<p>ಹೊನ್ನಾವರ: ‘ಮಹಿಳೆಯರನ್ನು ಸಮಾನತೆ ಹಾಗೂ ಗೌರವದಿಂದ ನಡೆಸಿಕೊಳ್ಳಬೇಕು’ ಎಂದು ಕವಿ ಮಾಧವಿ ಭಂಡಾರಿ ಹೇಳಿದರು.</p>.<p>ಮಹಿಳಾ ದಿನಾಚರಣೆ ಅಂಗವಾಗಿ ಸಾಹಿತಿ ಡಾ.ಎಚ್.ಎಸ್.ಅನುಪಮಾ ನೇತೃತ್ವದ ಸಮತಾ ಬಳಗದಿಂದ ಕವಲಕ್ಕಿಯಲ್ಲಿ ಭಾನುವಾರ ನಡೆದ ‘ಮಹಿಳಾ ಚೈತನ್ಯ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಪ್ರತೀಕ್ಷಾ ಚಿಕ್ಕನಕೋಡ ಅವರ ಚಿತ್ರ ಪ್ರದರ್ಶನ ಉದ್ಘಾಟಿಸಿದ ಇಂಗ್ಲಿಷ್ ಉಪನ್ಯಾಸಕಿ ವೃಂದಾ ಹೆಗಡೆ ಹಾಗೂ ಅವರ ಪತಿ ಸುಬ್ರಾಯ ಹೆಗಡೆ ಮಾತನಾಡಿದರು.</p>.<p>ಆಶಾ ಕಾರ್ಯಕರ್ತೆ ಅರುಣ ಮಡಿವಾಳ, ಚಿತ್ರ ಕಲಾವಿದೆ ಪ್ರತೀಕ್ಷಾ ಚಿಕ್ಕನಕೋಡ, ವಾಹನ ಚಾಲನಾ ತರಬೇತಿ ಸಂಸ್ಥೆಯ ಶಾರದಾ ಕೆರಕೋಣ, ಗೃಹಿಣಿ ಶೈಲಾ ಕರ್ಕಿ, ದರ್ಜಿ ಸುಮಂಗಲಾ, ಆಸ್ಪತ್ರೆ ಸ್ವಚ್ಛತಾ ಸಿಬ್ಬಂದಿ ಮಂಗಳಾ ಪಟಗಾರ, ವಕೀಲೆ ಸರೋಜಾ ಎಂ.ಎಸ್. ಮಾತನಾಡಿದರು.</p>.<p>ಪವಿತ್ರಾ ಚಿಕ್ಕನಕೋಡ ಅವರ ‘ಯಾರಿಗ್ ಬೇಕು ಯುದ್ಧ, ಸಾಕು ನಿಲ್ಸಿ’ ಏಕವ್ಯಕ್ತಿ ಪ್ರದರ್ಶನ, ಕೃತಿ ಬಂಟ್ವಾಳ ಪ್ರದರ್ಶಿಸಿದ ‘ಸಮತೆಯೆಡೆಗೆ’ ರಂಗರೂಪಕ, ಸ್ಥಳೀಯ ಮಹಿಳೆಯರಿಂದ ನಡೆದ ವಿವಿಧ ಮನರಂಜನಾ ಕಾರ್ಯ ಕ್ರಮ ಪ್ರೇಕ್ಷಕರಿಗೆ ಮುದ ನೀಡಿದವು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260330-20-1684722682</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೊನ್ನಾವರ: ‘ಮಹಿಳೆಯರನ್ನು ಸಮಾನತೆ ಹಾಗೂ ಗೌರವದಿಂದ ನಡೆಸಿಕೊಳ್ಳಬೇಕು’ ಎಂದು ಕವಿ ಮಾಧವಿ ಭಂಡಾರಿ ಹೇಳಿದರು.</p>.<p>ಮಹಿಳಾ ದಿನಾಚರಣೆ ಅಂಗವಾಗಿ ಸಾಹಿತಿ ಡಾ.ಎಚ್.ಎಸ್.ಅನುಪಮಾ ನೇತೃತ್ವದ ಸಮತಾ ಬಳಗದಿಂದ ಕವಲಕ್ಕಿಯಲ್ಲಿ ಭಾನುವಾರ ನಡೆದ ‘ಮಹಿಳಾ ಚೈತನ್ಯ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಪ್ರತೀಕ್ಷಾ ಚಿಕ್ಕನಕೋಡ ಅವರ ಚಿತ್ರ ಪ್ರದರ್ಶನ ಉದ್ಘಾಟಿಸಿದ ಇಂಗ್ಲಿಷ್ ಉಪನ್ಯಾಸಕಿ ವೃಂದಾ ಹೆಗಡೆ ಹಾಗೂ ಅವರ ಪತಿ ಸುಬ್ರಾಯ ಹೆಗಡೆ ಮಾತನಾಡಿದರು.</p>.<p>ಆಶಾ ಕಾರ್ಯಕರ್ತೆ ಅರುಣ ಮಡಿವಾಳ, ಚಿತ್ರ ಕಲಾವಿದೆ ಪ್ರತೀಕ್ಷಾ ಚಿಕ್ಕನಕೋಡ, ವಾಹನ ಚಾಲನಾ ತರಬೇತಿ ಸಂಸ್ಥೆಯ ಶಾರದಾ ಕೆರಕೋಣ, ಗೃಹಿಣಿ ಶೈಲಾ ಕರ್ಕಿ, ದರ್ಜಿ ಸುಮಂಗಲಾ, ಆಸ್ಪತ್ರೆ ಸ್ವಚ್ಛತಾ ಸಿಬ್ಬಂದಿ ಮಂಗಳಾ ಪಟಗಾರ, ವಕೀಲೆ ಸರೋಜಾ ಎಂ.ಎಸ್. ಮಾತನಾಡಿದರು.</p>.<p>ಪವಿತ್ರಾ ಚಿಕ್ಕನಕೋಡ ಅವರ ‘ಯಾರಿಗ್ ಬೇಕು ಯುದ್ಧ, ಸಾಕು ನಿಲ್ಸಿ’ ಏಕವ್ಯಕ್ತಿ ಪ್ರದರ್ಶನ, ಕೃತಿ ಬಂಟ್ವಾಳ ಪ್ರದರ್ಶಿಸಿದ ‘ಸಮತೆಯೆಡೆಗೆ’ ರಂಗರೂಪಕ, ಸ್ಥಳೀಯ ಮಹಿಳೆಯರಿಂದ ನಡೆದ ವಿವಿಧ ಮನರಂಜನಾ ಕಾರ್ಯ ಕ್ರಮ ಪ್ರೇಕ್ಷಕರಿಗೆ ಮುದ ನೀಡಿದವು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260330-20-1684722682</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>