<p>ಕಾರಟಗಿ: ‘ಕಲೆ, ಸಾಹಿತ್ಯ, ಸಂಗೀತ ಕ್ಷೇತ್ರಕ್ಕೆ ಈ ಭಾಗದ ಅನೇಕರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕವಿತೆಗಳು ಗಟ್ಟಿತನದಿಂದ ಕೂಡಿರಬೇಕು. ಅವುಗಳು ಓದಿಸಿಕೊಂಡು ಹೋಗುವಂತಿರಬೇಕು. ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ಮೈಗೂಡಿಸಿಕೊಳ್ಳಬೇಕು’ ಎಂದು ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಚ್. ನಟೇಶ ಹೇಳಿದರು.</p>.<p>ಪಟ್ಟಣದ ಸೃಷ್ಟಿ ಕಾವ್ಯ ಪ್ರಕಾಶನ ವಿದ್ಯಾ ಭಾರತಿ ಮಹಿಳಾ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ 2025-26ನೇ ಸಾಲಿನ ಸೃಷ್ಟಿ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>ತಲೇಖಾನ ಮಠದ ವೀರಭದ್ರ ಶರಣರು ಮಾತನಾಡಿ, ‘ಇಂದಿನ ಯುವ ಜನಾಂಗ ದಾರಿತಪ್ಪಿ ಹೋಗುತ್ತಿರುವ ಅಪಾಯ ಎದುರಾಗಿದೆ. ಯುವಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕಿದೆ’ ಎಂದರು.</p>.<p>ಕವಿ ಸದಾಶಿವ ಸೊರಟೂರು ಅವರ ‘ದೇವರನ್ನು ಹೊರ ಹಾಕುತ್ತೇನೆ’ ಕೃತಿ ಕುರಿತು ಸಾಹಿತಿ ಪವನಕುಮಾರ ಗುಂಡೂರು ಮಾತನಾಡಿದರು.</p>.<p>ಈ ಸಂದರ್ಭದಲ್ಲಿ ಕವಿ ಸದಾಶಿವ ಸೊರಟೂರು ಅವರಿಗೆ ಸೃಷ್ಟಿ ಕಾವ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.</p>.<p>ವಿದ್ಯಾ ಭಾರತಿ ಮಹಿಳಾ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ನರಸಿಂಹರಾವ್, ಸೃಷ್ಠಿ ಕಾವ್ಯ ಪುರಸ್ಕಾರದ ಸಂಚಾಲಕ ಅಶೋಕ ಹೊಸಮನಿ, ಅಧ್ಯಕ್ಷೆ ಮಂಗಲ ಟೆಂಕಪ್ಪನವರ, ಅಮರೇಶ ಮೈಲಾಪುರ, ಚನ್ನಬಸಪ್ಪ, ಮಾನಸ, ದ್ಯಾಮಣ್ಣ, ಹನುಮೇಶ ಸೇರಿದಂತೆ ಅನೇಕರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260330-35-762318826</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಾರಟಗಿ: ‘ಕಲೆ, ಸಾಹಿತ್ಯ, ಸಂಗೀತ ಕ್ಷೇತ್ರಕ್ಕೆ ಈ ಭಾಗದ ಅನೇಕರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕವಿತೆಗಳು ಗಟ್ಟಿತನದಿಂದ ಕೂಡಿರಬೇಕು. ಅವುಗಳು ಓದಿಸಿಕೊಂಡು ಹೋಗುವಂತಿರಬೇಕು. ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ಮೈಗೂಡಿಸಿಕೊಳ್ಳಬೇಕು’ ಎಂದು ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಚ್. ನಟೇಶ ಹೇಳಿದರು.</p>.<p>ಪಟ್ಟಣದ ಸೃಷ್ಟಿ ಕಾವ್ಯ ಪ್ರಕಾಶನ ವಿದ್ಯಾ ಭಾರತಿ ಮಹಿಳಾ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ 2025-26ನೇ ಸಾಲಿನ ಸೃಷ್ಟಿ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>ತಲೇಖಾನ ಮಠದ ವೀರಭದ್ರ ಶರಣರು ಮಾತನಾಡಿ, ‘ಇಂದಿನ ಯುವ ಜನಾಂಗ ದಾರಿತಪ್ಪಿ ಹೋಗುತ್ತಿರುವ ಅಪಾಯ ಎದುರಾಗಿದೆ. ಯುವಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕಿದೆ’ ಎಂದರು.</p>.<p>ಕವಿ ಸದಾಶಿವ ಸೊರಟೂರು ಅವರ ‘ದೇವರನ್ನು ಹೊರ ಹಾಕುತ್ತೇನೆ’ ಕೃತಿ ಕುರಿತು ಸಾಹಿತಿ ಪವನಕುಮಾರ ಗುಂಡೂರು ಮಾತನಾಡಿದರು.</p>.<p>ಈ ಸಂದರ್ಭದಲ್ಲಿ ಕವಿ ಸದಾಶಿವ ಸೊರಟೂರು ಅವರಿಗೆ ಸೃಷ್ಟಿ ಕಾವ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.</p>.<p>ವಿದ್ಯಾ ಭಾರತಿ ಮಹಿಳಾ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ನರಸಿಂಹರಾವ್, ಸೃಷ್ಠಿ ಕಾವ್ಯ ಪುರಸ್ಕಾರದ ಸಂಚಾಲಕ ಅಶೋಕ ಹೊಸಮನಿ, ಅಧ್ಯಕ್ಷೆ ಮಂಗಲ ಟೆಂಕಪ್ಪನವರ, ಅಮರೇಶ ಮೈಲಾಪುರ, ಚನ್ನಬಸಪ್ಪ, ಮಾನಸ, ದ್ಯಾಮಣ್ಣ, ಹನುಮೇಶ ಸೇರಿದಂತೆ ಅನೇಕರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260330-35-762318826</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>