<p>ಹಾವೇರಿ: ‘ಮನಸ್ಸು ಹೆಚ್ಚು ಚಾಂಚಲ್ಯದಿಂದ ಕೂಡಿರುತ್ತದೆ. ಅಂಥ ಮನಸ್ಸಿನ ಚಾಂಚಲ್ಯವನ್ನು ಹಿಡಿತದಲ್ಲಿ ತರಲು ಪುಸ್ತಕಗಳು ಬೇಕು. ಶಾಂತವಾಗಿ ಗ್ರಂಥಾಲಯದಲ್ಲಿ ಕುಳಿತು ಓದಿದಾಗ ಮನಸ್ಸು ಕೇಂದ್ರೀಕೃತವಾಗುತ್ತದೆ. ದಿನವು ಒಂದು ತಾಸು ಪುಸ್ತಕ ಓದಿದರೆ, ಎಲ್ಲರೂ ಸಮಾಧಾನಿಯಾಗಿರಬಹುದು’ ಎಂದು ಲೇಖಕಿ ಸುರೇಖಾ ದತ್ತಾತ್ರೇಯ ಕುಲಕರ್ಣಿ ಹೇಳಿದರು.</p>.<p>ನಗರದ ಬಜಾರ್ ರಸ್ತೆಯಲ್ಲಿರುವ ಕಲಾವಿದ ಸುಗಂಧಿ ಅವರ ವಸ್ತ್ರ ಸಂಗ್ರಹಾಲಯದಲ್ಲಿ ಪುಸ್ತಕ ಪ್ರಾಧಿಕಾರ, ಮನೆಗೊಂದು ಗ್ರಂಥಾಲಯ ಜಿಲ್ಲಾ ಜಾಗೃತಿ ಸಮಿತಿ ಆಶ್ರಯದಲ್ಲಿ ‘ಮನೆಗೊಂದು ಗ್ರಂಥಾಲಯ’ ಅನುಷ್ಠಾನ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ನಿವೃತ್ತ ಶಿಕ್ಷಕ ರಾಮಚಂದ್ರ ದೇಸಾಯಿ ಮಾತನಾಡಿ, ‘1919ರಲ್ಲಿ ಅ.ನ. ಕುಂದಾಪೂರ ಅವರು ಹಾನಗಲ್ ತಾಲ್ಲೂಕಿನಲ್ಲಿ ಗ್ರಂಥಾಲಯ ಚಳವಳಿ ಆರಂಭಿಸಿದ್ದರು. ಅವರಿಗೆ ಪ್ರೇರಣೆಯಾದದ್ದು, ಗಳಗನಾಥರ ಕಾದಂಬರಿಗಳು. ಪುಸ್ತಕ ಆಂದೋಲನ ಬಂದಾಗ ಗಳಗನಾಥರ ಹೆಸರು ಬರಲೇಬೇಕು’ ಎಂದರು.</p>.<p>ವಕೀಲ ಮಧುಲಿಕಾ ದೇಸಾಯಿ ಮಾತನಾಡಿ, ‘ಕಾರಂತರ ಕಾದಂಬರಿ ಓದುವುದರಿಂದಲೇ ಮರಾಠಿ ನೆಲದಿಂದ ಬಂದ ನನಗೆ, ಕರಾವಳಿಯ ಪರಿಚಯವಾಯಿತು. ಪುಸ್ತಕಗಳು ಮನೆ ಮಕ್ಕಳಿಗೆ ದಾರಿ ದೀಪಗಳು’ ಎಂದರು.</p>.<p>ಕಾರ್ಯಕ್ರಮದಲ್ಲಿ ಸುಗಂಧಿ ಅವರಿಗೆ 50 ಪುಸ್ತಕಗಳನ್ನು ಗ್ರಂಥಾಲಯಕ್ಕೆ ನೀಡಿ ಸನ್ಮಾನಿಸಲಾಯಿತು. ಪ್ರತಿಯಾಗಿ ರಾಮಕೃಷ್ಣ ಸುಗಂಧಿ ಅವರು 100 ಪುಸ್ತಕಗಳನ್ನು ಜಾಗೃತಿ ಸಮಿತಿಗೆ ನೀಡಿದರು.</p>.<p>ಕವಿ ಸತೀಶ ಕುಲಕರ್ಣಿ, ರಾಜು ಕಾಳೆ, ರಾಧಿಕಾ ದೇಸಾಯಿ, ಎಚ್. ಸುಧಾ, ಶಕುಂತಲಾ ಕನವಳ್ಳಿ, ದಿನೇಶ ಕುಲಕರ್ಣಿ, ನರಸಿಂಹ ಕೋಮಾರ, ಆರ್.ಸಿ. ದೇಸಾಯಿ, ಪ್ರಹ್ಲಾದ ಸಾಂಬ್ರಾಣಿ, ಗಜಾನನ ಧೊಂಗಡಿ, ಎಸ್.