<p>ಕೋಲಾರ: ಬೆವರು ಸುರಿಸಿ ಕಟ್ಟಿದ ಸಂಘಟನೆ ಒಡೆದು ಹೋಳಾಗಿದೆ. ತಳ ಸಮುದಾಯಗಳು ಛಿದ್ರವಾಗಿವೆ. ಹೀಗಾಗಿ, ಅಂಬೇಡ್ಕರ್ ಪ್ರಶಸ್ತಿ ನನಗೆ ಅಷ್ಟೇನೂ ಸಂತೋಷ ತಂದಿಲ್ಲ ಎಂದು ದಲಿತ ಹೋರಾಟಗಾರ ಹಾಗೂ ಪತ್ರಕರ್ತ ಸಿ.ಎಂ.ಮುನಿಯಪ್ಪ ಬೇಸರ ವ್ಯಕ್ತಪಡಿಸಿದರು.</p>.<p>ರಾಜ್ಯ ಸರ್ಕಾರದಿಂದ ಅಂಬೇಡ್ಕರ್ ಪ್ರಶಸ್ತಿಗೆ ಭಾಜನರಾಗಿರುವುದಕ್ಕೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸೋಮವಾರ ಪತ್ರಕರ್ತರ ಭವನದಲ್ಲಿ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.</p>.<p>‘ಅಭಿಮಾನದಿಂದ ಕರೆದು ಗೌರವಿಸಿರುವುದಕ್ಕೆ ಚಿರಋಣಿ. ಆದರೆ, ನಾನೇನೂ ಸಂತೋಷದಿಂದಿಲ್ಲ. ತಳಸಮುದಾಯದಲ್ಲೇ ಒಡಕು ಉಂಟಾಗಿ ಬೇರೆ ಬೇರೆ ಆಗಿವೆ. ದಲಿತರು ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿಲ್ಲ ಎಂಬ ನೋವು, ಬೇಸರವಿದೆ’ ಎಂದರು.</p>.<p>ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್ ಮಾತನಾಡಿ, ‘ಮುನಿಯಪ್ಪ ಅವರಿಗೆ ಒಲಿದಿರುವ ಅಂಬೇಡ್ಕರ್ ಪ್ರಶಸ್ತಿಯು ಜಿಲ್ಲೆಯ ಎಲ್ಲರಿಗೂ ಸಂದ ಗೌರವ. ಈಗ ಸಂಘಟನೆಗಳು ಪರ, ವಿರೋಧ ಧೋರಣೆ ಹೊಂದಿವೆ. ಎಲ್ಲಾ ಸಂಘಟನೆಗಳನ್ನು ಒಂದಾಗಿಸುವ ಜವಾಬ್ದಾರಿಯನ್ನು ಅವರು ವಹಿಸಿಕೊಳ್ಳಬೇಕು’ ಎಂದರು.</p>.<p>ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು ಮಾತನಾಡಿ, ‘ವಿದ್ಯಾರ್ಥಿದೆಸೆಯಲ್ಲಿಯೇ ಮುನಿಯಪ್ಪ ಹೋರಾಟದಲ್ಲಿ ತೊಡಗಿದ್ದವರು. ಚಳವಳಿಗಳಿಗೆ ಭದ್ರ ಬುನಾದಿ ಹಾಕಿದವರು. ಅವರು ಸಂಸತ್ತಿನಲ್ಲಿ ಇರಬೇಕಿತ್ತು. ಸ್ವಲ್ಪವ್ಯತ್ಯಾಸದಿಂದ ತಪ್ಪಿ ಹೋಯಿತು.ಮುಂದೆ ಅಂಥ ಅವಕಾಶ ಬರಲಿ’ ಎಂದರು.</p>.