್ರಕ್ಕೆ ಬಂದು ಎಟಿಎಂ ಕಾರ್ಡ್ ಸಹಾಯದಿಂದ ತಮ್ಮ ಖಾತೆಯಿಂದ ದಿನಕ್ಕೆ ಗರಿಷ್ಠ ₹20 ಸಾವಿರದವರೆಗೆ ಹಣ ಹಿಂತೆಗೆದುಕೊಳ್ಳಬಹುದು. ಇದಕ್ಕೂ ಮುನ್ನ ಖಾಸಗಿ ವ್ಯಕ್ತಿಗಳಲ್ಲಿ ಹಣ ಹಿಂತೆಗೆದುಕೊಳ್ಳಲು ಶುಲ್ಕ ಭರಿಸಬೇಕಾಗಿತ್ತು. ಆದರೆ ಈ ಕೇಂದ್ರದಲ್ಲಿ ಯಾವುದೇ ಶುಲ್ಕ ನೀಡುವಂತಿಲ್ಲ. ಶುಲ್ಕ, ಪ್ರಯಾಣದ ಖರ್ಚು ಮತ್ತು ಸಮಯವನ್ನು ಕೂಡ ಉಳಿಸಬಹುದು’ ಎಂದರು.</p>.<p>ಪ್ರಮುಖರಾದ ಕರಿಯಪ್ಪ, ಮಲ್ಲೇಶ, ಒಕ್ಕೂಟದ ಅಧ್ಯಕ್ಷೆ ಹುಲಿಗೆಮ್ಮ ಡೊಳ್ಳಿನ್, ಮಲ್ಲಿಕಾರ್ಜುನ, ಸೇವಾ ಪ್ರತಿನಿಧಿಗಳಾದ ದೇವಮ್ಮ, ಪುಷ್ಪಾ ಇತರ ಸಿಬ್ಬಂದಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260413-35-1663293366</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮುನಿರಾಬಾದ್: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ತನ್ನ ಸ್ವ ಸಹಾಯ ಸಂಘದ ಸದಸ್ಯರಿಗೆ ಖಾತೆಯಿಂದ ಹಣ ತೆಗೆದುಕೊಳ್ಳುವ ಶುಲ್ಕ ರಹಿತ ನೂತನ ‘ಡಿಜಿ ಪೇ’ ಪದ್ಧತಿಯನ್ನು ಪರಿಚಯಿಸಿದೆ.</p>.<p>ಸಮೀಪದ ಬೂದುಗುಂಪ ಗ್ರಾಮದಲ್ಲಿ ಬುಧವಾರ ಯೋಜನೆಯ ಸಿ.ಎಸ್.ಸಿ (ಕಾಮನ್ ಸರ್ವಿಸ್ ಸೆಂಟರ್)ನಲ್ಲಿ ನೂತನ ಸೇವೆಗೆ ಚಾಲನೆ ನೀಡಲಾಯಿತು.</p>.<p>ವಲಯದ ಮೇಲ್ವಿಚಾರಕ ರವಿಚಂದ್ರ ಮಾತನಾಡಿ, ‘ಸಂಘದ ಸದಸ್ಯೆಯರು ಬ್ಯಾಂಕ್ ಅಥವಾ ಎಟಿಎಂಗೆ ಹೋಗುವ ಬದಲು ಸಿ.ಎಸ್.ಸಿ ಕೇಂದ್ರಕ್ಕೆ ಬಂದು ಎಟಿಎಂ ಕಾರ್ಡ್ ಸಹಾಯದಿಂದ ತಮ್ಮ ಖಾತೆಯಿಂದ ದಿನಕ್ಕೆ ಗರಿಷ್ಠ ₹20 ಸಾವಿರದವರೆಗೆ ಹಣ ಹಿಂತೆಗೆದುಕೊಳ್ಳಬಹುದು. ಇದಕ್ಕೂ ಮುನ್ನ ಖಾಸಗಿ ವ್ಯಕ್ತಿಗಳಲ್ಲಿ ಹಣ ಹಿಂತೆಗೆದುಕೊಳ್ಳಲು ಶುಲ್ಕ ಭರಿಸಬೇಕಾಗಿತ್ತು. ಆದರೆ ಈ ಕೇಂದ್ರದಲ್ಲಿ ಯಾವುದೇ ಶುಲ್ಕ ನೀಡುವಂತಿಲ್ಲ. ಶುಲ್ಕ, ಪ್ರಯಾಣದ ಖರ್ಚು ಮತ್ತು ಸಮಯವನ್ನು ಕೂಡ ಉಳಿಸಬಹುದು’ ಎಂದರು.</p>.<p>ಪ್ರಮುಖರಾದ ಕರಿಯಪ್ಪ, ಮಲ್ಲೇಶ, ಒಕ್ಕೂಟದ ಅಧ್ಯಕ್ಷೆ ಹುಲಿಗೆಮ್ಮ ಡೊಳ್ಳಿನ್, ಮಲ್ಲಿಕಾರ್ಜುನ, ಸೇವಾ ಪ್ರತಿನಿಧಿಗಳಾದ ದೇವಮ್ಮ, ಪುಷ್ಪಾ ಇತರ ಸಿಬ್ಬಂದಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260413-35-1663293366</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>