<p>ಹಾವೇರಿ: ‘ನಮ್ಮ ತಂದೆ ಗೌಂಡಿ (ಕಟ್ಟಡ ನಿರ್ಮಾಣ ಕಾರ್ಮಿಕ) ಕೆಲಸ ಮಾಡುತ್ತಾರೆ. ಅವರ ಕೆಲಸದಿಂದಲೇ ನಾನು ಹಾಗೂ ನನ್ನ ತಮ್ಮ ಎಂ.ಎ. ಓದುತ್ತಿದ್ದೇವೆ. ಇಂದು ನನಗೆ ಸಂದಿರುವ ಚಿನ್ನದ ಪದಕ, ನನ್ನ ತಂದೆಯ ಶ್ರಮದ ಫಲ’...</p>.<p>ನಗರದ ಜಿ.ಎಚ್. ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ನಡೆದ ಹಾವೇರಿ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವದಲ್ಲಿ ಎಂ.ಎ. ಅರ್ಥಶಾಸ್ತ್ರ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಸವಣೂರು ತಾಲ್ಲೂಕಿನ ಹುರುಳಿಕುಪ್ಪಿ ಗ್ರಾಮದ ಉಸ್ಮಾನ್ಸಾಬ್ ಮುಲ್ಲಾ ಅವರ ಮಾತಿದು.</p>.<p>ಶೈಕ್ಷಣಿಕ ವರ್ಷದಲ್ಲಿ ಉತ್ತಮ ಸಾಧನೆ ಮಾಡಿದ ಉಸ್ಮಾನ್ಸಾಬ್ ಮುಲ್ಲಾ ಸೇರಿ ಏಳು ವಿದ್ಯಾರ್ಥಿಗಳಿಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಘಟಿಕೋತ್ಸವದಲ್ಲಿ ಎಂಟು ಚಿನ್ನದ ಪದಕ ಪ್ರದಾನ ಮಾಡಿದರು.</p>.<p>‘ಎಷ್ಟೇ ಕಷ್ಟವಿದ್ದರೂ ತಂದೆ ಇಮಾಮ್ಜಾಫರ್ ಮತ್ತು ತಾಯಿ ಶಮೀನ್ಬಾನು ಅವರು ನಮ್ಮನ್ನು ಕೆಲಸಕ್ಕೆ ಕಳುಹಿಸಲಿಲ್ಲ. ಬಾಲ್ಯದಿಂದಲೇ ಕಲಿಕೆಗೆ ಪ್ರೋತ್ಸಾಹ ನೀಡಿದರು. ಕೆ–ಸೆಟ್ ಪರೀಕ್ಷೆ ಉತ್ತೀರ್ಣಗೊಂಡಿರುವೆ. ಪಿಎಚ್.ಡಿ ಪೂರ್ಣಗೊಳಿಸಿ, ಪ್ರಾಧ್ಯಾಪಕನಾಗುವ ಆಸೆಯಿದೆ’ ಎಂದು ಉಸ್ಮಾನ್ಸಾಬ್ ಮುಲ್ಲಾ ‘ಪ್ರಜಾವಾಣಿ’ಗೆ ಹೇಳಿದರು.</p>.<p>ಬಾಲ್ಯದಲ್ಲೇ ತಂದೆ–ತಾಯಿ ಕಳೆದುಕೊಂಡರು: ವಿಶ್ವವಿದ್ಯಾಲಯಕ್ಕೆ ಅಗ್ರಸ್ಥಾನ ಪಡೆದುಕೊಂಡಿರುವ ಎಂ.ಎ. ಸಮಾಜಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ನೇತ್ರಾ ಹರಿಜನ, ಎರಡು ಚಿನ್ನದ ಪದಕಗಳನ್ನು ಪಡೆದಿದ್ದಾರೆ.</p>.<p>ಡೊಳ್ಳೇಶ್ವರ ಗ್ರಾಮದ ನೇತ್ರಾ ಅವರು ತಂದೆ ನೀಲಪ್ಪ ಹಾಗೂ ತಾಯಿ ಚನ್ನವ್ವ ಅವರನ್ನು ಬಾಲ್ಯದಲ್ಲೇ ಕಳೆದುಕೊಂಡಿದ್ದಾರೆ. ಸಂಬಂಧಿಕರ ಆಶ್ರಯದಲ್ಲಿ ಬೆಳೆಯುತ್ತಲೇ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಅವರ ಕಲಿಕೆಗೆ ಪತಿ ಅಭಿಷೇಕ ಓಲೇಕಾರ ಅವರ ಸಹಕಾರವಿದೆ.