<p>ಸಂಘದ ನಿಕಟಪೂರ್ವ ಅಧ್ಯಕ್ಷ ಬಿ.ವಿ.ಗೋಪಿನಾಥ್, ‘ಮುನಿಯಪ್ಪ ಜೀತಗಾರನ ಮಗನಾಗಿ ಹುಟ್ಟಿ ಜೀವನಗಾಥೆ ಬರೆದಿದ್ದಾರೆ. ಡೋಂಗಿತನ ಪ್ರದರ್ಶಿಸುವ ಜಾತಿ ಹೋರಾಟಗಾರರು ಕೆಲವರಿದ್ದಾರೆ. ಆದರೆ, ಆ ಮನೋಭಾವವನ್ನು ಮುನಿಯಪ್ಪ ಅವರಲ್ಲಿ ಕಂಡಿಲ್ಲ’ ಎಂದರು.</p>.<p>ಆಕ್ರಮಣಕಾರಿ ಆಗಿದ್ದವರು ನಂತರ ಮಾಗಿದ ಮುನಿಯಪ್ಪ ಆಗಿ, ಈಗ ಪಾಲಿಷ್ಡ್ ಮುನಿಯಪ್ಪ ಆಗಿ ಬದಲಾಗಿದ್ದಾರೆ. ಅವರಿಗೆ ಅಂಬೇಡ್ಕರ್ ಪ್ರಶಸ್ತಿ ಬಂದಿರುವುದು ಇಡೀ ರಾಜ್ಯದ ಪತ್ರಕರ್ತರಿಗೆ ಪ್ರಶಸ್ತಿ ಬಂದಷ್ಟೇ ಖುಷಿ ಆಗಿದೆ ಎಂದು ತಿಳಿಸಿದರು.</p>.<p>ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, 'ಮುನಿಯಪ್ಪ ಅವರ ಹೋರಾಟದಿಂದ ಲಕ್ಷಾಂತರ ವಿದ್ಯಾರ್ಥಿಗಳು ಹಾಸ್ಟೆಲ್ನಲ್ಲಿ ವ್ಯಾಸಂಗ ಮಾಡಲು ಸಾಧ್ಯವಾಗಿದೆ. ಸಾವಿರಾರು ಮಂದಿಗೆ ಸೂರು ಭಾಗ್ಯ ಕಲ್ಪಿಸಿದ್ದಾರೆ. ಗಾಂಧಿನಗರದ ಅವರ ನಿವಾಸ ಸಮಸ್ಯೆಗಳ ಪರಿಹಾರದ ಕೇಂದ್ರಬಿಂದು’ ಎಂದು ಶ್ಲಾಘಿಸಿದರು.</p>.<p>ಸಂಘದ ಪ್ರಧಾನ ಕಾರ್ಯದರ್ಶಿ ಎ.ಜಿ.ಸುರೇಶ್ ಕುಮಾರ್ ಮಾತನಾಡಿ, ಮುನಿಯಪ್ಪ ಅವರ ಹೋರಾಟದ ಬದುಕನ್ನು ವಿವರಿಸಿದರು. ದಲಿತ ಚಳವಳಿ, ಪತ್ರಿಕಾ ರಂಗ ಹಾಗೂ ಕೃಷಿಯಲ್ಲಿ ತೊಡಗಿ ಹೆಮ್ಮೆಯ ಸಾಧನೆಗೆ ಕಾರಣರಾಗಿದ್ದಾರೆ ಎಂದರು.</p>.<p>ವಿಶ್ವ ಕುಂದಾಪುರ, ಸಂಚಿಕೆ ನಾರಾಯಣಯಪ್ಪ ಮಾತನಾಡಿದರು. ಶ್ರೀನಿವಾಸಪುರ, ಮಾಲೂರು, ಕೆಜಿಎಫ್ ಪತ್ರಕರ್ತರು ಸನ್ಮಾನಿಸಿದರು. ಸಿ.ವಿ.ನಾಗರಾಜ, ಪಾ.