<p>ಗಂಗಾವತಿ: ನಗರದ ಎಸ್.ಕೆ.ಎನ್.ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದಿಂದ ‘ಕನ್ನಡದಲ್ಲಿ ಕೃಷಿ ಸಾಹಿತ್ಯ’ ವಿದ್ಯಾರ್ಥಿ ವಿಚಾರ ಸಂಕಿರಣ ಕಾರ್ಯಕ್ರಮ ಜರುಗಿತು.</p>.<p>ಎಂ.ಎ ದ್ವಿತೀಯ ವರ್ಷದ ವಿದ್ಯಾರ್ಥಿ ಮಲ್ಲೇಶ ಬಂಕಾಪುರ ಮಾತನಾಡಿ, ‘ನಮ್ಮ ಕನ್ನಡದ ಕಾವ್ಯ ಪರಂಪರೆ, ಕೃಷಿ ಬಗ್ಗೆ ಸಾಕಷ್ಟು ಕಾಳಜಿ, ಬದ್ಧತೆ ತೋರಿದೆ. ಕೃಷಿ ಈ ದೇಶದ ಆತ್ಮ. ಕೃಷಿ ನಮ್ಮ ಬದುಕಿನ ಜೀವಾಳ. ಶರಣರು, ದಾಸರು, ತತ್ವಪದಕಾರರು, ಕುಮಾರವ್ಯಾಸ, ಕುವೆಂಪು, ಬೇಂದ್ರೆ ಸೇರಿ ಹಲವು ಕವಿಗಳು ಕೃಷಿಯ ಮಹತ್ವ ಸಾರಿದ್ದಾರೆ. ನಾವೆಷ್ಟೇ ಆಧುನಿಕತೆ ಬೆಳೆಸಿಕೊಂಡರೂ ಭೂಮಿ ಮತ್ತು ಕೃಷಿ ಜಗತ್ತಿನ ಜೀವ ಸಂಕುಲವನ್ನ ರಕ್ಷಣೆ ಮಾಡುತ್ತದೆ’ ಎಂದರು.</p>.<p>ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದ ಸಂಯೋಜಕಿ ಮುಮ್ತಾಜ್ ಬೇಗಂ ಮಾತನಾಡಿ, ‘ವಿದ್ಯಾರ್ಥಿಗಳಿಗೆ ವಿವಿಧ ಜ್ಞಾನ ಶಿಸ್ತುಗಳ ಬಗ್ಗೆ ಅರಿವು ಮೂಡಿಸಲು ಸಂಶೋಧನೆ ಬಗ್ಗೆ ಆಳವಾದ ಜ್ಞಾನ ನೀಡುವ ಆಶಯದಿಂದ ವಿಚಾರ ಸಂಕಿರಣ ಆಯೋಜಿಸಲಾಗಿದೆ’ ಎಂದರು.</p>.<p>ವಿಭಾಗದ ಅತಿಥಿ ಉಪನ್ಯಾಸಕ ಗುಂಡೂರು ಪವನಕುಮಾರ್ ಮಾತನಾಡಿ, ‘ಸಾಹಿತ್ಯದ ಬಹುಮುಖಿ ಅಧ್ಯಯನ ಜ್ಞಾನದ ಹಲವು ಆಯಾಮಗಳು ಪರಿಚಯಿಸುತ್ತದೆ. ಕುಮಾರವ್ಯಾಸ ಭಾರತ ಕಾವ್ಯದಲ್ಲಿ ಕೃಷಿ ಇಲ್ಲದ ದೇಶ, ಕೆಟ್ಟ ದೇಶ ಎನ್ನುತ್ತಾನೆ. ಕೃಷಿಯೇ ಎಲ್ಲದಕ್ಕೂ ಮೂಲ ಎನ್ನುವ ಸಾರ್ವಕಾಲಿಕ ಸತ್ಯವನ್ನು ಕಟ್ಟಿಕೊಟ್ಟಿದ್ದಾನೆ’ ಎಂದರು.</p>.<p>ಬಸವರಾಜ ಗೌಡನಬಾವಿ, ಪಾಗುಂಡಪ್ಪ ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260414-35-2108027738</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗಂಗಾವತಿ: ನಗರದ ಎಸ್.