ಸಣ್ಣಪುಟ್ಟ ಕಳ್ಳತನಕ್ಕೂ ಶಿಕ್ಷೆ ಇದೆ. ಆದರೆ ನಕಲಿ ಪ್ರಮಾಣ ಪತ್ರ ಹೆಸರಿನಲ್ಲಿ ವಂಚನೆ ನಡೆಯುತ್ತಿದ್ದರೂ ಕಾಲೇಜು ಶಿಕ್ಷಣ ಇಲಾಖೆ ಮತ್ತು ಉನ್ನತ ಶಿಕ್ಷಣ ಸಚಿವರು ಯಾಕೆ ಕ್ರಮ ಕೈಗೊಂಡಿಲ್ಲ. ಮುಂದಿನ ದಿನಗಳಲ್ಲಿ ಇದರ ವಿರುದ್ದ ಹೋರಾಟ ಮಾಡಲಾಗುವುದು
ಕಾಂತ್ ಕುಮಾರ್, ಅಧ್ಯಕ್ಷ, ರಾಜ್ಯ ಘಟಕ, ಅಕ್ಸಾ
ಶರಣಗೌಡ ಪಾಟೀಲ ಈ ನಕಲಿ ಪ್ರಮಾಣಪತ್ರ ತಯಾರಿಕಾ ಕಿಂಗ್ಪಿನ್ ಎಂದು ಕಳೆದ ಎಂಟು ತಿಂಗಳ ಹಿಂದೆಯೇ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿತ್ತು. ಆದರೆ, ಇಲ್ಲಿವರೆಗೂ ಆತನ ವಿರುದ್ಧ ಕ್ರಮ ಜರುಗಿಸಿಲ್ಲ
ರವಿಸುಂದರ್, ಆತಿಥಿ ಉಪನ್ಯಾಸಕ
ಕೆಲ ಪ್ರಾಧ್ಯಾಪಕರು ಮತ್ತು ಪ್ರಾಂಶುಪಾಲರು ನಿಯಮ ಬಹಿರವಾಗಿ ಎಸ್ಒಪಿ ಶೋಧನಾ ಸಮಿತಿಯನ್ನು ತಮಗೆ ಬೇಕಾದವರ ಹಿತ ಕಾಯಲು ಬಳಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಯಾಕೆ ಕ್ರಮವಹಿಸಿಲ್ಲ