ಶ್ರೀ ಅನಂತರಾಮು, ಸಂಘದ ಪದಾಧಿಕಾರಿಗಳು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260421-18-2030363603</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೋಲಾರ: ಬೆವರು ಸುರಿಸಿ ಕಟ್ಟಿದ ಸಂಘಟನೆ ಒಡೆದು ಹೋಳಾಗಿದೆ. ತಳ ಸಮುದಾಯಗಳು ಛಿದ್ರವಾಗಿವೆ. ಹೀಗಾಗಿ, ಅಂಬೇಡ್ಕರ್ ಪ್ರಶಸ್ತಿ ನನಗೆ ಅಷ್ಟೇನೂ ಸಂತೋಷ ತಂದಿಲ್ಲ ಎಂದು ದಲಿತ ಹೋರಾಟಗಾರ ಹಾಗೂ ಪತ್ರಕರ್ತ ಸಿ.ಎಂ.ಮುನಿಯಪ್ಪ ಬೇಸರ ವ್ಯಕ್ತಪಡಿಸಿದರು.</p>.<p>ರಾಜ್ಯ ಸರ್ಕಾರದಿಂದ ಅಂಬೇಡ್ಕರ್ ಪ್ರಶಸ್ತಿಗೆ ಭಾಜನರಾಗಿರುವುದಕ್ಕೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸೋಮವಾರ ಪತ್ರಕರ್ತರ ಭವನದಲ್ಲಿ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.</p>.<p>‘ಅಭಿಮಾನದಿಂದ ಕರೆದು ಗೌರವಿಸಿರುವುದಕ್ಕೆ ಚಿರಋಣಿ. ಆದರೆ, ನಾನೇನೂ ಸಂತೋಷದಿಂದಿಲ್ಲ. ತಳಸಮುದಾಯದಲ್ಲೇ ಒಡಕು ಉಂಟಾಗಿ ಬೇರೆ ಬೇರೆ ಆಗಿವೆ. ದಲಿತರು ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿಲ್ಲ ಎಂಬ ನೋವು, ಬೇಸರವಿದೆ’ ಎಂದರು.</p>.<p>ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್ ಮಾತನಾಡಿ, ‘ಮುನಿಯಪ್ಪ ಅವರಿಗೆ ಒಲಿದಿರುವ ಅಂಬೇಡ್ಕರ್ ಪ್ರಶಸ್ತಿಯು ಜಿಲ್ಲೆಯ ಎಲ್ಲರಿಗೂ ಸಂದ ಗೌರವ. ಈಗ ಸಂಘಟನೆಗಳು ಪರ, ವಿರೋಧ ಧೋರಣೆ ಹೊಂದಿವೆ. ಎಲ್ಲಾ ಸಂಘಟನೆಗಳನ್ನು ಒಂದಾಗಿಸುವ ಜವಾಬ್ದಾರಿಯನ್ನು ಅವರು ವಹಿಸಿಕೊಳ್ಳಬೇಕು’ ಎಂದರು.</p>.<p>ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು ಮಾತನಾಡಿ, ‘ವಿದ್ಯಾರ್ಥಿದೆಸೆಯಲ್ಲಿಯೇ ಮುನಿಯಪ್ಪ ಹೋರಾಟದಲ್ಲಿ ತೊಡಗಿದ್ದವರು. ಚಳವಳಿಗಳಿಗೆ ಭದ್ರ ಬುನಾದಿ ಹಾಕಿದವರು. ಅವರು ಸಂಸತ್ತಿನಲ್ಲಿ ಇರಬೇಕಿತ್ತು. ಸ್ವಲ್ಪವ್ಯತ್ಯಾಸದಿಂದ ತಪ್ಪಿ ಹೋಯಿತು.ಮುಂದೆ ಅಂಥ ಅವಕಾಶ ಬರಲಿ’ ಎಂದರು.</p>.