<p>ಕಲಬುರಗಿ: ‘ಎಲ್ಲ ಸಮಸ್ಯೆಗಳಿಗೂ ಶಿಕ್ಷಣವೇ ಪರಿಹಾರ. ಅದನ್ನು ಪಡೆಯುವ ಹಕ್ಕು ಎಲ್ಲರಿಗೂ ಇದೆ’ ಎಂದು ಕೆಬಿಎನ್ ವಿವಿಯ ಕ್ಯಾಂಪಸ್ ನಿರ್ದೇಶಕ ಸೈಯದ್ ಮುಸ್ತಫಾ ಅಲ್ ಹುಸೇನಿ ಪ್ರತಿಪಾದಿಸಿದರು.</p>.<p>ನಗರದಲ್ಲಿ ಬುಧವಾರ ನಡೆದ ಕೆಬಿಎನ್ ಸಂಸ್ಥೆಯ ಸೈಯದ್ ಅಕ್ಬರ್ ಹುಸೇನಿ ಅಕಾಡೆಮಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ಪಿಯುಸಿ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಲುವಾಗಿ ಕಲಬುರಗಿಯ ವಿದ್ಯಾರ್ಥಿಗಳು ಬೇರೆ ಊರಿಗೆ ಹೋಗುವ ಅಗತ್ಯವಿಲ್ಲ. ಕಲಬುರಗಿಯಲ್ಲೇ ನಮ್ಮ ಅಕಾಡೆಮಿಯು ಪಿಯುಸಿ ಆರಂಭದಿಂದಲೇ ಕೆ–ಸಿಇಟಿ, ಜೆಇಇ ಹಾಗೂ ನೀಟ್ ತರಬೇತಿ ಅತ್ಯಂತ ಕಡಿಮೆ ದರದಲ್ಲಿ ನೀಡಲಿದೆ’ ಎಂದರು.</p>.<p>‘ಎಸ್ಎಸ್ಎಲ್ಸಿಯಲ್ಲಿ ಶೇ95ಕ್ಕೂ ಹೆಚ್ಚಿನ ಅಂಕ ಪಡೆದಲ್ಲಿ ಶೇ100ರಷ್ಟು ವಿದ್ಯಾರ್ಥಿವೇತನ ಹಾಗೂ ಶೇ90ರಿಂದ ಶೇ94ರಷ್ಟು ಅಂಕ ಸಾಧನೆ ಮಾಡಿದವರಿಗೆ ಶೇ50ರಷ್ಟು ರಿಯಾಯಿತಿ ಇದೆ’ ಎಂದರು.</p>.<p>ಕೆಬಿಎನ್ ವಿವಿಯ ಉಪಕುಲಪತಿ ಪ್ರೊ.ಅಲಿ ರಜಾ ಮೂಸ್ವಿ, ಸಮ ಉಪಕುಲಪತಿ ಪ್ರೊ.ಅಶ್ಫಾಕ್ ಅಹ್ಮದ್, ಖಾಜಾ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರೊ.ಎ.ಎಂ.ಪಠಾಣ, ಪ್ರಾಚಾರ್ಯ ಫಿರೋಜ್ ಮಾತನಾಡಿದರು.</p>.<p>ಅಧಿಕೃತ ಉದ್ಘಾಟನೆ: ಕೆಬಿಎನ್ ವಿಶ್ವವಿದ್ಯಾಲಯದ ಕುಲಾಧಿಪತಿ ಸೈಯದ್ ಮುಹಮ್ಮದ್ ಅಲಿ ಅಲ್-ಹುಸೇನಿ ಅವರು ತರಬೇತಿ ಅಕಾಡೆಮಿಯ ಪರೀಕ್ಷೆ ವಿಭಾಗದ ಅತ್ಯಾಧುನಿಕ ಕಟ್ಟಡವನ್ನು ಅಧಿಕೃತವಾಗಿ ಉದ್ಘಾಟಿಸಿದರು. ಬಳಿಕ ಸುತ್ತು ಪರಿಶೀಲನೆ ನಡೆಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260423-34-759251755</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಲಬುರಗಿ: ‘ಎಲ್ಲ ಸಮಸ್ಯೆಗಳಿಗೂ ಶಿಕ್ಷಣವೇ ಪರಿಹಾರ. ಅದನ್ನು ಪಡೆಯುವ ಹಕ್ಕು ಎಲ್ಲರಿಗೂ ಇದೆ’ ಎಂದು ಕೆಬಿಎನ್ ವಿವಿಯ ಕ್ಯಾಂಪಸ್ ನಿರ್ದೇಶಕ ಸೈಯದ್ ಮುಸ್ತಫಾ ಅಲ್ ಹುಸೇನಿ ಪ್ರತಿಪಾದಿಸಿದರು.