ಆರ್. ಹಿರೇಮಠ, ಲಿಂಗಯ್ಯ ಹಿರೇಮಠ ಹಾಗೂ ಇತರರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260528-22-649398364</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಾವೇರಿ: ‘ಮನಸ್ಸು ಹೆಚ್ಚು ಚಾಂಚಲ್ಯದಿಂದ ಕೂಡಿರುತ್ತದೆ. ಅಂಥ ಮನಸ್ಸಿನ ಚಾಂಚಲ್ಯವನ್ನು ಹಿಡಿತದಲ್ಲಿ ತರಲು ಪುಸ್ತಕಗಳು ಬೇಕು. ಶಾಂತವಾಗಿ ಗ್ರಂಥಾಲಯದಲ್ಲಿ ಕುಳಿತು ಓದಿದಾಗ ಮನಸ್ಸು ಕೇಂದ್ರೀಕೃತವಾಗುತ್ತದೆ. ದಿನವು ಒಂದು ತಾಸು ಪುಸ್ತಕ ಓದಿದರೆ, ಎಲ್ಲರೂ ಸಮಾಧಾನಿಯಾಗಿರಬಹುದು’ ಎಂದು ಲೇಖಕಿ ಸುರೇಖಾ ದತ್ತಾತ್ರೇಯ ಕುಲಕರ್ಣಿ ಹೇಳಿದರು.</p>.<p>ನಗರದ ಬಜಾರ್ ರಸ್ತೆಯಲ್ಲಿರುವ ಕಲಾವಿದ ಸುಗಂಧಿ ಅವರ ವಸ್ತ್ರ ಸಂಗ್ರಹಾಲಯದಲ್ಲಿ ಪುಸ್ತಕ ಪ್ರಾಧಿಕಾರ, ಮನೆಗೊಂದು ಗ್ರಂಥಾಲಯ ಜಿಲ್ಲಾ ಜಾಗೃತಿ ಸಮಿತಿ ಆಶ್ರಯದಲ್ಲಿ ‘ಮನೆಗೊಂದು ಗ್ರಂಥಾಲಯ’ ಅನುಷ್ಠಾನ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ನಿವೃತ್ತ ಶಿಕ್ಷಕ ರಾಮಚಂದ್ರ ದೇಸಾಯಿ ಮಾತನಾಡಿ, ‘1919ರಲ್ಲಿ ಅ.ನ. ಕುಂದಾಪೂರ ಅವರು ಹಾನಗಲ್ ತಾಲ್ಲೂಕಿನಲ್ಲಿ ಗ್ರಂಥಾಲಯ ಚಳವಳಿ ಆರಂಭಿಸಿದ್ದರು. ಅವರಿಗೆ ಪ್ರೇರಣೆಯಾದದ್ದು, ಗಳಗನಾಥರ ಕಾದಂಬರಿಗಳು. ಪುಸ್ತಕ ಆಂದೋಲನ ಬಂದಾಗ ಗಳಗನಾಥರ ಹೆಸರು ಬರಲೇಬೇಕು’ ಎಂದರು.</p>.<p>ವಕೀಲ ಮಧುಲಿಕಾ ದೇಸಾಯಿ ಮಾತನಾಡಿ, ‘ಕಾರಂತರ ಕಾದಂಬರಿ ಓದುವುದರಿಂದಲೇ ಮರಾಠಿ ನೆಲದಿಂದ ಬಂದ ನನಗೆ, ಕರಾವಳಿಯ ಪರಿಚಯವಾಯಿತು. ಪುಸ್ತಕಗಳು ಮನೆ ಮಕ್ಕಳಿಗೆ ದಾರಿ ದೀಪಗಳು’ ಎಂದರು.</p>.<p>ಕಾರ್ಯಕ್ರಮದಲ್ಲಿ ಸುಗಂಧಿ ಅವರಿಗೆ 50 ಪುಸ್ತಕಗಳನ್ನು ಗ್ರಂಥಾಲಯಕ್ಕೆ ನೀಡಿ ಸನ್ಮಾನಿಸಲಾಯಿತು. ಪ್ರತಿಯಾಗಿ ರಾಮಕೃಷ್ಣ ಸುಗಂಧಿ ಅವರು 100 ಪುಸ್ತಕಗಳನ್ನು ಜಾಗೃತಿ ಸಮಿತಿಗೆ ನೀಡಿದರು.</p>.<p>ಕವಿ ಸತೀಶ ಕುಲಕರ್ಣಿ, ರಾಜು ಕಾಳೆ, ರಾಧಿಕಾ ದೇಸಾಯಿ, ಎಚ್. ಸುಧಾ, ಶಕುಂತಲಾ ಕನವಳ್ಳಿ, ದಿನೇಶ ಕುಲಕರ್ಣಿ, ನರಸಿಂಹ ಕೋಮಾರ, ಆರ್.ಸಿ. ದೇಸಾಯಿ, ಪ್ರಹ್ಲಾದ ಸಾಂಬ್ರಾಣಿ, ಗಜಾನನ ಧೊಂಗಡಿ, ಎಸ್.ಆರ್. ಹಿರೇಮಠ, ಲಿಂಗಯ್ಯ ಹಿರೇಮಠ ಹಾಗೂ ಇತರರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260528-22-649398364</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>