<p>ಮಧುಗಿರಿ: ಶಿಕ್ಷಣ, ಸಂಘಟನೆ, ಹೋರಾಟ ಎಂಬ ಪದಗಳ ಜೊತೆಗೆ ಓದು, ತಿಳಿದುಕೊ , ಅರ್ಥೈಸಿಕೊ ಎಂಬ ಮಾತುಗಳನ್ನು ತಿಳಿಸಿಕೊಟ್ಟ ಅಂಬೇಡ್ಕರ್ ಪ್ರಪಂಚದ 60 ಸಂವಿಧಾನಗಳನ್ನು ಅಭ್ಯಸಿಸಿ ಮಹಿಳೆಯರ, ಕಾರ್ಮಿಕರ, ಶೋಷಿತ ವರ್ಗಗಳ ಧ್ವನಿಯಾಗಿರುವ ಕಾನೂನು ರೂಪಿಸಿದ್ದಾರೆ ಎಂದು ರಾಜ್ಯಶಾಸ್ತ್ರ ಪ್ರಾಧ್ಯಾಪಕ ಎಂ.ಎಸ್.ನಾಗರಾಜ್ ಹೇಳಿದರು.</p>.<p>ಮಧುಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಅಂಬೇಡ್ಕರ್ ಜಯಂತಿಯಲ್ಲಿ ಮಾತನಾಡಿದ ಅವರು, ಭಾರತೀಯ ಸಂವಿಧಾನದ ಜಾರಿಯಲ್ಲಿ ಅಂಬೇಡ್ಕರ್ ಪಾತ್ರ ಮಹತ್ವದ್ದು ಎಂದರು.</p>.<p>ಪ್ರಾಂಶುಪಾಲ ಕೆ.ಎಸ್. ಕುಮಾರ್ ಮಾತನಾಡಿ, ಮಹಾಪುರುಷರು ತಮ್ಮ ಜೀವನದುದ್ದಕ್ಕೂ ಸವೆಸಿದ ದಿನಗಳ ಪ್ರಯಾಣವೇ ಸಮಾಜಕ್ಕೆ ನೀಡಿದ ಅತಿದೊಡ್ಡ ಸಂದೇಶ. ಅಂಬೇಡ್ಕರ್ ಮಹಿಳಾ ಸಬಲೀಕರಣಕ್ಕಾಗಿ ಜೀವನದುದ್ದಕ್ಕೂ ಶ್ರಮಿಸಿದ ಮಹಾನ್ ಮಾನವತಾವಾದಿ ಎಂದರು.</p>.<p>ಇಂಗ್ಲಿಷ್ ಪ್ರಾಧ್ಯಾಪಕ ಶ್ರೀನಿವಾಸಪ್ಪ ಮಾತನಾಡಿದರು. ಮಂಜುನಾಥ್ ಬುಡುಸನಹಳ್ಳಿ, ಪ್ರಾಧ್ಯಾಪಕ ವೇದಲಕ್ಷ್ಮಿ, ರಂಜಿತಾ, ಸಂಜೀವ್ ಮೂರ್ತಿ, ವಿಜಯಲಕ್ಷ್ಮಿ, ದರ್ಶನ್, ಲೀಲಾವತಿ, ಬಿ. ಮಂಜುನಾಥ್, ರಾಮಾಮೂರ್ತಿ ಹಾಜರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260415-17-1363124021</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಧುಗಿರಿ: ಶಿಕ್ಷಣ, ಸಂಘಟನೆ, ಹೋರಾಟ ಎಂಬ ಪದಗಳ ಜೊತೆಗೆ ಓದು, ತಿಳಿದುಕೊ , ಅರ್ಥೈಸಿಕೊ ಎಂಬ ಮಾತುಗಳನ್ನು ತಿಳಿಸಿಕೊಟ್ಟ ಅಂಬೇಡ್ಕರ್ ಪ್ರಪಂಚದ 60 ಸಂವಿಧಾನಗಳನ್ನು ಅಭ್ಯಸಿಸಿ ಮಹಿಳೆಯರ, ಕಾರ್ಮಿಕರ, ಶೋಷಿತ ವರ್ಗಗಳ ಧ್ವನಿಯಾಗಿರುವ ಕಾನೂನು ರೂಪಿಸಿದ್ದಾರೆ ಎಂದು ರಾಜ್ಯಶಾಸ್ತ್ರ ಪ್ರಾಧ್ಯಾಪಕ ಎಂ.ಎಸ್.ನಾಗರಾಜ್ ಹೇಳಿದರು.</p>.<p>ಮಧುಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಅಂಬೇಡ್ಕರ್ ಜಯಂತಿಯಲ್ಲಿ ಮಾತನಾಡಿದ ಅವರು, ಭಾರತೀಯ ಸಂವಿಧಾನದ ಜಾರಿಯಲ್ಲಿ ಅಂಬೇಡ್ಕರ್ ಪಾತ್ರ ಮಹತ್ವದ್ದು ಎಂದರು.</p>.<p>ಪ್ರಾಂಶುಪಾಲ ಕೆ.ಎಸ್. ಕುಮಾರ್ ಮಾತನಾಡಿ, ಮಹಾಪುರುಷರು ತಮ್ಮ ಜೀವನದುದ್ದಕ್ಕೂ ಸವೆಸಿದ ದಿನಗಳ ಪ್ರಯಾಣವೇ ಸಮಾಜಕ್ಕೆ ನೀಡಿದ ಅತಿದೊಡ್ಡ ಸಂದೇಶ. ಅಂಬೇಡ್ಕರ್ ಮಹಿಳಾ ಸಬಲೀಕರಣಕ್ಕಾಗಿ ಜೀವನದುದ್ದಕ್ಕೂ ಶ್ರಮಿಸಿದ ಮಹಾನ್ ಮಾನವತಾವಾದಿ ಎಂದರು.</p>.<p>ಇಂಗ್ಲಿಷ್ ಪ್ರಾಧ್ಯಾಪಕ ಶ್ರೀನಿವಾಸಪ್ಪ ಮಾತನಾಡಿದರು. ಮಂಜುನಾಥ್ ಬುಡುಸನಹಳ್ಳಿ, ಪ್ರಾಧ್ಯಾಪಕ ವೇದಲಕ್ಷ್ಮಿ, ರಂಜಿತಾ, ಸಂಜೀವ್ ಮೂರ್ತಿ, ವಿಜಯಲಕ್ಷ್ಮಿ, ದರ್ಶನ್, ಲೀಲಾವತಿ, ಬಿ. ಮಂಜುನಾಥ್, ರಾಮಾಮೂರ್ತಿ ಹಾಜರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260415-17-1363124021</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>