<p>ಹಳಿಯಾಳ: ‘ನೀರು ಅತ್ಯಮೂಲ್ಯ ಸಂಪತ್ತಾಗಿದ್ದು, ಜಾಗರುಕತೆಯಿಂದ ನೀರು ಅಪವ್ಯಯವಾಗದಂತೆ ಪ್ರತಿಯೊಬ್ಬರೂ ಬಳಸಬೇಕು’ ಎಂದು ಅಲ್ಟ್ರಾಟೆಕ್ ಸಿಮೆಂಟ್ ಪ್ರೈ.ಲಿ ನ ಉತ್ತರ ಕರ್ನಾಟಕ ಹಾಗೂ ಗೋವಾ ಭಾಗದ ತಾಂತ್ರಿಕ ಮುಖ್ಯಸ್ಥ ಅಶೋಕ ರೆಡ್ಡಿ ಕೊಲ್ಲೂರ ಹೇಳಿದರು.</p>.<p>ಇತ್ತೀಚಿಗೆ ಕೆಎಲ್ಎಸ್ವಿ ಡಿ ಐ ಟಿ ಹಳಿಯಾಳದ ಸಿವಿಲ ವಿಭಾಗವು ನೀರು ಸಂರಕ್ಷಣೆ ಕುರಿತು ನಡೆದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ನೀರಿನ ಸಂರಕ್ಷಣೆಗೆ ಬಳಕೆ ಮಾಡಲಾಗುತ್ತಿರುವ ನೂತನ ತಂತ್ರಜ್ಞಾನದ ಕುರಿತಾಗಿ ವಿವರಿಸಿ ಕೊಳಚೆ ನೀರಿನ ಮರುಶುದ್ಧೀಕರಣ ಹಾಗೂ ಸಮರ್ಪಕ ಬಳಕೆ ತಿಳಿಸುತ್ತ, ಭೂಮಿಯಲ್ಲಿ ಅಂತರ್ಜಲ ಹೆಚ್ಚಿಸಲು ತೆಗೆದುಕೊಳ್ಳಬೇಕಾದ ಉಪಕ್ರಮದ ಕುರಿತಾಗಿ ತಿಳಿಸಿದರು.</p>.<p>ಪ್ರಾಚಾರ್ಯ ವಿ.ಎ. ಕುಲಕರ್ಣಿ, ಮಹಾವಿದ್ಯಾಲಯವು ಅಂತರ್ಜಲ ಸಮೃದ್ಧಿಕರಣಕ್ಕೆ ಮಳೆ ಕೊಯ್ಲು ಅಳವಡಿಸಿ ಕೊಂಡಿದೆ ಎಂದರು.</p>.<p>ಕಾಂಕ್ರೀಟ್ ಟೆಕ್ನಾಲಜಿ ವಿಷಯದಲ್ಲಿ ಅತಿ ಹೆಚ್ಚು ಅಂಕಗಳಿಸಿದ ಅಭಿಷೇಕ ಯಂತೂರ್ ಗೆ ಅಲ್ಟ್ರಾಟೇಕ್ ಕಂಪನಿ ವತಿಯಿಂದ ಸನ್ಮಾನಿಸಲಾಯಿತು.</p>.<p>ಅಲ್ಟ್ರಾಟೇಕ್ ಸಿಮೆಂಟ್ನ ಗಿರೀಶ ಪವಾರ ಹಾಗೂ ಪ್ರಸನ್ನ ಉಪ್ಪಿನ, ವಿಭಾಗ ಮುಖ್ಯಸ್ಥ ಪ್ರೊ.ಹರ್ಷ ಜಾಧವ, ಡಾ.ಸ್ನೇಹಾ ಕುಲಕರ್ಣಿ, ಪ್ರೊ.ಸೀಮಾ ಬಸರಿಕಟ್ಟಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260511-20-1465758722</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಳಿಯಾಳ: ‘ನೀರು ಅತ್ಯಮೂಲ್ಯ ಸಂಪತ್ತಾಗಿದ್ದು, ಜಾಗರುಕತೆಯಿಂದ ನೀರು ಅಪವ್ಯಯವಾಗದಂತೆ ಪ್ರತಿಯೊಬ್ಬರೂ ಬಳಸಬೇಕು’ ಎಂದು ಅಲ್ಟ್ರಾಟೆಕ್ ಸಿಮೆಂಟ್ ಪ್ರೈ.ಲಿ ನ ಉತ್ತರ ಕರ್ನಾಟಕ ಹಾಗೂ ಗೋವಾ ಭಾಗದ ತಾಂತ್ರಿಕ ಮುಖ್ಯಸ್ಥ ಅಶೋಕ ರೆಡ್ಡಿ ಕೊಲ್ಲೂರ ಹೇಳಿದರು.</p>.<p>ಇತ್ತೀಚಿಗೆ ಕೆಎಲ್ಎಸ್ವಿ ಡಿ ಐ ಟಿ ಹಳಿಯಾಳದ ಸಿವಿಲ ವಿಭಾಗವು ನೀರು ಸಂರಕ್ಷಣೆ ಕುರಿತು ನಡೆದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ನೀರಿನ ಸಂರಕ್ಷಣೆಗೆ ಬಳಕೆ ಮಾಡಲಾಗುತ್ತಿರುವ ನೂತನ ತಂತ್ರಜ್ಞಾನದ ಕುರಿತಾಗಿ ವಿವರಿಸಿ ಕೊಳಚೆ ನೀರಿನ ಮರುಶುದ್ಧೀಕರಣ ಹಾಗೂ ಸಮರ್ಪಕ ಬಳಕೆ ತಿಳಿಸುತ್ತ, ಭೂಮಿಯಲ್ಲಿ ಅಂತರ್ಜಲ ಹೆಚ್ಚಿಸಲು ತೆಗೆದುಕೊಳ್ಳಬೇಕಾದ ಉಪಕ್ರಮದ ಕುರಿತಾಗಿ ತಿಳಿಸಿದರು.</p>.<p>ಪ್ರಾಚಾರ್ಯ ವಿ.ಎ. ಕುಲಕರ್ಣಿ, ಮಹಾವಿದ್ಯಾಲಯವು ಅಂತರ್ಜಲ ಸಮೃದ್ಧಿಕರಣಕ್ಕೆ ಮಳೆ ಕೊಯ್ಲು ಅಳವಡಿಸಿ ಕೊಂಡಿದೆ ಎಂದರು.</p>.<p>ಕಾಂಕ್ರೀಟ್ ಟೆಕ್ನಾಲಜಿ ವಿಷಯದಲ್ಲಿ ಅತಿ ಹೆಚ್ಚು ಅಂಕಗಳಿಸಿದ ಅಭಿಷೇಕ ಯಂತೂರ್ ಗೆ ಅಲ್ಟ್ರಾಟೇಕ್ ಕಂಪನಿ ವತಿಯಿಂದ ಸನ್ಮಾನಿಸಲಾಯಿತು.</p>.<p>ಅಲ್ಟ್ರಾಟೇಕ್ ಸಿಮೆಂಟ್ನ ಗಿರೀಶ ಪವಾರ ಹಾಗೂ ಪ್ರಸನ್ನ ಉಪ್ಪಿನ, ವಿಭಾಗ ಮುಖ್ಯಸ್ಥ ಪ್ರೊ.ಹರ್ಷ ಜಾಧವ, ಡಾ.ಸ್ನೇಹಾ ಕುಲಕರ್ಣಿ, ಪ್ರೊ.ಸೀಮಾ ಬಸರಿಕಟ್ಟಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260511-20-1465758722</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>