<p>ಹಟ್ಟಿ ಚಿನ್ನದ ಗಣಿ: ಮದುವೆ ಸಮಾಭದಲ್ಲಿ ಬಂದ ಅತಿಥಿಗಳಿಗೆ ಹಟ್ಟಿ ಪಟ್ಟಣದ ನಿವಾಸಿ ಸುಲ್ತಾನ್ ಬಾಬು ಎಂಬ ಯುವಕ ತನ್ನ ವಿವಾಹ(ವಲೀಮಾ) ಕಾರ್ಯಕ್ರಮಕ್ಕೆ ಬಂದ ಅತಿಥಿಗಳಿಗೆ, ಗೆಳೆಯರಿಗೆ ಸಂವಿಧಾನ ಪೀಠಿಕೆ ನೀಡಿದ್ದಾರೆ.</p>.<p>ವೃತ್ತಿಯಲ್ಲಿ ಆಟೊ ಚಾಲಕನಾಗಿರುವ ಸುಲ್ತಾನ್ ಜತ್ತಿ ಕಾಲೊನಿಯಲ್ಲಿ ವಿವಾಹವಾಗಿದ್ದು ಬಂದ ಅತಿಥಿಗಳಿಗೆ ಬಿಳಿ ಶಾಲು, ಟೋಪಿ ಹಾಕುವ ಸಂಪ್ರದಾಯಕ್ಕೆ ಕಡಿವಾಣ ಹಾಕಿ ಸಂವಿಧಾನದ ಪೀಠಿಕೆ ನೀಡಿದ್ದಾರೆ.</p>.<p>‘ಹಟ್ಟಿ ಪಟ್ಟಣದಲ್ಲಿ ವಿವಿಧ ಭಾಗಗಳಿಂದ ಆಗಮಿಸಿದವರು ಚಿನ್ನದ ಗಣಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಧರ್ಮ, ಜಾತಿಯ ಜನರು ಅನ್ಯೋನ್ಯವಾಗಿದ್ದು ಇದಕ್ಕೆ ಮೂಲ ನಮ್ಮ ಸಂವಿಧಾನ ಎಂದು ಆಗಾಗ ಭಾಷಣಗಳಲ್ಲಿ ಕೇಳಿ ಸಂವಿಧಾನದ ಕಡೆ ಆಕರ್ಷಣೆಗೊಂಡು ಈ ನಿರ್ಧಾರ ಕೈಗೊಂಡಿದ್ದೇನೆ’ ಎಂದು ಸುಲ್ತಾನ್ ತಿಳಿಸಿದ್ದಾರೆ.</p>.<p>‘ನನ್ನ ಮಾವ(ಅಕ್ಕನ ಪತಿ) ಲಾಲ್ ಪೀರ್ ಅವರು ಸಾಮಾಜಿಕ ಹೋರಾಟಗಳಲ್ಲಿ ಭಾಗವಹಿಸುತ್ತಾರೆ. ಅವರ ಸಲಹೆ ಮೇರೆಗೆ ಸಂವಿಧಾನ ಪೀಠಿಕೆ ಹಂಚಿದ್ದೇನೆ, ನಮ್ಮ ಸಂವಿಧಾನ ನಮ್ಮ ಹೆಮ್ಮೆಯಾಗಿದೆ’ ಎಂದರು.</p>.<p>ವಿವಾಹಕ್ಕೆ ಬಂದ ಅನೇಕ ಪ್ರಗತಿಪರ ಹೋರಾಟಗಾರರು, ದಲಿತಪರ ಸಂಘಟನೆಗಳ ಮುಖಂಡರು ವರನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260428-32-1866404751</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಟ್ಟಿ ಚಿನ್ನದ ಗಣಿ: ಮದುವೆ ಸಮಾಭದಲ್ಲಿ ಬಂದ ಅತಿಥಿಗಳಿಗೆ ಹಟ್ಟಿ ಪಟ್ಟಣದ ನಿವಾಸಿ ಸುಲ್ತಾನ್ ಬಾಬು ಎಂಬ ಯುವಕ ತನ್ನ ವಿವಾಹ(ವಲೀಮಾ) ಕಾರ್ಯಕ್ರಮಕ್ಕೆ ಬಂದ ಅತಿಥಿಗಳಿಗೆ, ಗೆಳೆಯರಿಗೆ ಸಂವಿಧಾನ ಪೀಠಿಕೆ ನೀಡಿದ್ದಾರೆ.</p>.<p>ವೃತ್ತಿಯಲ್ಲಿ ಆಟೊ ಚಾಲಕನಾಗಿರುವ ಸುಲ್ತಾನ್ ಜತ್ತಿ ಕಾಲೊನಿಯಲ್ಲಿ ವಿವಾಹವಾಗಿದ್ದು ಬಂದ ಅತಿಥಿಗಳಿಗೆ ಬಿಳಿ ಶಾಲು, ಟೋಪಿ ಹಾಕುವ ಸಂಪ್ರದಾಯಕ್ಕೆ ಕಡಿವಾಣ ಹಾಕಿ ಸಂವಿಧಾನದ ಪೀಠಿಕೆ ನೀಡಿದ್ದಾರೆ.</p>.<p>‘ಹಟ್ಟಿ ಪಟ್ಟಣದಲ್ಲಿ ವಿವಿಧ ಭಾಗಗಳಿಂದ ಆಗಮಿಸಿದವರು ಚಿನ್ನದ ಗಣಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಧರ್ಮ, ಜಾತಿಯ ಜನರು ಅನ್ಯೋನ್ಯವಾಗಿದ್ದು ಇದಕ್ಕೆ ಮೂಲ ನಮ್ಮ ಸಂವಿಧಾನ ಎಂದು ಆಗಾಗ ಭಾಷಣಗಳಲ್ಲಿ ಕೇಳಿ ಸಂವಿಧಾನದ ಕಡೆ ಆಕರ್ಷಣೆಗೊಂಡು ಈ ನಿರ್ಧಾರ ಕೈಗೊಂಡಿದ್ದೇನೆ’ ಎಂದು ಸುಲ್ತಾನ್ ತಿಳಿಸಿದ್ದಾರೆ.</p>.<p>‘ನನ್ನ ಮಾವ(ಅಕ್ಕನ ಪತಿ) ಲಾಲ್ ಪೀರ್ ಅವರು ಸಾಮಾಜಿಕ ಹೋರಾಟಗಳಲ್ಲಿ ಭಾಗವಹಿಸುತ್ತಾರೆ. ಅವರ ಸಲಹೆ ಮೇರೆಗೆ ಸಂವಿಧಾನ ಪೀಠಿಕೆ ಹಂಚಿದ್ದೇನೆ, ನಮ್ಮ ಸಂವಿಧಾನ ನಮ್ಮ ಹೆಮ್ಮೆಯಾಗಿದೆ’ ಎಂದರು.</p>.<p>ವಿವಾಹಕ್ಕೆ ಬಂದ ಅನೇಕ ಪ್ರಗತಿಪರ ಹೋರಾಟಗಾರರು, ದಲಿತಪರ ಸಂಘಟನೆಗಳ ಮುಖಂಡರು ವರನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260428-32-1866404751</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>