<p>ಗುಳೇದಗುಡ್ಡ: ‘ಕವಿತೆಗಳು ಸಹೃದಯತೆ ಹೊಂದಿವೆ. ಸಮಾಜದಲ್ಲಿರುವ ಅಂಕುಡೊಂಕನ್ನು ತಿದ್ದುವುದರೊಂದಿಗೆ ವ್ಯಕ್ತಿಯ ಭಾವನೆಗಳಿಗೆ ಕವಿತೆಗಳು ಸ್ಪಂದಿಸುತ್ತವೆ. ಹೀಗಾಗಿ ಕವಿಯ ಕಾವ್ಯದಿಂದ ಸಮಾಜದ ಬದಲಾವಣೆ ಸಾಧ್ಯವಾಗುತ್ತದೆ’ ಎಂದು ಕವಿ ಭೀಮನಗೌಡ ಪಾಟೀಲ ಹೇಳಿದರು.</p>.<p>ಪಟ್ಟಣದ ಗುರುಸಿದ್ಧೇಶ್ವರ ಮಹಿಳಾ ಶಿಕ್ಷಣ(ಬಿ.ಎಡ್) ಮಹಾವಿದ್ಯಾಲಯದ ಕನ್ನಡ ವಿಭಾಗ ಆಶ್ರಯದಲ್ಲಿ ಗುರುವಾರ ಜರುಗಿದ ಕವಿ- ಕಾವ್ಯ-ಮುಖಾಮುಖಿ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಕವಿ ಮತ್ತು ಆತನ ಕವಿತೆ ಸಮಾಜಮುಖಿ ಆಗಿರಬೇಕು. ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಬೇಕು. ಕವಿತೆಗಳ ಕೇಳಿದ ಜನರು ಬದಲಾವಣೆ ಆಗಬೇಕು ಮತ್ತು ಕವಿತೆಯ ಆಶೆಯಗಳಿಗೆ ಅನುಗು ಣವಾಗಿ ಪರಿವರ್ತನೆಗೆ ಪ್ರಯತ್ನಿಸಬೇಕು. ಸಮಾಜದಲ್ಲಿನ ವ್ಯಕ್ತಿಯನ್ನು ತಿದ್ದಿದರೆ ಸಮಾಜ ತಿದ್ದಿದಂತೆ’ ಎಂದು ಹೇಳಿದರು</p>.<p>ಪ್ರಾಚಾರ್ಯ ಎಚ್.ಎಸ್. ಘಂಟಿ ಮಾತನಾಡಿ, ‘ಇಂದಿನ ವಿದ್ಯಾರ್ಥಿಗಳು ಶಿಕ್ಷಣವನ್ನು ವ್ಯವಹಾರಿಕವಾಗಿ ನೋಡುವುದರಿಂದ ಕೇವಲ ಅಂಕಗಳಿಗೆ ಮಾತ್ರ ಅವರ ಆಲೋಚನೆಗಳು ಸೀಮಿತವಾಗಿವೆ. ಅದರ ಆಚೆ ಕನ್ನಡ ಭಾಷೆ ,ಸಾಹಿತ್ಯ ಸಂವೇದನೆ, ಕಾವ್ಯ, ಕಾವ್ಯದ ಒಳನೋಟಗಳನ್ನು ಅರಿಯುವ ಅವಶ್ಯಕತೆ ಇದೆ’ ಎಂದು ಹೇಳಿದರು.</p>.<p>ಪ್ರಶಿಕ್ಷಣಾರ್ಥಿಗಳು ಭೀಮನಗೌಡ ಪಾಟೀಲ ಅವರೊಂದಿಗೆ ಅವರ ಜೀವನ, ಕಾವ್ಯ, ಸಾಹಿತ್ಯದ ಕುರಿತು ಸಂವಾದ ನಡೆಸಿದರು. ಗಾಯಕ ಅಶೋಕ ಜೋಶಿ ಹಾಗೂ ಪ್ರಥಮ ಮತ್ತು ದ್ವಿತೀಯ ವರ್ಷದ ಬಿ.