<p>ಧಾರವಾಡ: ‘ಜನರ ಸಂಕಷ್ಟಗಳು, ನೋವುಗಳಿಗೆ ಸ್ಪಂದಿಸುವುದರ ಜೊತೆಗೆ ಸಾಹಿತ್ಯ ಕ್ಷೇತ್ರವು ಪರಿಣಾಮಕಾರಿ ಬೆಳವಣಿಗೆ ತರಬೇಕು. ಹೊಸ ಮಾರ್ಗಗಳನ್ನು ಸಾದರಪಡಿಸಬೇಕು’ ಎಂದು ಸಾಹಿತಿ ಪ್ರೊ.ಸಬಿಹಾ ಭೂಮಿಗೌಡ ಹೇಳಿದರು.</p>.<p>ಇಲ್ಲಿ ನಡೆದ ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಸಾಹಿತ್ಯವು ಚಿಕಿತ್ಸಾ ಪದ್ಧತಿ ಇದ್ದಂತೆ. ಸಂಕಷ್ಟ, ದುಃಖಗಳಿಗೆ ಅಕ್ಷರವು ಸ್ಪಂದಿಸುತ್ತದೆ. ಈ ನಿಟ್ಟಿನಲ್ಲಿ ಸಾಹಿತಿಗಳು ಅಲ್ಲದೇ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿರುವ ಸಂಘಸಂಸ್ಥೆಗಳು ಶ್ರಮಿಸಬೇಕು. ಬದ್ಧತೆ ಸಾಬೀತುಪಡಿಸಬೇಕು’ ಎಂದರು.</p>.<p>‘ಮಹಿಳೆಯರ, ಮಕ್ಕಳ ಸಮಸ್ಯೆಗಳಿಗೆ ಅವರೇ ಹೋರಾಟ ಮಾಡಿ ಪರಿಹರಿಸಿಕೊಳ್ಳಲಿ ಎಂಬ ಜಡತ್ವವನ್ನು ಹೋಗಲಾಡಿಸಬೇಕು. ಅವರ ಸಮಸ್ಯೆಗಳೂ ಈ ಸಮಾಜದ ಸಮಸ್ಯೆಗಳು, ಅವರ ಹಕ್ಕುಗಳೂ ಮಾನವತೆಯ ಭಾಗ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸಮಸ್ಯೆಗಳಿಗೆ ಸ್ಪಂದಿಸಲು ಭಾಷಣ ಮತ್ತು ಸಾಹಿತ್ಯದ ಆಚೆ ಹೊಸದನ್ನು ಮಾಡಬೇಕು’ ಎಂದರು.</p>.<p>‘ಕನ್ನಡ ಶಾಲೆಗಳ ಅಳಿವಿನ ಕುರಿತು ಪ್ರತಿರೋಧ ತೋರಬೇಕು. ಕೆಪಿಎಸ್ ಶಾಲೆಗಳನ್ನು ತೆರೆಯಲು ಸರ್ಕಾರ ಮುಂದಾಗಿದೆ. ಕೆಪಿಎಸ್ ಮ್ಯಾಗ್ನೆಟ್ ಶಾಲೆ ಯೋಜನೆಗಳಿಂದ ಶಾಲೆ ತೊರೆಯುವವರ ಸಂಖ್ಯೆ ಹೆಚ್ಚಾಗುತ್ತದೆ’ ಎಂದರು.</p>.<p>ಎಂ.ಆರ್.ನದಾಫ್ ಅವರ ‘ಅರಳಿದ ಮೊಗ್ಗು’, ಶಾಂತಾ ಬಸವರಾಜ ಅವರ ’ಬಸವೇಶ್ವರ’ ಹಾಗೂ ಪ್ರೊ.ಎಸ್.ಆರ್.ಗುಂಜಾಳ ಅವರ ‘ವಚನ ಪದಪ್ರಯೋಗ ಕೋಶ’ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ.ಎಸ್.ಆರ್.ಗುಂಜಾಳ ಅವರು ಸಮ್ಮೇಳನಾಧ್ಯಕ್ಷೆ ಹೇಮಾ ಪಟ್ಟಣಶೆಟ್ಟಿ ಅವರಿಗೆ ಧ್ವಜ ಹಸ್ತಾಂತರಿಸಿದರು.</p>.<p>ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಕೆ.ಎಸ್.ಕೌಜಲಗಿ, ಎಸ್.ಎಸ್.ದೊಡಮನಿ, ಪ್ರೊ.ಸಿದ್ಧಲಿಂಗ ಪಟ್ಟಣಶೆಟ್ಟಿ, ಕಲಾವಿದ ಬಿ.ಮಾರುತಿ, ಶಂಕರ ಹಲಗತ್ತಿ, ಮಾಜಿ ಶಾಸಕಿ ಸೀಮಾ ಮಸೂತಿ, ಹು–ಧಾ ಮಹಾನಗರ ಪಾಲಿಕೆ ಈರೇಶ ಅಂಚಟಗೇರಿ ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260331-24-352741773</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಧಾರವಾಡ: ‘ಜನರ ಸಂಕಷ್ಟಗಳು, ನೋವುಗಳಿಗೆ ಸ್ಪಂದಿಸುವುದರ ಜೊತೆಗೆ ಸಾಹಿತ್ಯ ಕ್ಷೇತ್ರವು ಪರಿಣಾಮಕಾರಿ ಬೆಳವಣಿಗೆ ತರಬೇಕು. ಹೊಸ ಮಾರ್ಗಗಳನ್ನು ಸಾದರಪಡಿಸಬೇಕು’ ಎಂದು ಸಾಹಿತಿ ಪ್ರೊ.