<p>ಮಹಾಲಿಂಗಪುರ: ‘ಸಮಾಜದಲ್ಲಿ ಯಾರೂ ಶಾಶ್ವತವಾಗಿ ಮೇಲೆ, ಕೆಳಗೆ ಇರಲ್ಲ. ಇಂದು ಬಿದ್ದವರು ನಾಳೆ ಏಳಬಹುದು. ಆದರೆ ಅವರನ್ನು ಮೇಲೆತ್ತುವ ಕೈಗಳು ನಮ್ಮದಾಗಬೇಕು’ ಎಂದು ರನ್ನಬೆಳಗಲಿಯ ವಿಶ್ವಕರ್ಮ ಸಮಾಜ ಸೇವಾ ಸಂಸ್ಥೆ ಅಧ್ಯಕ್ಷ ಬಸವರಾಜ ಕಂಬಾರ ಹೇಳಿದರು.</p>.<p>ಸಮೀಪದ ರನ್ನಬೆಳಗಲಿಯ ಮೌನೇಶ್ವರ ದೇವಸ್ಥಾನದಲ್ಲಿ ವಿಶ್ವಕರ್ಮ ಸಮಾಜ ಸೇವಾ ಸಂಸ್ಥೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ಸಮಾರಂಭದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಲಕ್ಷ್ಮಿ ಬಡಿಗೇರ, ಸಚಿನ ಬಡಿಗೇರ ಅವರನ್ನು ಸನ್ಮಾನಿಸಿ ಮಾತನಾಡಿದರು.</p>.<p>‘ಹೊಟ್ಟೆ ತುಂಬಿಸಿಕೊಳ್ಳಲು ಕಾಯಕ ಬೇಕು, ತಲೆ ತುಂಬಿಸಿಕೊಳ್ಳಲು ಶಿಕ್ಷಣ ಬೇಕು. ಒಂದಿಲ್ಲದೆ ಇನ್ನೊಂದಿಲ್ಲ. ಕಾಯಕದಿಂದ ಬದುಕು, ಶಿಕ್ಷಣದಿಂದ ಬದುಕಿಗೆ ಅರ್ಥ ಸಿಗುತ್ತದೆ’ ಎಂದರು.</p>.<p>ತಮ್ಮಣ್ಣಪ್ಪ ಲೋಹಾರ, ಅಣ್ಣಪ್ಪ ಕಂಬಾರ, ಚನ್ನಪ್ಪ ಬಡಿಗೇರ, ಮಾದೇವ ಸುತಾರ, ಸಂಗಪ್ಪ ಲೋಹಾರ, ಅಣ್ಣಪ್ಪ ಕಂಬಾರ, ಚನ್ನಪ್ಪ ಬಡಿಗೇರ, ಮಾದೇವ ಸುತಾರ, ರಾಮಚಂದ್ರ ಕಂಬಾರ, ಮಹಾಲಿಂಗಪ್ಪ ಬಡಿಗೇರ, ರಾಮಚಂದ್ರ ಸುತಾರ, ಬಸಪ್ಪ ಬಡಿಗೇರ, ಸಿದ್ಧಾರೂಢ ಸುತಾರ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260524-19-2129851476</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಹಾಲಿಂಗಪುರ: ‘ಸಮಾಜದಲ್ಲಿ ಯಾರೂ ಶಾಶ್ವತವಾಗಿ ಮೇಲೆ, ಕೆಳಗೆ ಇರಲ್ಲ. ಇಂದು ಬಿದ್ದವರು ನಾಳೆ ಏಳಬಹುದು. ಆದರೆ ಅವರನ್ನು ಮೇಲೆತ್ತುವ ಕೈಗಳು ನಮ್ಮದಾಗಬೇಕು’ ಎಂದು ರನ್ನಬೆಳಗಲಿಯ ವಿಶ್ವಕರ್ಮ ಸಮಾಜ ಸೇವಾ ಸಂಸ್ಥೆ ಅಧ್ಯಕ್ಷ ಬಸವರಾಜ ಕಂಬಾರ ಹೇಳಿದರು.</p>.<p>ಸಮೀಪದ ರನ್ನಬೆಳಗಲಿಯ ಮೌನೇಶ್ವರ ದೇವಸ್ಥಾನದಲ್ಲಿ ವಿಶ್ವಕರ್ಮ ಸಮಾಜ ಸೇವಾ ಸಂಸ್ಥೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ಸಮಾರಂಭದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಲಕ್ಷ್ಮಿ ಬಡಿಗೇರ, ಸಚಿನ ಬಡಿಗೇರ ಅವರನ್ನು ಸನ್ಮಾನಿಸಿ ಮಾತನಾಡಿದರು.</p>.<p>‘ಹೊಟ್ಟೆ ತುಂಬಿಸಿಕೊಳ್ಳಲು ಕಾಯಕ ಬೇಕು, ತಲೆ ತುಂಬಿಸಿಕೊಳ್ಳಲು ಶಿಕ್ಷಣ ಬೇಕು. ಒಂದಿಲ್ಲದೆ ಇನ್ನೊಂದಿಲ್ಲ. ಕಾಯಕದಿಂದ ಬದುಕು, ಶಿಕ್ಷಣದಿಂದ ಬದುಕಿಗೆ ಅರ್ಥ ಸಿಗುತ್ತದೆ’ ಎಂದರು.</p>.<p>ತಮ್ಮಣ್ಣಪ್ಪ ಲೋಹಾರ, ಅಣ್ಣಪ್ಪ ಕಂಬಾರ, ಚನ್ನಪ್ಪ ಬಡಿಗೇರ, ಮಾದೇವ ಸುತಾರ, ಸಂಗಪ್ಪ ಲೋಹಾರ, ಅಣ್ಣಪ್ಪ ಕಂಬಾರ, ಚನ್ನಪ್ಪ ಬಡಿಗೇರ, ಮಾದೇವ ಸುತಾರ, ರಾಮಚಂದ್ರ ಕಂಬಾರ, ಮಹಾಲಿಂಗಪ್ಪ ಬಡಿಗೇರ, ರಾಮಚಂದ್ರ ಸುತಾರ, ಬಸಪ್ಪ ಬಡಿಗೇರ, ಸಿದ್ಧಾರೂಢ ಸುತಾರ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260524-19-2129851476</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>