ಎಡ್ ಪ್ರಶಿಕ್ಷಣಾರ್ಥಿಗಳು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260523-19-201946582</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗುಳೇದಗುಡ್ಡ: ‘ಕವಿತೆಗಳು ಸಹೃದಯತೆ ಹೊಂದಿವೆ. ಸಮಾಜದಲ್ಲಿರುವ ಅಂಕುಡೊಂಕನ್ನು ತಿದ್ದುವುದರೊಂದಿಗೆ ವ್ಯಕ್ತಿಯ ಭಾವನೆಗಳಿಗೆ ಕವಿತೆಗಳು ಸ್ಪಂದಿಸುತ್ತವೆ. ಹೀಗಾಗಿ ಕವಿಯ ಕಾವ್ಯದಿಂದ ಸಮಾಜದ ಬದಲಾವಣೆ ಸಾಧ್ಯವಾಗುತ್ತದೆ’ ಎಂದು ಕವಿ ಭೀಮನಗೌಡ ಪಾಟೀಲ ಹೇಳಿದರು.</p>.<p>ಪಟ್ಟಣದ ಗುರುಸಿದ್ಧೇಶ್ವರ ಮಹಿಳಾ ಶಿಕ್ಷಣ(ಬಿ.ಎಡ್) ಮಹಾವಿದ್ಯಾಲಯದ ಕನ್ನಡ ವಿಭಾಗ ಆಶ್ರಯದಲ್ಲಿ ಗುರುವಾರ ಜರುಗಿದ ಕವಿ- ಕಾವ್ಯ-ಮುಖಾಮುಖಿ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಕವಿ ಮತ್ತು ಆತನ ಕವಿತೆ ಸಮಾಜಮುಖಿ ಆಗಿರಬೇಕು. ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಬೇಕು. ಕವಿತೆಗಳ ಕೇಳಿದ ಜನರು ಬದಲಾವಣೆ ಆಗಬೇಕು ಮತ್ತು ಕವಿತೆಯ ಆಶೆಯಗಳಿಗೆ ಅನುಗು ಣವಾಗಿ ಪರಿವರ್ತನೆಗೆ ಪ್ರಯತ್ನಿಸಬೇಕು. ಸಮಾಜದಲ್ಲಿನ ವ್ಯಕ್ತಿಯನ್ನು ತಿದ್ದಿದರೆ ಸಮಾಜ ತಿದ್ದಿದಂತೆ’ ಎಂದು ಹೇಳಿದರು</p>.<p>ಪ್ರಾಚಾರ್ಯ ಎಚ್.ಎಸ್. ಘಂಟಿ ಮಾತನಾಡಿ, ‘ಇಂದಿನ ವಿದ್ಯಾರ್ಥಿಗಳು ಶಿಕ್ಷಣವನ್ನು ವ್ಯವಹಾರಿಕವಾಗಿ ನೋಡುವುದರಿಂದ ಕೇವಲ ಅಂಕಗಳಿಗೆ ಮಾತ್ರ ಅವರ ಆಲೋಚನೆಗಳು ಸೀಮಿತವಾಗಿವೆ. ಅದರ ಆಚೆ ಕನ್ನಡ ಭಾಷೆ ,ಸಾಹಿತ್ಯ ಸಂವೇದನೆ, ಕಾವ್ಯ, ಕಾವ್ಯದ ಒಳನೋಟಗಳನ್ನು ಅರಿಯುವ ಅವಶ್ಯಕತೆ ಇದೆ’ ಎಂದು ಹೇಳಿದರು.</p>.<p>ಪ್ರಶಿಕ್ಷಣಾರ್ಥಿಗಳು ಭೀಮನಗೌಡ ಪಾಟೀಲ ಅವರೊಂದಿಗೆ ಅವರ ಜೀವನ, ಕಾವ್ಯ, ಸಾಹಿತ್ಯದ ಕುರಿತು ಸಂವಾದ ನಡೆಸಿದರು. ಗಾಯಕ ಅಶೋಕ ಜೋಶಿ ಹಾಗೂ ಪ್ರಥಮ ಮತ್ತು ದ್ವಿತೀಯ ವರ್ಷದ ಬಿ.ಎಡ್ ಪ್ರಶಿಕ್ಷಣಾರ್ಥಿಗಳು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260523-19-201946582</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>