ಸಬಿಹಾ ಭೂಮಿಗೌಡ ಹೇಳಿದರು.</p>.<p>ಇಲ್ಲಿ ನಡೆದ ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಸಾಹಿತ್ಯವು ಚಿಕಿತ್ಸಾ ಪದ್ಧತಿ ಇದ್ದಂತೆ. ಸಂಕಷ್ಟ, ದುಃಖಗಳಿಗೆ ಅಕ್ಷರವು ಸ್ಪಂದಿಸುತ್ತದೆ. ಈ ನಿಟ್ಟಿನಲ್ಲಿ ಸಾಹಿತಿಗಳು ಅಲ್ಲದೇ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿರುವ ಸಂಘಸಂಸ್ಥೆಗಳು ಶ್ರಮಿಸಬೇಕು. ಬದ್ಧತೆ ಸಾಬೀತುಪಡಿಸಬೇಕು’ ಎಂದರು.</p>.<p>‘ಮಹಿಳೆಯರ, ಮಕ್ಕಳ ಸಮಸ್ಯೆಗಳಿಗೆ ಅವರೇ ಹೋರಾಟ ಮಾಡಿ ಪರಿಹರಿಸಿಕೊಳ್ಳಲಿ ಎಂಬ ಜಡತ್ವವನ್ನು ಹೋಗಲಾಡಿಸಬೇಕು. ಅವರ ಸಮಸ್ಯೆಗಳೂ ಈ ಸಮಾಜದ ಸಮಸ್ಯೆಗಳು, ಅವರ ಹಕ್ಕುಗಳೂ ಮಾನವತೆಯ ಭಾಗ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸಮಸ್ಯೆಗಳಿಗೆ ಸ್ಪಂದಿಸಲು ಭಾಷಣ ಮತ್ತು ಸಾಹಿತ್ಯದ ಆಚೆ ಹೊಸದನ್ನು ಮಾಡಬೇಕು’ ಎಂದರು.</p>.<p>‘ಕನ್ನಡ ಶಾಲೆಗಳ ಅಳಿವಿನ ಕುರಿತು ಪ್ರತಿರೋಧ ತೋರಬೇಕು. ಕೆಪಿಎಸ್ ಶಾಲೆಗಳನ್ನು ತೆರೆಯಲು ಸರ್ಕಾರ ಮುಂದಾಗಿದೆ. ಕೆಪಿಎಸ್ ಮ್ಯಾಗ್ನೆಟ್ ಶಾಲೆ ಯೋಜನೆಗಳಿಂದ ಶಾಲೆ ತೊರೆಯುವವರ ಸಂಖ್ಯೆ ಹೆಚ್ಚಾಗುತ್ತದೆ’ ಎಂದರು.</p>.<p>ಎಂ.ಆರ್.ನದಾಫ್ ಅವರ ‘ಅರಳಿದ ಮೊಗ್ಗು’, ಶಾಂತಾ ಬಸವರಾಜ ಅವರ ’ಬಸವೇಶ್ವರ’ ಹಾಗೂ ಪ್ರೊ.ಎಸ್.ಆರ್.ಗುಂಜಾಳ ಅವರ ‘ವಚನ ಪದಪ್ರಯೋಗ ಕೋಶ’ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ.ಎಸ್.ಆರ್.ಗುಂಜಾಳ ಅವರು ಸಮ್ಮೇಳನಾಧ್ಯಕ್ಷೆ ಹೇಮಾ ಪಟ್ಟಣಶೆಟ್ಟಿ ಅವರಿಗೆ ಧ್ವಜ ಹಸ್ತಾಂತರಿಸಿದರು.</p>.<p>ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಕೆ.ಎಸ್.ಕೌಜಲಗಿ, ಎಸ್.ಎಸ್.ದೊಡಮನಿ, ಪ್ರೊ.ಸಿದ್ಧಲಿಂಗ ಪಟ್ಟಣಶೆಟ್ಟಿ, ಕಲಾವಿದ ಬಿ.ಮಾರುತಿ, ಶಂಕರ ಹಲಗತ್ತಿ, ಮಾಜಿ ಶಾಸಕಿ ಸೀಮಾ ಮಸೂತಿ, ಹು–ಧಾ ಮಹಾನಗರ ಪಾಲಿಕೆ ಈರೇಶ ಅಂಚಟಗೇರಿ ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260331-24-352741773</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>