</p>.<p>ನಗರದಲ್ಲಿ ಬುಧವಾರ ನಡೆದ ಕೆಬಿಎನ್ ಸಂಸ್ಥೆಯ ಸೈಯದ್ ಅಕ್ಬರ್ ಹುಸೇನಿ ಅಕಾಡೆಮಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ಪಿಯುಸಿ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಲುವಾಗಿ ಕಲಬುರಗಿಯ ವಿದ್ಯಾರ್ಥಿಗಳು ಬೇರೆ ಊರಿಗೆ ಹೋಗುವ ಅಗತ್ಯವಿಲ್ಲ. ಕಲಬುರಗಿಯಲ್ಲೇ ನಮ್ಮ ಅಕಾಡೆಮಿಯು ಪಿಯುಸಿ ಆರಂಭದಿಂದಲೇ ಕೆ–ಸಿಇಟಿ, ಜೆಇಇ ಹಾಗೂ ನೀಟ್ ತರಬೇತಿ ಅತ್ಯಂತ ಕಡಿಮೆ ದರದಲ್ಲಿ ನೀಡಲಿದೆ’ ಎಂದರು.</p>.<p>‘ಎಸ್ಎಸ್ಎಲ್ಸಿಯಲ್ಲಿ ಶೇ95ಕ್ಕೂ ಹೆಚ್ಚಿನ ಅಂಕ ಪಡೆದಲ್ಲಿ ಶೇ100ರಷ್ಟು ವಿದ್ಯಾರ್ಥಿವೇತನ ಹಾಗೂ ಶೇ90ರಿಂದ ಶೇ94ರಷ್ಟು ಅಂಕ ಸಾಧನೆ ಮಾಡಿದವರಿಗೆ ಶೇ50ರಷ್ಟು ರಿಯಾಯಿತಿ ಇದೆ’ ಎಂದರು.</p>.<p>ಕೆಬಿಎನ್ ವಿವಿಯ ಉಪಕುಲಪತಿ ಪ್ರೊ.ಅಲಿ ರಜಾ ಮೂಸ್ವಿ, ಸಮ ಉಪಕುಲಪತಿ ಪ್ರೊ.ಅಶ್ಫಾಕ್ ಅಹ್ಮದ್, ಖಾಜಾ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರೊ.ಎ.ಎಂ.ಪಠಾಣ, ಪ್ರಾಚಾರ್ಯ ಫಿರೋಜ್ ಮಾತನಾಡಿದರು.</p>.<p>ಅಧಿಕೃತ ಉದ್ಘಾಟನೆ: ಕೆಬಿಎನ್ ವಿಶ್ವವಿದ್ಯಾಲಯದ ಕುಲಾಧಿಪತಿ ಸೈಯದ್ ಮುಹಮ್ಮದ್ ಅಲಿ ಅಲ್-ಹುಸೇನಿ ಅವರು ತರಬೇತಿ ಅಕಾಡೆಮಿಯ ಪರೀಕ್ಷೆ ವಿಭಾಗದ ಅತ್ಯಾಧುನಿಕ ಕಟ್ಟಡವನ್ನು ಅಧಿಕೃತವಾಗಿ ಉದ್ಘಾಟಿಸಿದರು. ಬಳಿಕ ಸುತ್ತು ಪರಿಶೀಲನೆ ನಡೆಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260423-34-759251755</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>