<p>ಹುನಗುಂದ: ಮಾಜಿ ಸಚಿವ ಎಸ್. ಆರ್. ಕಾಶಪ್ಪನವರ ಜನ್ಮ ಅಮೃತ ಮಹೋತ್ಸವದ ಅಂಗವಾಗಿ ನಡೆದ ತಾಲ್ಲೂಕು ಮಟ್ಟದ ಸ್ವರಚಿತ ಕವನ ಸ್ಪರ್ಧೆಯಲ್ಲಿ ಇಳಕಲ್ ತಾಲ್ಲೂಕಿನ ಹಿರೇಸಿಂಗನಗುತ್ತಿಯ ಬಸವರಾಜ ಹೂಗಾರ ಪ್ರಥಮ ಸ್ಥಾನ ಗಳಿಸಿದ್ದಾರೆ.</p>.<p>ಇಳಕಲ್ನ ಮಹಾಂತೇಶ ಅಂಗಡಿ ಮತ್ತು ಹುನಗುಂದದ ಶ್ರೀಶೈಲ ಹೊಸೂರ–ದ್ವಿತೀಯ, ಶರಣಪ್ಪ ಹೂಲಗೇರಿ ತೃತೀಯ, ಧನ್ನೂರಿನ ನಿಂಗಪ್ಪ ಧನ್ನೂರ, ಇಳಕಲ್ನ ಕೆ.ಎಚ್. ಸೋಲಾಪುರ ಮತ್ತು ಹಡಗಲಿಯ ಮುತ್ತಣ್ಣ ಕಠಾಣಿ ಅವರ ಕವಿತೆಗಳು ತೀರ್ಪುಗಾರರ ಮೆಚ್ಚುಗೆ ಗಳಿಸಿವೆ.</p>.<p>ಕವಿಗೋಷ್ಠಿಯನ್ನು ಹುನಗುಂದದಲ್ಲಿ ಶೀಘ್ರದಲ್ಲಿ ನಡೆಸಲಾಗುವುದು. ಬಹುಮಾನಿತ ಕವನಗಳನ್ನು ಎಸ್.ಆರ್.ಕೆ. ಸಂಸ್ಮರಣ ಗ್ರಂಥದಲ್ಲಿ ಪ್ರಕಟಿಸಲಾಗುವುದು. ಎಸ್.ಆರ್.ಕೆ. ಅವರ ಮೊಮ್ಮಗಳು ಪ್ರಿಯಾಂಕಾ ಬಿರಜದಾರ ಅವರು ಈ ಎಲ್ಲ ಕವಿತೆಗಳನ್ನು ಸಂಕಲಿಸಿ ‘ಜನಾನುರಾಗಿ ಕಾಶಪ್ಪನವರ’ ಎಂಬ ಕವನ ಸಂಕಲನ ಪ್ರಕಟಿಸಲಿದ್ದಾರೆ ಎಂದು ಸ್ಪರ್ಧೆಯ ಸಂಯೋಜಕ ಎಸ್ಕೆ ಕೊನೆಸಾಗರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260423-19-1422840388</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುನಗುಂದ: ಮಾಜಿ ಸಚಿವ ಎಸ್. ಆರ್. ಕಾಶಪ್ಪನವರ ಜನ್ಮ ಅಮೃತ ಮಹೋತ್ಸವದ ಅಂಗವಾಗಿ ನಡೆದ ತಾಲ್ಲೂಕು ಮಟ್ಟದ ಸ್ವರಚಿತ ಕವನ ಸ್ಪರ್ಧೆಯಲ್ಲಿ ಇಳಕಲ್ ತಾಲ್ಲೂಕಿನ ಹಿರೇಸಿಂಗನಗುತ್ತಿಯ ಬಸವರಾಜ ಹೂಗಾರ ಪ್ರಥಮ ಸ್ಥಾನ ಗಳಿಸಿದ್ದಾರೆ.</p>.<p>ಇಳಕಲ್ನ ಮಹಾಂತೇಶ ಅಂಗಡಿ ಮತ್ತು ಹುನಗುಂದದ ಶ್ರೀಶೈಲ ಹೊಸೂರ–ದ್ವಿತೀಯ, ಶರಣಪ್ಪ ಹೂಲಗೇರಿ ತೃತೀಯ, ಧನ್ನೂರಿನ ನಿಂಗಪ್ಪ ಧನ್ನೂರ, ಇಳಕಲ್ನ ಕೆ.ಎಚ್. ಸೋಲಾಪುರ ಮತ್ತು ಹಡಗಲಿಯ ಮುತ್ತಣ್ಣ ಕಠಾಣಿ ಅವರ ಕವಿತೆಗಳು ತೀರ್ಪುಗಾರರ ಮೆಚ್ಚುಗೆ ಗಳಿಸಿವೆ.</p>.<p>ಕವಿಗೋಷ್ಠಿಯನ್ನು ಹುನಗುಂದದಲ್ಲಿ ಶೀಘ್ರದಲ್ಲಿ ನಡೆಸಲಾಗುವುದು. ಬಹುಮಾನಿತ ಕವನಗಳನ್ನು ಎಸ್.ಆರ್.ಕೆ. ಸಂಸ್ಮರಣ ಗ್ರಂಥದಲ್ಲಿ ಪ್ರಕಟಿಸಲಾಗುವುದು. ಎಸ್.ಆರ್.ಕೆ. ಅವರ ಮೊಮ್ಮಗಳು ಪ್ರಿಯಾಂಕಾ ಬಿರಜದಾರ ಅವರು ಈ ಎಲ್ಲ ಕವಿತೆಗಳನ್ನು ಸಂಕಲಿಸಿ ‘ಜನಾನುರಾಗಿ ಕಾಶಪ್ಪನವರ’ ಎಂಬ ಕವನ ಸಂಕಲನ ಪ್ರಕಟಿಸಲಿದ್ದಾರೆ ಎಂದು ಸ್ಪರ್ಧೆಯ ಸಂಯೋಜಕ ಎಸ್ಕೆ ಕೊನೆಸಾಗರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260423-19-1422840388</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>