<p>ಹುಕ್ಕೇರಿ: ಅಂಗನವಾಡಿ ಕೇವಲ ಊಟ ಕೊಡುವ ಕೇಂದ್ರವಲ್ಲ. ಮಗುವಿನ ದೈಹಿಕ, ಮಾನಸಿಕ, ಭಾವನಾತ್ಮಕ ಬೆಳವಣಿಗೆಗೆ ಇದು ಮೊದಲ ಮೆಟ್ಟಿಲು. ಹಾಗಾಗಿ ಅಂಗನವಾಡಿಯನ್ನು 'ಮೊದಲ ಶಾಲೆ' ಎಂದು ಪರಿಗಣಿಸಿ ಕಾರ್ಯಕರ್ತೆಯರು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು ಎಂದು ಸಿಡಿಪಿಒ ಹೊಳೆಪ್ಪ ಎಚ್ ಹೇಳಿದರು.</p>.<p>ಪಟ್ಟಣದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಭಾ ಭವನದಲ್ಲಿ ನಡೆದ ‘ಶಾಲಾ ಸಿದ್ಧತಾ ಮೇಳ’ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.</p>.<p>ಚಿಕ್ಕ ವಯಸ್ಸಿನಲ್ಲಿ ಸಿಗುವ ಪೌಷ್ಟಿಕ ಆಹಾರ, ಪ್ರೀತಿ, ಸುರಕ್ಷತೆ ಮತ್ತು ಉತ್ತೇಜಕ ವಾತಾವರಣವು ಮುಂದಿನ ಶಿಕ್ಷಣಕ್ಕೆ ಭದ್ರ ಬುನಾದಿ. ಭಾಷೆ, ಸಾಮಾಜಿಕ ಕೌಶಲ್ಯ, ಯೋಚನಾ ಶಕ್ತಿ ಬೆಳೆಯಲು ಮೊದಲ 6 ವರ್ಷಗಳು ಬಹಳ ಮುಖ್ಯ ಎಂದು ಹೇಳಿದರು.</p>.<p>ಶಿಶು ಅಭಿವೃದ್ಧಿ ಸಹಾಯಕ ಯೋಜನಾಧಿಕಾರಿ ಕಮಲಾ ಹಿರೇಮಠ ಮಹಾದೇವ ಕೋಳಿ ಮಾತನಾಡಿ, ಚಿಕ್ಕಮಕ್ಕಳಿಗೆ ಶಿಕ್ಷಣದ ಜತೆ ಶಿಸ್ತಿನ ಜಾಗೃತಿಯೂ ಅಗತ್ಯ ಎಂದು ಹೇಳಿದರು. ತರಬೇತುದಾರ ಸರಸ್ವತಿ, ಪ್ರಥಮ ಸಂಸ್ಥೆ ಸಿಬ್ಬಂದಿ ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260520-21-1496377343</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಕ್ಕೇರಿ: ಅಂಗನವಾಡಿ ಕೇವಲ ಊಟ ಕೊಡುವ ಕೇಂದ್ರವಲ್ಲ. ಮಗುವಿನ ದೈಹಿಕ, ಮಾನಸಿಕ, ಭಾವನಾತ್ಮಕ ಬೆಳವಣಿಗೆಗೆ ಇದು ಮೊದಲ ಮೆಟ್ಟಿಲು. ಹಾಗಾಗಿ ಅಂಗನವಾಡಿಯನ್ನು 'ಮೊದಲ ಶಾಲೆ' ಎಂದು ಪರಿಗಣಿಸಿ ಕಾರ್ಯಕರ್ತೆಯರು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು ಎಂದು ಸಿಡಿಪಿಒ ಹೊಳೆಪ್ಪ ಎಚ್ ಹೇಳಿದರು.</p>.<p>ಪಟ್ಟಣದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಭಾ ಭವನದಲ್ಲಿ ನಡೆದ ‘ಶಾಲಾ ಸಿದ್ಧತಾ ಮೇಳ’ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.</p>.<p>ಚಿಕ್ಕ ವಯಸ್ಸಿನಲ್ಲಿ ಸಿಗುವ ಪೌಷ್ಟಿಕ ಆಹಾರ, ಪ್ರೀತಿ, ಸುರಕ್ಷತೆ ಮತ್ತು ಉತ್ತೇಜಕ ವಾತಾವರಣವು ಮುಂದಿನ ಶಿಕ್ಷಣಕ್ಕೆ ಭದ್ರ ಬುನಾದಿ. ಭಾಷೆ, ಸಾಮಾಜಿಕ ಕೌಶಲ್ಯ, ಯೋಚನಾ ಶಕ್ತಿ ಬೆಳೆಯಲು ಮೊದಲ 6 ವರ್ಷಗಳು ಬಹಳ ಮುಖ್ಯ ಎಂದು ಹೇಳಿದರು.</p>.<p>ಶಿಶು ಅಭಿವೃದ್ಧಿ ಸಹಾಯಕ ಯೋಜನಾಧಿಕಾರಿ ಕಮಲಾ ಹಿರೇಮಠ ಮಹಾದೇವ ಕೋಳಿ ಮಾತನಾಡಿ, ಚಿಕ್ಕಮಕ್ಕಳಿಗೆ ಶಿಕ್ಷಣದ ಜತೆ ಶಿಸ್ತಿನ ಜಾಗೃತಿಯೂ ಅಗತ್ಯ ಎಂದು ಹೇಳಿದರು. ತರಬೇತುದಾರ ಸರಸ್ವತಿ, ಪ್ರಥಮ ಸಂಸ್ಥೆ ಸಿಬ್ಬಂದಿ ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260520-21-1496377343</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>