ಕೆ.ಎನ್.ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದಿಂದ ‘ಕನ್ನಡದಲ್ಲಿ ಕೃಷಿ ಸಾಹಿತ್ಯ’ ವಿದ್ಯಾರ್ಥಿ ವಿಚಾರ ಸಂಕಿರಣ ಕಾರ್ಯಕ್ರಮ ಜರುಗಿತು.</p>.<p>ಎಂ.ಎ ದ್ವಿತೀಯ ವರ್ಷದ ವಿದ್ಯಾರ್ಥಿ ಮಲ್ಲೇಶ ಬಂಕಾಪುರ ಮಾತನಾಡಿ, ‘ನಮ್ಮ ಕನ್ನಡದ ಕಾವ್ಯ ಪರಂಪರೆ, ಕೃಷಿ ಬಗ್ಗೆ ಸಾಕಷ್ಟು ಕಾಳಜಿ, ಬದ್ಧತೆ ತೋರಿದೆ. ಕೃಷಿ ಈ ದೇಶದ ಆತ್ಮ. ಕೃಷಿ ನಮ್ಮ ಬದುಕಿನ ಜೀವಾಳ. ಶರಣರು, ದಾಸರು, ತತ್ವಪದಕಾರರು, ಕುಮಾರವ್ಯಾಸ, ಕುವೆಂಪು, ಬೇಂದ್ರೆ ಸೇರಿ ಹಲವು ಕವಿಗಳು ಕೃಷಿಯ ಮಹತ್ವ ಸಾರಿದ್ದಾರೆ. ನಾವೆಷ್ಟೇ ಆಧುನಿಕತೆ ಬೆಳೆಸಿಕೊಂಡರೂ ಭೂಮಿ ಮತ್ತು ಕೃಷಿ ಜಗತ್ತಿನ ಜೀವ ಸಂಕುಲವನ್ನ ರಕ್ಷಣೆ ಮಾಡುತ್ತದೆ’ ಎಂದರು.</p>.<p>ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದ ಸಂಯೋಜಕಿ ಮುಮ್ತಾಜ್ ಬೇಗಂ ಮಾತನಾಡಿ, ‘ವಿದ್ಯಾರ್ಥಿಗಳಿಗೆ ವಿವಿಧ ಜ್ಞಾನ ಶಿಸ್ತುಗಳ ಬಗ್ಗೆ ಅರಿವು ಮೂಡಿಸಲು ಸಂಶೋಧನೆ ಬಗ್ಗೆ ಆಳವಾದ ಜ್ಞಾನ ನೀಡುವ ಆಶಯದಿಂದ ವಿಚಾರ ಸಂಕಿರಣ ಆಯೋಜಿಸಲಾಗಿದೆ’ ಎಂದರು.</p>.<p>ವಿಭಾಗದ ಅತಿಥಿ ಉಪನ್ಯಾಸಕ ಗುಂಡೂರು ಪವನಕುಮಾರ್ ಮಾತನಾಡಿ, ‘ಸಾಹಿತ್ಯದ ಬಹುಮುಖಿ ಅಧ್ಯಯನ ಜ್ಞಾನದ ಹಲವು ಆಯಾಮಗಳು ಪರಿಚಯಿಸುತ್ತದೆ. ಕುಮಾರವ್ಯಾಸ ಭಾರತ ಕಾವ್ಯದಲ್ಲಿ ಕೃಷಿ ಇಲ್ಲದ ದೇಶ, ಕೆಟ್ಟ ದೇಶ ಎನ್ನುತ್ತಾನೆ. ಕೃಷಿಯೇ ಎಲ್ಲದಕ್ಕೂ ಮೂಲ ಎನ್ನುವ ಸಾರ್ವಕಾಲಿಕ ಸತ್ಯವನ್ನು ಕಟ್ಟಿಕೊಟ್ಟಿದ್ದಾನೆ’ ಎಂದರು.</p>.<p>ಬಸವರಾಜ ಗೌಡನಬಾವಿ, ಪಾಗುಂಡಪ್ಪ ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260414-35-2108027738</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>