</p>.<p>‘ರಾಜ್ಯಪಾಲರಿಂದ ಚಿನ್ನದ ಪದಕ ಪಡೆದಿರುವುದಕ್ಕೆ ಖುಷಿಯಾಯಿತು. ಜೀವನದಲ್ಲಿ ಎಷ್ಟೇ ಕಷ್ಟವಿದ್ದರೂ ಕಲಿಕೆಯಲ್ಲಿ ನಿರಾಸಕ್ತಿ ಇರಬಾರದು. ಓದಿನಲ್ಲಿ ಆಸಕ್ತಿ ತೋರಿಸಿದರೆ, ನನ್ನಂತೆ ಚಿನ್ನದ ಪದಕ ಪಡೆಯಬಹುದು. ಈಗ ನಾನು ಪಿಎಚ್.ಡಿ ಮಾಡುತ್ತಿದ್ದೇನೆ’ ಎಂದು ನೇತ್ರಾ ತಿಳಿಸಿದರು.</p>.<p>ಎಂ.ಎ. ಇಂಗ್ಲಿಷ್ ವಿಭಾಗದಲ್ಲಿ ಕಾವ್ಯಾ ಪ್ರಸಾದಿಮಠ, ಎಂ.ಎ. ಕನ್ನಡದಲ್ಲಿ ಪ್ರಿಯಾಂಕಾ ಈಳಗೇರ, ಎಂ.ಕಾಂ.ನಲ್ಲಿ ಐಶ್ವರ್ಯ ಮುದಿಗೌಡರ, ಎಂ.ಎ. ಸಮಾಜ ಕಾರ್ಯ ವಿಭಾಗದಲ್ಲಿ ಧನಲಕ್ಷ್ಮಿ ಗಂಗಾಧರ ಪಾಟೀಲ ಹಾಗೂ ಬಿ.ಎಡ್.ನಲ್ಲಿ ನಾಗಲಕ್ಷ್ಮಿ ಬೇವಿನಮರದ ಅವರು ಚಿನ್ನದ ಪದಕ ಪಡೆದಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260407-22-895139989</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಾವೇರಿ: ‘ನಮ್ಮ ತಂದೆ ಗೌಂಡಿ (ಕಟ್ಟಡ ನಿರ್ಮಾಣ ಕಾರ್ಮಿಕ) ಕೆಲಸ ಮಾಡುತ್ತಾರೆ. ಅವರ ಕೆಲಸದಿಂದಲೇ ನಾನು ಹಾಗೂ ನನ್ನ ತಮ್ಮ ಎಂ.ಎ. ಓದುತ್ತಿದ್ದೇವೆ. ಇಂದು ನನಗೆ ಸಂದಿರುವ ಚಿನ್ನದ ಪದಕ, ನನ್ನ ತಂದೆಯ ಶ್ರಮದ ಫಲ’...</p>.<p>ನಗರದ ಜಿ.ಎಚ್. ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ನಡೆದ ಹಾವೇರಿ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವದಲ್ಲಿ ಎಂ.ಎ. ಅರ್ಥಶಾಸ್ತ್ರ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಸವಣೂರು ತಾಲ್ಲೂಕಿನ ಹುರುಳಿಕುಪ್ಪಿ ಗ್ರಾಮದ ಉಸ್ಮಾನ್ಸಾಬ್ ಮುಲ್ಲಾ ಅವರ ಮಾತಿದು.</p>.<p>ಶೈಕ್ಷಣಿಕ ವರ್ಷದಲ್ಲಿ ಉತ್ತಮ ಸಾಧನೆ ಮಾಡಿದ ಉಸ್ಮಾನ್ಸಾಬ್ ಮುಲ್ಲಾ ಸೇರಿ ಏಳು ವಿದ್ಯಾರ್ಥಿಗಳಿಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಘಟಿಕೋತ್ಸವದಲ್ಲಿ ಎಂಟು ಚಿನ್ನದ ಪದಕ ಪ್ರದಾನ ಮಾಡಿದರು.