<p>ಕಲಬುರಗಿ: ‘ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬರ ಮೇಲೂ ದೇಶ ಕಟ್ಟುವ ಜವಾಬ್ದಾರಿ ಇದೆ’ ಎಂದು ಕೆ.ಸಿ.ಟಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಶಾಂತಪ್ಪ ಸೋಮಾ ಅಭಿಪ್ರಾಯಪಟ್ಟರು.</p>.<p>ನಗರದ ಖಮರ್ ಉಲ್ ಇಸ್ಲಾಂ ಕಾಲೊನಿಯಲ್ಲಿರುವ ಕೆ.ಸಿ.ಟಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಭಾರತೀಯ ಚುನಾವಣಾ ಸುಧಾರಣಾ ಹೋರಾಟ ಸಮಿತಿ ಆಯೋಜಿಸಿದ್ದ ‘ಚುನಾವಣೆಗಳಲ್ಲಿ ಹಣಬಲ ನಿಯಂತ್ರಿಸಿ- ಪ್ರಜಾಪ್ರಭುತ್ವ ಉಳಿಸಿ’ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ನಾವೆಲ್ಲರೂ ಜವಾಬ್ದಾರಿಗಳನ್ನು ಅರಿತು ಕೆಲಸ ಮಾಡಬೇಕಾಗಿದೆ. ಮನುಷ್ಯನ ದೇಹದಲ್ಲಿ ಪ್ರತಿಯೊಂದು ಅಂಗವೂ ಚೆನ್ನಾಗಿ ಕೆಲಸ ಮಾಡಿದರೆ, ಮಾತ್ರ ಮನುಷ್ಯನ ಆರೋಗ್ಯ ಚೆನ್ನಾಗಿರಲು ಸಾಧ್ಯ. ಹಾಗೆಯೇ ದೇಶದಲ್ಲಿಯ ಪ್ರತಿಯೊಂದು ಜವಾಬ್ದಾರಿಯುತ ಅಂಗಗಳೂ ಚೆನ್ನಾಗಿ ಕೆಲಸ ಮಾಡಿದರೆ ಮಾತ್ರ ದೇಶದ ಆರೋಗ್ಯ ಚೆನ್ನಾಗಿರಲು ಸಾಧ್ಯ’ ಎಂದು ಹೇಳಿದರು.</p>.<p>‘ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ಒಳ್ಳೆಯ ಶಿಕ್ಷಕರಿಂದ ಒಳ್ಳೆಯ ರಾಜಕಾರಣಿಗಳು, ಪತ್ರಕರ್ತರು, ವಕೀಲರು, ವೈದ್ಯರು, ಅಧಿಕಾರಿಗಳು, ವ್ಯಾಪಾರಿಗಳು, ಉದ್ಯಮಿಗಳು ಹೀಗೆ ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಒಳ್ಳೆಯ ವ್ಯಕ್ತಿಗಳು ನಿರ್ಮಾಣವಾಗಲು ಸಾಧ್ಯ’ ಎಂದರು.</p>.<p>ಭಾರತೀಯ ಚುನಾವಣಾ ಸುಧಾರಣಾ ಹೋರಾಟ ಸಮಿತಿ ಸಂಸ್ಥಾಪಕ ರಮೇಶ.ಆರ್.ದುತ್ತರಗಿ ಮಾತನಾಡಿದರು.</p>.<p>ವಿಚಾರ ಸಂಕಿರಣದಲ್ಲಿ ಉತ್ತಮವಾಗಿ ವಿಚಾರ ಮಂಡಿಸಿದ ಪ್ರಶಿಕ್ಷಣಾರ್ಥಿಗಳಾದ ಶ್ರೀಮಂತ, ರವಿಚಂದ್ರ, ಗುಂಡುರಾಯ, ನೇಹಾ, ಸಾನಿಯಾ ಫಾತಿಮಾ, ವಿಜಯಲಕ್ಷ್ಮಿ, ವಿಷ್ಣು, ನಾಜಿಯಾ ತರನ್ನುಮ್, ರೂಮ ಫಾತಿಮಾ, ಪ್ರೇಮಾ ಮತ್ತು ಅತಿಯಾ ನಾಜ್ ಅವರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.</p>.<p>ಅಫ್ಸಾನಾ ಬೇಗಂ, ಹನುಮಂತರಾಯ ಮಣ್ಣೂರ, ಸೈಯದ್ ಹಸನ್ ಕಮರ್, ಶಿವಕುಮಾರ ಎಸ್.ಎಸ್., ವಿಜಯಕುಮಾರ ಕಲ್ಲೂರ, ನಾಮದೇವ ಜಾಂತೆ, ರೈಯಿಸಾ ಫಾತಿಮಾ ಸಭಾ, ವಿಜಯಲಕ್ಷ್ಮಿ ಪಾಟೀಲ, ದಯಾನಂದ ಕಾಳೆ, ಇಮ್ರಾನ್ ಅಹಮದ್, ರಿಜ್ವಾನ ಬೇಗಂ, ಮಾಳಿಂಗರಾಯ, ಪ್ರೀತಿ ಪಾಟೀಲ, ಗೌಸುದ್ದೀನ್ ಹಾಜರಿದ್ದರು.</p>.<p>ಫಾತಿಮಾ ಪ್ರಾರ್ಥನಾ ಗೀತೆ ಹಾಡಿದರು. ಪ್ರೇಮಾ ಸ್ವಾಗತಿಸಿದರು. ಸೈಯದ್ ಜವೇರಿಯಾ ನಿರೂಪಿಸಿದರು. ಅತಿಯಾ ನಾಜ ವಂದಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260510-34-1380309605</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಲಬುರಗಿ: ‘ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬರ ಮೇಲೂ ದೇಶ ಕಟ್ಟುವ ಜವಾಬ್ದಾರಿ ಇದೆ’ ಎಂದು ಕೆ.