<p><em>ಪ್ರಜಾವಾಣಿವಾರ್ತೆ</em></p>.<p>ಹಿರಿಯೂರು: ‘ಯಾದವ –ಗೊಲ್ಲ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಒತ್ತು ನೀಡುತ್ತೇವೆ’ ಎಂದು ಯಾದವ ಸಂಘದ ಜಿಲ್ಲಾ ಘಟಕದ ನೂತನ ನಿರ್ದೇಶಕ ಪ್ರಕಾಶ್ ಮುಂಗುಸುವಳ್ಳಿ ಹೇಳಿದರು.</p>.<p>ನಗರದ ವೇದಾವತಿ ಬಡಾವಣೆಯ ಶ್ರೀಕೃಷ್ಣ ದೇವಸ್ಥಾನದಲ್ಲಿ ಶನಿವಾರ ಯಾದವ–ಗೊಲ್ಲ ಸಂಘದ ಜಿಲ್ಲಾ ಘಟಕಕ್ಕೆ ನಡೆದ ಚುನಾವಣೆಯಲ್ಲಿ ವಿಜೇತರಾದವರು ಹಾಗೂ ಗೆಲುವಿಗೆ ಸಹಕರಿಸಿದ ಮುಖಂಡರಿಗೆ ಏರ್ಪಡಿಸಿದ್ದ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದರು.</p>.<p>‘ಮೊದಲ ಬಾರಿಗೆ ಗೊಲ್ಲ–ಯಾದವ ಸಂಘದ ಜಿಲ್ಲಾ ಘಟಕಕ್ಕೆ ಚುನಾವಣೆ ನಡೆದಿದ್ದು, ಇದುವರೆಗೆ ಸಂಘದಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಿಕೊಂಡು ಹೋಗುತ್ತೇನೆ’ ಎಂದು ತಿಳಿಸಿದರು.</p>.<p>‘ಹಳೆಯ ಆಡಳಿತ ಮಂಡಳಿಯಿಂದ ಸಂಘದಲ್ಲಿ ಅನೇಕ ಅವ್ಯವಹಾರಗಳು ನಡೆದಿದ್ದು, ಅವುಗಳನ್ನೆಲ್ಲಾ ಬಯಲಿಗೆಳೆದು ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಕ್ರಮ ವಹಿಸಬೇಕು’ ಎಂದು ಅಧ್ಯಕ್ಷತೆ ವಹಿಸಿದ್ದ ಗೊಲ್ಲ–ಯಾದವ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಆರ್. ರಂಗಸ್ವಾಮಿ ಆಗ್ರಹಿಸಿದರು.</p>.<p>ಪುರಸಭೆ ಮಾಜಿ ಸದಸ್ಯ ಬಿ.ಕೆ. ಕರಿಯಪ್ಪ, ನೂತನ ನಿರ್ದೇಶಕರಾದ ಬಿ.ಡಿ.ಬಸವರಾಜು, ಆಕರ್ಷ ಯಾದವ್, ಗೊಲ್ಲಹಳ್ಳಿ ಪರಮೇಶ್, ಅಶೋಕ್, ವೀರೇಶ್, ಚಿತ್ತಪ್ಪ, ರೇವಣಸಿದ್ದಪ್ಪ, ಯಾದವ–ಗೊಲ್ಲ ನೌಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಚ್. ತಿಪ್ಪೇಸ್ವಾಮಿ, ನಗರಸಭೆ ಮಾಜಿ ಸದಸ್ಯ ವಿ. ಶಿವಣ್ಣ, ಚಿತ್ರಜಿತ್ ಯಾದವ್, ಸಿ. ಶಿವಾನಂದ ಮಾತನಾಡಿದರು.</p>.<p>ಮುಖಂಡರಾದ ಎ.ಜಿ.ತಿಮ್ಮಯ್ಯ, ಮದ್ದನಕುಂಟೆ ನಾಗಪ್ಪ, ಕೋರ್ಟ್ ನಾಗಣ್ಣ, ರಂಗನಾಥ್, ಬಂಗಾರಪ್ಪ, ಬೆನಕನಹಳ್ಳಿ ಶಿವಮೂರ್ತಿ, ನಿತ್ಯಾನಂದ ಯಾದವ್, ನಿರಂಜನ್, ಡಾಬಾ ಚಿಕ್ಕಣ್ಣ, ಕೂನಿಕೆರೆ ರಾಮಣ್ಣ, ಸಂಪತ್ ಕುಮಾರ್, ಕೃಷ್ಣಮೂರ್ತಿ, ತಮ್ಮಣ್ಣ, ಪ್ರಹ್ಲಾದ್, ಮುರುಳಿ, ಉಮೇಶ್, ಕಾಂತರಾಜು, ಚಿತ್ತಯ್ಯ, ರಾಮು, ತಿಮ್ಮಣ್ಣ, ಪ್ರಸನ್ನ ಕುಮಾರ್, ಸಿದ್ದಪ್ಪ, ರಂಗಸ್ವಾಮಿ, ಜಯಲಿಂಗಪ್ಪ, ಈರಣ್ಣ ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260524-44-682408028</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><em>ಪ್ರಜಾವಾಣಿವಾರ್ತೆ</em></p>.