<p>ಗದಗ: ಬಸವಾದಿಶರಣರ ವಿಚಾರಗಳನ್ನು ಬಾಲ್ಯದಲ್ಲಿಯೇ ಅರಿತು ಆಚರಿಸಿದರೆ ಉತ್ತಮ ವ್ಯಕ್ತಿತ್ವ ರೂಪಿತವಾಗುತ್ತದೆ. ವಚನಗಳಲ್ಲಿರುವ ವಿಚಾರಗಳು ಸಾರ್ವಕಾಲಿಕ ಸತ್ಯಗಳಾಗಿದ್ದು ವ್ಯಕ್ತಿ ಹಿತದ ಜೊತೆಗೆ ಸಮಾಜದ ಉನ್ನತಿಯನ್ನು ಹೊಂದಿವೆ ಎಂದು ಸಿದ್ಧರಾಮ ಸ್ವಾಮೀಜಿ ಹೇಳಿದರು.</p>.<p>ನಗರದ ವಚನ ಪಾಠಶಾಲೆ ವತಿಯಿಂದ ಗದುಗಿನ ತೋಂಟದಾರ್ಯ ಮಠದಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.</p>.<p>ವಚನ ಪಾಠಶಾಲೆ ವತಿಯಿಂದ ವಚನ ಕಂಠಪಾಠ, ವಚನ ನ್ಯತ್ಯ, ಶರಣ ಸಂಸ್ಕೃತಿ ಶಿಬಿರ, ರಸಪ್ರಶ್ನೆ, ವಿಚಾರ ಸಂಕಿರಣ, ನಾಟಕೋತ್ಸವಗಳನ್ನು ವರ್ಷಪೂರ್ತಿ ಆಯೋಜಿಸಲಾಗುವುದು ಎಂದು ಹೇಳಿದರು.</p>.<p>ಮಾಜಿ ಸಚಿವ ಎಸ್.ಎಸ್.ಪಾಟೀಲ ಮಾತನಾಡಿ, ‘ಇಂದಿನ ಸಂದರ್ಭದಲ್ಲಿ ಶರಣರ ಚಿಂತನೆಗಳು ಅಗತ್ಯವಿದೆ. ಶಾಲೆಗಳಲ್ಲಿ ಸೀಮಿತ ವಿಚಾರಗಳಿದ್ದು, ಅವುಗಳನ್ನು ವ್ಯಾಪಕಗೊಳಿಸಲು ವಚನ ಪಾಠಶಾಲೆ ಕಾರ್ಯನಿರ್ವಹಿಸಬೇಕು. ಮಠದ ವಚನ ಪಾಠಶಾಲೆ ನಾಡಿನ ಎಲ್ಲ ಮಠಗಳಿಗೆ ಪ್ರೇರಣೆ ನೀಡಲಿ’ ಎಂದರು.</p>.<p>ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ ಅಂಗಡಿ ನಿರೂಪಿಸಿದರು. ಗೌರಕ್ಕ ಬಡಿಗಣ್ಣವರ ಸ್ವಾಗತಿಸಿದರು.</p>.<p>ಸಭಾ ಕಾರ್ಯಕ್ರಮದ ನಂತರ ವಿವಿಧ ಸಾಂಸ್ಕೃತಿ ಸ್ಪರ್ಧೆಗಳು ನಡೆದವು. ಎಸ್.ವಿ.ಪವಾಡಿಗೌಡ್ರ, ನಿಂಗು ಸೊಲಗಿ, ಎಸ್.ಯು.ಸಜ್ಜನಶೆಟ್ಟರ, ರಮೇಶ ಕಲ್ಲನಗೌಡರ, ಕೆ.ಎ.ಬಳಿಗೇರ, ಸುಧಾ ಹುಚ್ಚಣ್ಣವರ, ನೀಲಮ್ಮ ಅಂಗಡಿ, ಗಿರಿಜಾ ಹಸಬಿ, ರಾಜೇಶ್ವರ ಬಡ್ನಿ, ಗಿರಿಜಕ್ಕ ಧರ್ಮರೆಡ್ಡಿ ಸೇರಿದಂತೆ ಹಲವರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260425-23-1143710306</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗದಗ: