<p>ಗದಗ: ಆರಂಭದಲ್ಲಿ ಪ್ರಾಸ ಪದಗಳು ಮಕ್ಕಳನ್ನು ಆಕರ್ಷಿಸಬಲ್ಲದು. ಮಕ್ಕಳ ಭಾಷಾ ಕೌಶಲ್ಯ, ಸಂವಹನ ಕಲೆ ವೃದ್ದಿಸುವಲ್ಲಿ ಮಕ್ಕಳ ಕವಿತೆಗಳು ಸಹಕಾರಿಯಾಗಬಲ್ಲದು. ಅದಕ್ಕಾಗಿ ಮಕ್ಕಳಿಗೆ ಕವಿತೆಗಳ ಅಧ್ಯಯನ ಶಿಬಿರವನ್ನು ಏರ್ಪಡಿಸಬೇಕು ಎಂದು ಹಿರಿಯ ಸಾಹಿತಿ ನೀ. ಶ್ರೀಶೈಲ ಹೇಳಿದರು</p>.<p>ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಎಂ.ಎಸ್.ಹುಲ್ಲೂರ ತರಬೇತಿ ಕೇಂದ್ರದ ಸಹಯೋಗದಲ್ಲಿ ಗದಗ ನಗರದ ವಿಜಯ ಲಲಿತಕಲಾ ಮಹಾವಿದ್ಯಾಲಯದಲ್ಲಿ ಜರುಗಿದ ಮಕ್ಕಳ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.</p>.<p>ಹಿರಿಯ ಕವಿಗಳು ತಮ್ಮ ಕವಿತೆಗಳನ್ನು ಓದಬೇಕು ಆಲಿಸಿದ ಮಕ್ಕಳು, ಪ್ರಶ್ನೆ ಕೇಳಲು ಅವಕಾಶವಿರಬೇಕು. ಹೊಸದಾಗಿ ಬರೆಯುವ ಮಕ್ಕಳಿಗೆ, ಪ್ರೇರಣೆಯನ್ನು ಒದಗಿಸುತ್ತದೆ. ಮಕ್ಕಳ ಕಾವ್ಯದ ಭಾಷೆ ಸುಲಲಿತವಾಗಿದ್ದಾಗ ಮಾತ್ರ ಮಕ್ಕಳ ಮನವನ್ನು ತಣಿಸಬಲ್ಲದು ಎಂದು ಹೇಳಿದರು.</p>.<p>ಡಿಜಿಟಲ್ ವ್ಯಸನದ ಸಂದರ್ಭದಲ್ಲಿ ಸಾಹಿತ್ಯದ ಒಲವು ಮೂಡಿಸುವ ಅನಿವಾರ್ಯತೆಯಿದೆ. ಮಾನಸಿಕ ತಲ್ಲಣಗಳಿಂದ ಮಕ್ಕಳನ್ನು ರಕ್ಷಣೆ ಮಾಡಲು ಮನೋವಿಕಾಸಕ್ಕೆ ಪೂರಕವಾದ ಪದ್ಯಗಳನ್ನು ಬಾಲ್ಯದಲ್ಲಿಯೇ ಮಕ್ಕಳಿಗೆ ಕೇಳಿಸುವ ಅವಕಾಶವನ್ನು ಸೃಷ್ಟಿಸುವುದು ಅನಿವಾರ್ಯ ಎಂದರು.</p>.<p>ಕವಿಗೋಷ್ಠಿಯಲ್ಲಿ ಸರ್ವಾಧ್ಯಕ್ಷ ತಯ್ಯಬಲಿ ಹೊಂಬಳ, ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಎಂ.ಎಸ್.ಹುಲ್ಲೂರ, ಡಿ. ಎಸ್. ಬಾಪುರಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260512-23-1043129190</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗದಗ: ಆರಂಭದಲ್ಲಿ ಪ್ರಾಸ ಪದಗಳು ಮಕ್ಕಳನ್ನು ಆಕರ್ಷಿಸಬಲ್ಲದು. ಮಕ್ಕಳ ಭಾಷಾ ಕೌಶಲ್ಯ, ಸಂವಹನ ಕಲೆ ವೃದ್ದಿಸುವಲ್ಲಿ ಮಕ್ಕಳ ಕವಿತೆಗಳು ಸಹಕಾರಿಯಾಗಬಲ್ಲದು. ಅದಕ್ಕಾಗಿ ಮಕ್ಕಳಿಗೆ ಕವಿತೆಗಳ ಅಧ್ಯಯನ ಶಿಬಿರವನ್ನು ಏರ್ಪಡಿಸಬೇಕು ಎಂದು ಹಿರಿಯ ಸಾಹಿತಿ ನೀ. ಶ್ರೀಶೈಲ ಹೇಳಿದರು</p>.<p>ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಎಂ.ಎಸ್.ಹುಲ್ಲೂರ ತರಬೇತಿ ಕೇಂದ್ರದ ಸಹಯೋಗದಲ್ಲಿ ಗದಗ ನಗರದ ವಿಜಯ ಲಲಿತಕಲಾ ಮಹಾವಿದ್ಯಾಲಯದಲ್ಲಿ ಜರುಗಿದ ಮಕ್ಕಳ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.</p>.<p>ಹಿರಿಯ ಕವಿಗಳು ತಮ್ಮ ಕವಿತೆಗಳನ್ನು ಓದಬೇಕು ಆಲಿಸಿದ ಮಕ್ಕಳು, ಪ್ರಶ್ನೆ ಕೇಳಲು ಅವಕಾಶವಿರಬೇಕು. ಹೊಸದಾಗಿ ಬರೆಯುವ ಮಕ್ಕಳಿಗೆ, ಪ್ರೇರಣೆಯನ್ನು ಒದಗಿಸುತ್ತದೆ. ಮಕ್ಕಳ ಕಾವ್ಯದ ಭಾಷೆ ಸುಲಲಿತವಾಗಿದ್ದಾಗ ಮಾತ್ರ ಮಕ್ಕಳ ಮನವನ್ನು ತಣಿಸಬಲ್ಲದು ಎಂದು ಹೇಳಿದರು.</p>.<p>ಡಿಜಿಟಲ್ ವ್ಯಸನದ ಸಂದರ್ಭದಲ್ಲಿ ಸಾಹಿತ್ಯದ ಒಲವು ಮೂಡಿಸುವ ಅನಿವಾರ್ಯತೆಯಿದೆ. ಮಾನಸಿಕ ತಲ್ಲಣಗಳಿಂದ ಮಕ್ಕಳನ್ನು ರಕ್ಷಣೆ ಮಾಡಲು ಮನೋವಿಕಾಸಕ್ಕೆ ಪೂರಕವಾದ ಪದ್ಯಗಳನ್ನು ಬಾಲ್ಯದಲ್ಲಿಯೇ ಮಕ್ಕಳಿಗೆ ಕೇಳಿಸುವ ಅವಕಾಶವನ್ನು ಸೃಷ್ಟಿಸುವುದು ಅನಿವಾರ್ಯ ಎಂದರು.</p>.<p>ಕವಿಗೋಷ್ಠಿಯಲ್ಲಿ ಸರ್ವಾಧ್ಯಕ್ಷ ತಯ್ಯಬಲಿ ಹೊಂಬಳ, ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಎಂ.ಎಸ್.ಹುಲ್ಲೂರ, ಡಿ. ಎಸ್. ಬಾಪುರಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260512-23-1043129190</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>