<p>ಹೊಸನಗರ: ಕಸಾಪ ತಾಲ್ಲೂಕು ಘಟಕ ಹಾಗೂ ಪುಸ್ತಕ ಪ್ರಾಧಿಕಾರದ ಆಶ್ರಯದಲ್ಲಿ ಸಾಹಿತಿ, ನಿಟ್ಟೂರು ಸಮೀಪದ ಸಿಡ್ಲಕುಣಿ ನಿವಾಸಿ ಪಿ. ಶಾಂತರಾಮ ಪ್ರಭು ಅವರ ಮನೆಯಲ್ಲಿ ಈಚೆಗೆ ‘ಮನೆಗೊಂದು ಗ್ರಂಥಾಲಯ’ ಎಂಬ ವಿಭಿನ್ನ ಕಾರ್ಯಕ್ರಮ ನಡೆಯಿತು.</p>.<p>‘ಶಾಂತರಾಮ ಪ್ರಭು ಅವರು ಪುಸ್ತಕಗಳನ್ನು ಸಂಗ್ರಹಿಸುವ ಜೊತೆಗೆ ಅವುಗಳ ಅಧ್ಯಯನ ನಡೆಸಿದ್ದಾರೆ. ಅವರ ಮನೆಯ ಗ್ರಂಥಾಲಯ ನೋಡಿದಾಗ ನನಗೆ ಓಶೋ ನೆನಪಾಗುತ್ತಾರೆ’ ಎಂದು ಕಾರ್ಯಕ್ರಮ ಉದ್ಘಾಟಿಸಿದ ಚಿಂತಕ ಅಂಬ್ರಯ್ಯ ಮಠ ಹೇಳಿದರು.</p>.<p>‘ಬಾಲ್ಯದಿಂದಲೂ ವಾರ ಪತ್ರಿಕೆ, ಮಾಸ ಪತ್ರಿಕೆ, ದಿನಪತ್ರಿಕೆಗಳನ್ನು ಸಂಗ್ರಹಿಸುವ ಹವ್ಯಾಸ ಇದೆ. ಪುಸ್ತಕ ಸಂಗ್ರಹಕ್ಕೆ ಹಣಕಾಸಿನ ತೊಂದರೆ ಅಗಿಲ್ಲ’ ಎಂದು ಸಾಹಿತಿ ಪಿ. ಶಾಂತರಾಮ ಪ್ರಭು ತಿಳಿಸಿದರು.</p>.<p>ಕಾರ್ಯಕ್ರಮಕ್ಕೂ ಮುನ್ನ ಶಾಂತರಾಮ ಪ್ರಭು ಅವರೊಂದಿಗೆ ಸಂವಾದ ನಡೆಯಿತು. ಮಾರ್ಷಲ್ ಶರಾಂ, ಹನಿಯ ರವಿ, ಲಕ್ಷ್ಮೀನಾರಾಯಣ ದೊಡ್ಡಮನೆ, ನಾರಾಯಣ ಕಾಮತ್, ಕೆ.ಜಿ. ನಾಗೇಶ್, ಅಶ್ವಿನಿ ಪಂಡಿತ್, ಜಿ.ಎನ್. ಬಸಪ್ಪ ಗೌಡ, ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಭಟ್, ಕುಮಾರಸ್ವಾಮಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260528-42-1148360899</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೊಸನಗರ: ಕಸಾಪ ತಾಲ್ಲೂಕು ಘಟಕ ಹಾಗೂ ಪುಸ್ತಕ ಪ್ರಾಧಿಕಾರದ ಆಶ್ರಯದಲ್ಲಿ ಸಾಹಿತಿ, ನಿಟ್ಟೂರು ಸಮೀಪದ ಸಿಡ್ಲಕುಣಿ ನಿವಾಸಿ ಪಿ. ಶಾಂತರಾಮ ಪ್ರಭು ಅವರ ಮನೆಯಲ್ಲಿ ಈಚೆಗೆ ‘ಮನೆಗೊಂದು ಗ್ರಂಥಾಲಯ’ ಎಂಬ ವಿಭಿನ್ನ ಕಾರ್ಯಕ್ರಮ ನಡೆಯಿತು.</p>.<p>‘ಶಾಂತರಾಮ ಪ್ರಭು ಅವರು ಪುಸ್ತಕಗಳನ್ನು ಸಂಗ್ರಹಿಸುವ ಜೊತೆಗೆ ಅವುಗಳ ಅಧ್ಯಯನ ನಡೆಸಿದ್ದಾರೆ. ಅವರ ಮನೆಯ ಗ್ರಂಥಾಲಯ ನೋಡಿದಾಗ ನನಗೆ ಓಶೋ ನೆನಪಾಗುತ್ತಾರೆ’ ಎಂದು ಕಾರ್ಯಕ್ರಮ ಉದ್ಘಾಟಿಸಿದ ಚಿಂತಕ ಅಂಬ್ರಯ್ಯ ಮಠ ಹೇಳಿದರು.</p>.<p>‘ಬಾಲ್ಯದಿಂದಲೂ ವಾರ ಪತ್ರಿಕೆ, ಮಾಸ ಪತ್ರಿಕೆ, ದಿನಪತ್ರಿಕೆಗಳನ್ನು ಸಂಗ್ರಹಿಸುವ ಹವ್ಯಾಸ ಇದೆ. ಪುಸ್ತಕ ಸಂಗ್ರಹಕ್ಕೆ ಹಣಕಾಸಿನ ತೊಂದರೆ ಅಗಿಲ್ಲ’ ಎಂದು ಸಾಹಿತಿ ಪಿ. ಶಾಂತರಾಮ ಪ್ರಭು ತಿಳಿಸಿದರು.</p>.<p>ಕಾರ್ಯಕ್ರಮಕ್ಕೂ ಮುನ್ನ ಶಾಂತರಾಮ ಪ್ರಭು ಅವರೊಂದಿಗೆ ಸಂವಾದ ನಡೆಯಿತು. ಮಾರ್ಷಲ್ ಶರಾಂ, ಹನಿಯ ರವಿ, ಲಕ್ಷ್ಮೀನಾರಾಯಣ ದೊಡ್ಡಮನೆ, ನಾರಾಯಣ ಕಾಮತ್, ಕೆ.ಜಿ. ನಾಗೇಶ್, ಅಶ್ವಿನಿ ಪಂಡಿತ್, ಜಿ.ಎನ್. ಬಸಪ್ಪ ಗೌಡ, ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಭಟ್, ಕುಮಾರಸ್ವಾಮಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260528-42-1148360899</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>