ಬಸವಾದಿಶರಣರ ವಿಚಾರಗಳನ್ನು ಬಾಲ್ಯದಲ್ಲಿಯೇ ಅರಿತು ಆಚರಿಸಿದರೆ ಉತ್ತಮ ವ್ಯಕ್ತಿತ್ವ ರೂಪಿತವಾಗುತ್ತದೆ. ವಚನಗಳಲ್ಲಿರುವ ವಿಚಾರಗಳು ಸಾರ್ವಕಾಲಿಕ ಸತ್ಯಗಳಾಗಿದ್ದು ವ್ಯಕ್ತಿ ಹಿತದ ಜೊತೆಗೆ ಸಮಾಜದ ಉನ್ನತಿಯನ್ನು ಹೊಂದಿವೆ ಎಂದು ಸಿದ್ಧರಾಮ ಸ್ವಾಮೀಜಿ ಹೇಳಿದರು.</p>.<p>ನಗರದ ವಚನ ಪಾಠಶಾಲೆ ವತಿಯಿಂದ ಗದುಗಿನ ತೋಂಟದಾರ್ಯ ಮಠದಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.</p>.<p>ವಚನ ಪಾಠಶಾಲೆ ವತಿಯಿಂದ ವಚನ ಕಂಠಪಾಠ, ವಚನ ನ್ಯತ್ಯ, ಶರಣ ಸಂಸ್ಕೃತಿ ಶಿಬಿರ, ರಸಪ್ರಶ್ನೆ, ವಿಚಾರ ಸಂಕಿರಣ, ನಾಟಕೋತ್ಸವಗಳನ್ನು ವರ್ಷಪೂರ್ತಿ ಆಯೋಜಿಸಲಾಗುವುದು ಎಂದು ಹೇಳಿದರು.</p>.<p>ಮಾಜಿ ಸಚಿವ ಎಸ್.ಎಸ್.ಪಾಟೀಲ ಮಾತನಾಡಿ, ‘ಇಂದಿನ ಸಂದರ್ಭದಲ್ಲಿ ಶರಣರ ಚಿಂತನೆಗಳು ಅಗತ್ಯವಿದೆ. ಶಾಲೆಗಳಲ್ಲಿ ಸೀಮಿತ ವಿಚಾರಗಳಿದ್ದು, ಅವುಗಳನ್ನು ವ್ಯಾಪಕಗೊಳಿಸಲು ವಚನ ಪಾಠಶಾಲೆ ಕಾರ್ಯನಿರ್ವಹಿಸಬೇಕು. ಮಠದ ವಚನ ಪಾಠಶಾಲೆ ನಾಡಿನ ಎಲ್ಲ ಮಠಗಳಿಗೆ ಪ್ರೇರಣೆ ನೀಡಲಿ’ ಎಂದರು.</p>.<p>ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ ಅಂಗಡಿ ನಿರೂಪಿಸಿದರು. ಗೌರಕ್ಕ ಬಡಿಗಣ್ಣವರ ಸ್ವಾಗತಿಸಿದರು.</p>.<p>ಸಭಾ ಕಾರ್ಯಕ್ರಮದ ನಂತರ ವಿವಿಧ ಸಾಂಸ್ಕೃತಿ ಸ್ಪರ್ಧೆಗಳು ನಡೆದವು. ಎಸ್.ವಿ.ಪವಾಡಿಗೌಡ್ರ, ನಿಂಗು ಸೊಲಗಿ, ಎಸ್.ಯು.ಸಜ್ಜನಶೆಟ್ಟರ, ರಮೇಶ ಕಲ್ಲನಗೌಡರ, ಕೆ.ಎ.ಬಳಿಗೇರ, ಸುಧಾ ಹುಚ್ಚಣ್ಣವರ, ನೀಲಮ್ಮ ಅಂಗಡಿ, ಗಿರಿಜಾ ಹಸಬಿ, ರಾಜೇಶ್ವರ ಬಡ್ನಿ, ಗಿರಿಜಕ್ಕ ಧರ್ಮರೆಡ್ಡಿ ಸೇರಿದಂತೆ ಹಲವರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260425-23-1143710306</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>