ಜೂನ್ 18ರಂದು ಫಲಿತಾಂಶ ಪ್ರಕಟವಾದಾಗ ಶಿವರಾಜ, ತುಮಕೂರು ಜಿಲ್ಲೆಯ ಆದರ್ಶನಗರದಲ್ಲಿರುವ ಅಮಾನಿಕೆರೆಯ ಹತ್ತಿರ ನಡೆದಿರುವ ಸೇತುವೆ ನಿರ್ಮಾಣ ಕಾಮಗಾರಿಯಲ್ಲಿ ಬಾರ್ಬೆಂಡಿಂಗ್ ಕೆಲಸ ಮಾಡುತ್ತಿದ್ದರು. ಕಾಲೇಜಿನ ಪ್ರಾಚಾರ್ಯ ವೈ.ಸಿ.ಪಾಟೀಲ ಫೋನ್ ಕರೆ ಮಾಡಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿರುವ ಮಾಹಿತಿ ನೀಡಿದ್ದಾರೆ. ಶಿವರಾಜ ಅವರು ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಯಲಗಟ್ಟಾ ಗ್ರಾಮದವರು.