ಸಿ.ಟಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಶಾಂತಪ್ಪ ಸೋಮಾ ಅಭಿಪ್ರಾಯಪಟ್ಟರು.</p>.<p>ನಗರದ ಖಮರ್ ಉಲ್ ಇಸ್ಲಾಂ ಕಾಲೊನಿಯಲ್ಲಿರುವ ಕೆ.ಸಿ.ಟಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಭಾರತೀಯ ಚುನಾವಣಾ ಸುಧಾರಣಾ ಹೋರಾಟ ಸಮಿತಿ ಆಯೋಜಿಸಿದ್ದ ‘ಚುನಾವಣೆಗಳಲ್ಲಿ ಹಣಬಲ ನಿಯಂತ್ರಿಸಿ- ಪ್ರಜಾಪ್ರಭುತ್ವ ಉಳಿಸಿ’ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ನಾವೆಲ್ಲರೂ ಜವಾಬ್ದಾರಿಗಳನ್ನು ಅರಿತು ಕೆಲಸ ಮಾಡಬೇಕಾಗಿದೆ. ಮನುಷ್ಯನ ದೇಹದಲ್ಲಿ ಪ್ರತಿಯೊಂದು ಅಂಗವೂ ಚೆನ್ನಾಗಿ ಕೆಲಸ ಮಾಡಿದರೆ, ಮಾತ್ರ ಮನುಷ್ಯನ ಆರೋಗ್ಯ ಚೆನ್ನಾಗಿರಲು ಸಾಧ್ಯ. ಹಾಗೆಯೇ ದೇಶದಲ್ಲಿಯ ಪ್ರತಿಯೊಂದು ಜವಾಬ್ದಾರಿಯುತ ಅಂಗಗಳೂ ಚೆನ್ನಾಗಿ ಕೆಲಸ ಮಾಡಿದರೆ ಮಾತ್ರ ದೇಶದ ಆರೋಗ್ಯ ಚೆನ್ನಾಗಿರಲು ಸಾಧ್ಯ’ ಎಂದು ಹೇಳಿದರು.</p>.<p>‘ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ಒಳ್ಳೆಯ ಶಿಕ್ಷಕರಿಂದ ಒಳ್ಳೆಯ ರಾಜಕಾರಣಿಗಳು, ಪತ್ರಕರ್ತರು, ವಕೀಲರು, ವೈದ್ಯರು, ಅಧಿಕಾರಿಗಳು, ವ್ಯಾಪಾರಿಗಳು, ಉದ್ಯಮಿಗಳು ಹೀಗೆ ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಒಳ್ಳೆಯ ವ್ಯಕ್ತಿಗಳು ನಿರ್ಮಾಣವಾಗಲು ಸಾಧ್ಯ’ ಎಂದರು.</p>.<p>ಭಾರತೀಯ ಚುನಾವಣಾ ಸುಧಾರಣಾ ಹೋರಾಟ ಸಮಿತಿ ಸಂಸ್ಥಾಪಕ ರಮೇಶ.ಆರ್.ದುತ್ತರಗಿ ಮಾತನಾಡಿದರು.</p>.<p>ವಿಚಾರ ಸಂಕಿರಣದಲ್ಲಿ ಉತ್ತಮವಾಗಿ ವಿಚಾರ ಮಂಡಿಸಿದ ಪ್ರಶಿಕ್ಷಣಾರ್ಥಿಗಳಾದ ಶ್ರೀಮಂತ, ರವಿಚಂದ್ರ, ಗುಂಡುರಾಯ, ನೇಹಾ, ಸಾನಿಯಾ ಫಾತಿಮಾ, ವಿಜಯಲಕ್ಷ್ಮಿ, ವಿಷ್ಣು, ನಾಜಿಯಾ ತರನ್ನುಮ್, ರೂಮ ಫಾತಿಮಾ, ಪ್ರೇಮಾ ಮತ್ತು ಅತಿಯಾ ನಾಜ್ ಅವರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.</p>.<p>ಅಫ್ಸಾನಾ ಬೇಗಂ, ಹನುಮಂತರಾಯ ಮಣ್ಣೂರ, ಸೈಯದ್ ಹಸನ್ ಕಮರ್, ಶಿವಕುಮಾರ ಎಸ್.ಎಸ್., ವಿಜಯಕುಮಾರ ಕಲ್ಲೂರ, ನಾಮದೇವ ಜಾಂತೆ, ರೈಯಿಸಾ ಫಾತಿಮಾ ಸಭಾ, ವಿಜಯಲಕ್ಷ್ಮಿ ಪಾಟೀಲ, ದಯಾನಂದ ಕಾಳೆ, ಇಮ್ರಾನ್ ಅಹಮದ್, ರಿಜ್ವಾನ ಬೇಗಂ, ಮಾಳಿಂಗರಾಯ, ಪ್ರೀತಿ ಪಾಟೀಲ, ಗೌಸುದ್ದೀನ್ ಹಾಜರಿದ್ದರು.</p>.<p>ಫಾತಿಮಾ ಪ್ರಾರ್ಥನಾ ಗೀತೆ ಹಾಡಿದರು. ಪ್ರೇಮಾ ಸ್ವಾಗತಿಸಿದರು. ಸೈಯದ್ ಜವೇರಿಯಾ ನಿರೂಪಿಸಿದರು. ಅತಿಯಾ ನಾಜ ವಂದಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260510-34-1380309605</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>