<p>ಹಗರಿಬೊಮ್ಮನಹಳ್ಳಿ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಚುನಾವಣೆ ಏಪ್ರಿಲ್ 19ರಂದು ನಡೆಯಲಿದ್ದು, ಇಲ್ಲಿನ ಗುರುಭವನದಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.</p>.<p>ಒಟ್ಟು 10 ಸ್ಥಾನಗಳಿಗೆ 22 ಸ್ಪರ್ಧಿಗಳು ಕಣದಲ್ಲಿದ್ದು, ಮೂರು ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. 514 ಶಿಕ್ಷಕರು ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ.</p>.<p>ಬೇಸಿಗೆ ರಜೆ ಇರುವುದರಿಂದ ಬಹುತೇಕ ಶಿಕ್ಷಕರು ತಮ್ಮ ಊರುಗಳಿಗೆ ತೆರಳಿದ್ದಾರೆ. ಹಾಗಾಗಿ, ಸ್ಪರ್ಧಿಗಳು ಮತದಾರ ಶಿಕ್ಷಕರನ್ನು ಭೇಟಿ ಮಾಡಲು ಹರಸಾಹಸಪಟ್ಟಿದ್ದಾರೆ. ಬಿರು ಬಿಸಿಲಿನ ತಾಪಕ್ಕೆ ಹಲವರು ಹೈರಾಣಾಗಿದ್ದಾರೆ.</p>.<p>ಪ್ರಾಮಾಣಿಕ ಸ್ಪಂದನಾಶೀಲ ತಂಡ ಮತ್ತು ಪ್ರಾಮಾಣಿಕ ಸಮಾನ ಮನಸ್ಕ ಶಿಕ್ಷಕರ ತಂಡದ ಹೆಸರಿನಲ್ಲಿ ಸ್ಪರ್ಧಿಗಳು ಮತಯಾಚನೆ ಮಾಡಿದ್ದಾರೆ. ಇನ್ನಿಬ್ಬರು ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದಾರೆ. ಎರಡೂ ತಂಡಗಳು ಹತ್ತಾರು ಭರವಸೆಗಳ ಪ್ರಣಾಳಿಕೆಯ ಕರಪತ್ರವನ್ನು ಹಿಡಿದು, ಮತದಾರ ಶಿಕ್ಷಕರ ಮನೆಗಳಿಗೆ ಭೇಟಿ ನೀಡಿವೆ.</p>.<p>ಹಾಲಿ ಅಧ್ಯಕ್ಷ ಎಚ್. ಲೋಕಪ್ಪ, ಪ್ರಧಾನ ಕಾರ್ಯದರ್ಶಿ ಬಿ. ಕೊಟ್ರಪ್ಪ, ಜಿಲ್ಲಾ ಖಜಾಂಚಿ ಹೀರ್ಯಾನಾಯ್ಕ, ತಾಲ್ಲೂಕು ಖಜಾಂಚಿ ಟಿ. ಸೋಮಶೇಖರ, ನಿರ್ದೇಶಕರಾದ ದಾದೀಬಿ, ದೀಪಿಕಾ, ಇಟ್ಟಿಗಿ ಮಂಜುನಾಥ, ಇಟ್ಟಿಗಿ ಪ್ರಭಾಕರ, ಹನುಮರೆಡ್ಡಿ, ಹರೀಶ್ ಅವರು ಮರು ಆಯ್ಕೆ ಬಯಸಿ ಸ್ಪರ್ಧಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260418-25-405437309</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಗರಿಬೊಮ್ಮನಹಳ್ಳಿ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಚುನಾವಣೆ ಏಪ್ರಿಲ್ 19ರಂದು ನಡೆಯಲಿದ್ದು, ಇಲ್ಲಿನ ಗುರುಭವನದಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.</p>.<p>ಒಟ್ಟು 10 ಸ್ಥಾನಗಳಿಗೆ 22 ಸ್ಪರ್ಧಿಗಳು ಕಣದಲ್ಲಿದ್ದು, ಮೂರು ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. 514 ಶಿಕ್ಷಕರು ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ.</p>.<p>ಬೇಸಿಗೆ ರಜೆ ಇರುವುದರಿಂದ ಬಹುತೇಕ ಶಿಕ್ಷಕರು ತಮ್ಮ ಊರುಗಳಿಗೆ ತೆರಳಿದ್ದಾರೆ. ಹಾಗಾಗಿ, ಸ್ಪರ್ಧಿಗಳು ಮತದಾರ ಶಿಕ್ಷಕರನ್ನು ಭೇಟಿ ಮಾಡಲು ಹರಸಾಹಸಪಟ್ಟಿದ್ದಾರೆ. ಬಿರು ಬಿಸಿಲಿನ ತಾಪಕ್ಕೆ ಹಲವರು ಹೈರಾಣಾಗಿದ್ದಾರೆ.</p>.<p>ಪ್ರಾಮಾಣಿಕ ಸ್ಪಂದನಾಶೀಲ ತಂಡ ಮತ್ತು ಪ್ರಾಮಾಣಿಕ ಸಮಾನ ಮನಸ್ಕ ಶಿಕ್ಷಕರ ತಂಡದ ಹೆಸರಿನಲ್ಲಿ ಸ್ಪರ್ಧಿಗಳು ಮತಯಾಚನೆ ಮಾಡಿದ್ದಾರೆ. ಇನ್ನಿಬ್ಬರು ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದಾರೆ. ಎರಡೂ ತಂಡಗಳು ಹತ್ತಾರು ಭರವಸೆಗಳ ಪ್ರಣಾಳಿಕೆಯ ಕರಪತ್ರವನ್ನು ಹಿಡಿದು, ಮತದಾರ ಶಿಕ್ಷಕರ ಮನೆಗಳಿಗೆ ಭೇಟಿ ನೀಡಿವೆ.</p>.<p>ಹಾಲಿ ಅಧ್ಯಕ್ಷ ಎಚ್. ಲೋಕಪ್ಪ, ಪ್ರಧಾನ ಕಾರ್ಯದರ್ಶಿ ಬಿ. ಕೊಟ್ರಪ್ಪ, ಜಿಲ್ಲಾ ಖಜಾಂಚಿ ಹೀರ್ಯಾನಾಯ್ಕ, ತಾಲ್ಲೂಕು ಖಜಾಂಚಿ ಟಿ. ಸೋಮಶೇಖರ, ನಿರ್ದೇಶಕರಾದ ದಾದೀಬಿ, ದೀಪಿಕಾ, ಇಟ್ಟಿಗಿ ಮಂಜುನಾಥ, ಇಟ್ಟಿಗಿ ಪ್ರಭಾಕರ, ಹನುಮರೆಡ್ಡಿ, ಹರೀಶ್ ಅವರು ಮರು ಆಯ್ಕೆ ಬಯಸಿ ಸ್ಪರ್ಧಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260418-25-405437309</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>