<p>ಸಂಘದ ನಿಕಟಪೂರ್ವ ಅಧ್ಯಕ್ಷ ಬಿ.ವಿ.ಗೋಪಿನಾಥ್, ‘ಮುನಿಯಪ್ಪ ಜೀತಗಾರನ ಮಗನಾಗಿ ಹುಟ್ಟಿ ಜೀವನಗಾಥೆ ಬರೆದಿದ್ದಾರೆ. ಡೋಂಗಿತನ ಪ್ರದರ್ಶಿಸುವ ಜಾತಿ ಹೋರಾಟಗಾರರು ಕೆಲವರಿದ್ದಾರೆ. ಆದರೆ, ಆ ಮನೋಭಾವವನ್ನು ಮುನಿಯಪ್ಪ ಅವರಲ್ಲಿ ಕಂಡಿಲ್ಲ’ ಎಂದರು.</p>.<p>ಆಕ್ರಮಣಕಾರಿ ಆಗಿದ್ದವರು ನಂತರ ಮಾಗಿದ ಮುನಿಯಪ್ಪ ಆಗಿ, ಈಗ ಪಾಲಿಷ್ಡ್ ಮುನಿಯಪ್ಪ ಆಗಿ ಬದಲಾಗಿದ್ದಾರೆ. ಅವರಿಗೆ ಅಂಬೇಡ್ಕರ್ ಪ್ರಶಸ್ತಿ ಬಂದಿರುವುದು ಇಡೀ ರಾಜ್ಯದ ಪತ್ರಕರ್ತರಿಗೆ ಪ್ರಶಸ್ತಿ ಬಂದಷ್ಟೇ ಖುಷಿ ಆಗಿದೆ ಎಂದು ತಿಳಿಸಿದರು.</p>.<p>ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, 'ಮುನಿಯಪ್ಪ ಅವರ ಹೋರಾಟದಿಂದ ಲಕ್ಷಾಂತರ ವಿದ್ಯಾರ್ಥಿಗಳು ಹಾಸ್ಟೆಲ್ನಲ್ಲಿ ವ್ಯಾಸಂಗ ಮಾಡಲು ಸಾಧ್ಯವಾಗಿದೆ. ಸಾವಿರಾರು ಮಂದಿಗೆ ಸೂರು ಭಾಗ್ಯ ಕಲ್ಪಿಸಿದ್ದಾರೆ. ಗಾಂಧಿನಗರದ ಅವರ ನಿವಾಸ ಸಮಸ್ಯೆಗಳ ಪರಿಹಾರದ ಕೇಂದ್ರಬಿಂದು’ ಎಂದು ಶ್ಲಾಘಿಸಿದರು.</p>.<p>ಸಂಘದ ಪ್ರಧಾನ ಕಾರ್ಯದರ್ಶಿ ಎ.ಜಿ.ಸುರೇಶ್ ಕುಮಾರ್ ಮಾತನಾಡಿ, ಮುನಿಯಪ್ಪ ಅವರ ಹೋರಾಟದ ಬದುಕನ್ನು ವಿವರಿಸಿದರು. ದಲಿತ ಚಳವಳಿ, ಪತ್ರಿಕಾ ರಂಗ ಹಾಗೂ ಕೃಷಿಯಲ್ಲಿ ತೊಡಗಿ ಹೆಮ್ಮೆಯ ಸಾಧನೆಗೆ ಕಾರಣರಾಗಿದ್ದಾರೆ ಎಂದರು.</p>.<p>ವಿಶ್ವ ಕುಂದಾಪುರ, ಸಂಚಿಕೆ ನಾರಾಯಣಯಪ್ಪ ಮಾತನಾಡಿದರು. ಶ್ರೀನಿವಾಸಪುರ, ಮಾಲೂರು, ಕೆಜಿಎಫ್ ಪತ್ರಕರ್ತರು ಸನ್ಮಾನಿಸಿದರು. ಸಿ.ವಿ.ನಾಗರಾಜ, ಪಾ.ಶ್ರೀ ಅನಂತರಾಮು, ಸಂಘದ ಪದಾಧಿಕಾರಿಗಳು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260421-18-2030363603</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>