</p>.<p>‘ಎಷ್ಟೇ ಕಷ್ಟವಿದ್ದರೂ ತಂದೆ ಇಮಾಮ್ಜಾಫರ್ ಮತ್ತು ತಾಯಿ ಶಮೀನ್ಬಾನು ಅವರು ನಮ್ಮನ್ನು ಕೆಲಸಕ್ಕೆ ಕಳುಹಿಸಲಿಲ್ಲ. ಬಾಲ್ಯದಿಂದಲೇ ಕಲಿಕೆಗೆ ಪ್ರೋತ್ಸಾಹ ನೀಡಿದರು. ಕೆ–ಸೆಟ್ ಪರೀಕ್ಷೆ ಉತ್ತೀರ್ಣಗೊಂಡಿರುವೆ. ಪಿಎಚ್.ಡಿ ಪೂರ್ಣಗೊಳಿಸಿ, ಪ್ರಾಧ್ಯಾಪಕನಾಗುವ ಆಸೆಯಿದೆ’ ಎಂದು ಉಸ್ಮಾನ್ಸಾಬ್ ಮುಲ್ಲಾ ‘ಪ್ರಜಾವಾಣಿ’ಗೆ ಹೇಳಿದರು.</p>.<p>ಬಾಲ್ಯದಲ್ಲೇ ತಂದೆ–ತಾಯಿ ಕಳೆದುಕೊಂಡರು: ವಿಶ್ವವಿದ್ಯಾಲಯಕ್ಕೆ ಅಗ್ರಸ್ಥಾನ ಪಡೆದುಕೊಂಡಿರುವ ಎಂ.ಎ. ಸಮಾಜಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ನೇತ್ರಾ ಹರಿಜನ, ಎರಡು ಚಿನ್ನದ ಪದಕಗಳನ್ನು ಪಡೆದಿದ್ದಾರೆ.</p>.<p>ಡೊಳ್ಳೇಶ್ವರ ಗ್ರಾಮದ ನೇತ್ರಾ ಅವರು ತಂದೆ ನೀಲಪ್ಪ ಹಾಗೂ ತಾಯಿ ಚನ್ನವ್ವ ಅವರನ್ನು ಬಾಲ್ಯದಲ್ಲೇ ಕಳೆದುಕೊಂಡಿದ್ದಾರೆ. ಸಂಬಂಧಿಕರ ಆಶ್ರಯದಲ್ಲಿ ಬೆಳೆಯುತ್ತಲೇ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಅವರ ಕಲಿಕೆಗೆ ಪತಿ ಅಭಿಷೇಕ ಓಲೇಕಾರ ಅವರ ಸಹಕಾರವಿದೆ.</p>.<p>‘ರಾಜ್ಯಪಾಲರಿಂದ ಚಿನ್ನದ ಪದಕ ಪಡೆದಿರುವುದಕ್ಕೆ ಖುಷಿಯಾಯಿತು. ಜೀವನದಲ್ಲಿ ಎಷ್ಟೇ ಕಷ್ಟವಿದ್ದರೂ ಕಲಿಕೆಯಲ್ಲಿ ನಿರಾಸಕ್ತಿ ಇರಬಾರದು. ಓದಿನಲ್ಲಿ ಆಸಕ್ತಿ ತೋರಿಸಿದರೆ, ನನ್ನಂತೆ ಚಿನ್ನದ ಪದಕ ಪಡೆಯಬಹುದು. ಈಗ ನಾನು ಪಿಎಚ್.ಡಿ ಮಾಡುತ್ತಿದ್ದೇನೆ’ ಎಂದು ನೇತ್ರಾ ತಿಳಿಸಿದರು.</p>.<p>ಎಂ.ಎ. ಇಂಗ್ಲಿಷ್ ವಿಭಾಗದಲ್ಲಿ ಕಾವ್ಯಾ ಪ್ರಸಾದಿಮಠ, ಎಂ.ಎ. ಕನ್ನಡದಲ್ಲಿ ಪ್ರಿಯಾಂಕಾ ಈಳಗೇರ, ಎಂ.ಕಾಂ.ನಲ್ಲಿ ಐಶ್ವರ್ಯ ಮುದಿಗೌಡರ, ಎಂ.ಎ. ಸಮಾಜ ಕಾರ್ಯ ವಿಭಾಗದಲ್ಲಿ ಧನಲಕ್ಷ್ಮಿ ಗಂಗಾಧರ ಪಾಟೀಲ ಹಾಗೂ ಬಿ.ಎಡ್.ನಲ್ಲಿ ನಾಗಲಕ್ಷ್ಮಿ ಬೇವಿನಮರದ ಅವರು ಚಿನ್ನದ ಪದಕ ಪಡೆದಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260407-22-895139989</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>