<p>ಹಿರಿಯೂರು: ‘ಯಾದವ –ಗೊಲ್ಲ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಒತ್ತು ನೀಡುತ್ತೇವೆ’ ಎಂದು ಯಾದವ ಸಂಘದ ಜಿಲ್ಲಾ ಘಟಕದ ನೂತನ ನಿರ್ದೇಶಕ ಪ್ರಕಾಶ್ ಮುಂಗುಸುವಳ್ಳಿ ಹೇಳಿದರು.</p>.<p>ನಗರದ ವೇದಾವತಿ ಬಡಾವಣೆಯ ಶ್ರೀಕೃಷ್ಣ ದೇವಸ್ಥಾನದಲ್ಲಿ ಶನಿವಾರ ಯಾದವ–ಗೊಲ್ಲ ಸಂಘದ ಜಿಲ್ಲಾ ಘಟಕಕ್ಕೆ ನಡೆದ ಚುನಾವಣೆಯಲ್ಲಿ ವಿಜೇತರಾದವರು ಹಾಗೂ ಗೆಲುವಿಗೆ ಸಹಕರಿಸಿದ ಮುಖಂಡರಿಗೆ ಏರ್ಪಡಿಸಿದ್ದ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದರು.</p>.<p>‘ಮೊದಲ ಬಾರಿಗೆ ಗೊಲ್ಲ–ಯಾದವ ಸಂಘದ ಜಿಲ್ಲಾ ಘಟಕಕ್ಕೆ ಚುನಾವಣೆ ನಡೆದಿದ್ದು, ಇದುವರೆಗೆ ಸಂಘದಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಿಕೊಂಡು ಹೋಗುತ್ತೇನೆ’ ಎಂದು ತಿಳಿಸಿದರು.</p>.<p>‘ಹಳೆಯ ಆಡಳಿತ ಮಂಡಳಿಯಿಂದ ಸಂಘದಲ್ಲಿ ಅನೇಕ ಅವ್ಯವಹಾರಗಳು ನಡೆದಿದ್ದು, ಅವುಗಳನ್ನೆಲ್ಲಾ ಬಯಲಿಗೆಳೆದು ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಕ್ರಮ ವಹಿಸಬೇಕು’ ಎಂದು ಅಧ್ಯಕ್ಷತೆ ವಹಿಸಿದ್ದ ಗೊಲ್ಲ–ಯಾದವ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಆರ್. ರಂಗಸ್ವಾಮಿ ಆಗ್ರಹಿಸಿದರು.</p>.<p>ಪುರಸಭೆ ಮಾಜಿ ಸದಸ್ಯ ಬಿ.ಕೆ. ಕರಿಯಪ್ಪ, ನೂತನ ನಿರ್ದೇಶಕರಾದ ಬಿ.ಡಿ.ಬಸವರಾಜು, ಆಕರ್ಷ ಯಾದವ್, ಗೊಲ್ಲಹಳ್ಳಿ ಪರಮೇಶ್, ಅಶೋಕ್, ವೀರೇಶ್, ಚಿತ್ತಪ್ಪ, ರೇವಣಸಿದ್ದಪ್ಪ, ಯಾದವ–ಗೊಲ್ಲ ನೌಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಚ್. ತಿಪ್ಪೇಸ್ವಾಮಿ, ನಗರಸಭೆ ಮಾಜಿ ಸದಸ್ಯ ವಿ. ಶಿವಣ್ಣ, ಚಿತ್ರಜಿತ್ ಯಾದವ್, ಸಿ. ಶಿವಾನಂದ ಮಾತನಾಡಿದರು.</p>.<p>ಮುಖಂಡರಾದ ಎ.ಜಿ.ತಿಮ್ಮಯ್ಯ, ಮದ್ದನಕುಂಟೆ ನಾಗಪ್ಪ, ಕೋರ್ಟ್ ನಾಗಣ್ಣ, ರಂಗನಾಥ್, ಬಂಗಾರಪ್ಪ, ಬೆನಕನಹಳ್ಳಿ ಶಿವಮೂರ್ತಿ, ನಿತ್ಯಾನಂದ ಯಾದವ್, ನಿರಂಜನ್, ಡಾಬಾ ಚಿಕ್ಕಣ್ಣ, ಕೂನಿಕೆರೆ ರಾಮಣ್ಣ, ಸಂಪತ್ ಕುಮಾರ್, ಕೃಷ್ಣಮೂರ್ತಿ, ತಮ್ಮಣ್ಣ, ಪ್ರಹ್ಲಾದ್, ಮುರುಳಿ, ಉಮೇಶ್, ಕಾಂತರಾಜು, ಚಿತ್ತಯ್ಯ, ರಾಮು, ತಿಮ್ಮಣ್ಣ, ಪ್ರಸನ್ನ ಕುಮಾರ್, ಸಿದ್ದಪ್ಪ, ರಂಗಸ್ವಾಮಿ, ಜಯಲಿಂಗಪ್ಪ, ಈರಣ್ಣ ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260524-44-682408028</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>