<p>ಮುಧೋಳ: ‘ಜೀವನದಲ್ಲಿ ಸಾಧನೆಗೆ ವಿದ್ಯೆ ಮುಖ್ಯವೇ ಹೊರತು ಯಾವುದೇ ಜಾತಿ, ಧರ್ಮ, ಬಣ್ಣ, ಆಕಾರ, ರೂಪವಲ್ಲ. ಶಿಕ್ಷಣದಲ್ಲಿ ಓದಿನ ಜೊತೆಗೆ ಉತ್ತಮ ಆಚಾರ-ನಡೆ-ನುಡಿಗಳನ್ನು ಕಲಿಯಬೇಕು. ಹಿರಿಯರನ್ನು ಗೌರವಿಸುವುದು, ತಂದೆ-ತಾಯಿ, ಕಲಿಸಿದ ಗುರುವಿಗೆ ಗೌರವ ತರುವಂತ ಸಂಸ್ಕಾರಯುತ ಜೀವನ ನಡೆಸಬೇಕು. ಉತ್ತಮ ಸಂಸ್ಕಾರ ಅಳವಡಿಸಿಕೊಂಡರೆ ಆದರ್ಶ ಬದುಕು ನಿಮ್ಮದಾಗುತ್ತದೆ’ ಎಂದು ಬ.ವೀ.ವಿ.ಸಂಘದ ಕಾಲೇಜುಗಳ ಆಡಳಿತ ಮಂಡಳಿ ಸದಸ್ಯ ರವೀಂದ್ರ ಎಸ್. ಸಾವಳಗಿಮಠ ಹೇಳಿದರು.</p>.<p>ನಗರದ ದಾನಮ್ಮದೇವಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಿಳಾ ಕಾಲೇಜಿನ 2025-26ನೇ ಸಾಲಿನ ಶೈಕ್ಷಣಿಕ ವರ್ಷದ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಹಾಗೂ ಬಿ.ಎ., ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿನಿಯರ ಬೀಳ್ಕೊಡುವ ಸಮಾರಂಭದಲ್ಲಿ ಶುಕ್ರವಾರ ಮಾತನಾಡಿದರು.</p>.<p>ನಗರದ ಆರ್.ಎಂ.ಜಿ. ಪದವಿ-ಪೂರ್ವ ಕಾಲೇಜಿನ ಪ್ರಾಚಾರ್ಯ ಬಿ.ಎ.ಗಂಜಿಹಾಳ ಮಾತನಾಡಿ, ‘ಸಾಧಿಸುವ ಛಲವಿದ್ದರೆ ಸಾಧನೆಗೆ ಸಾವಿರ ದಾರಿಗಳಿವೆ. ಸಾಧನೆ ಮಾಡುವವರಿಗೆ ವಿವೇಚನೆ, ವೈಚಾರಿಕತೆ, ತಾತ್ವಿಕ ಚಿಂತನೆ ಇರಬೇಕು’ ಎಂದರು.</p>.<p>ಅಂತಿಮ ವರ್ಷದ ವಿದ್ಯಾರ್ಥಿನಿಯರಾದ ಸುಷ್ಮಿತಾ ಮಾಸರೆಡ್ಡಿ, ರಂಜಿತಾ ಯತ್ನಾಳ, ದೀಪಾ ಹುದ್ದಾರ, ಜ್ಯೋತಿ ತೇಲಿ, ಕೃತಿ ಕೋರಿ, ಲಕ್ಷ್ಮಿ ಸಿಂಗಾಡೆ, ಮೇಘಾ ಬಾರಕೇರ, ಸವೀತಾ ಕೋರೆಡ್ಡಿ ಅನುಭವ ಹಂಚಿಕೊಂಡರು.</p>.<p>ಪ್ರೊ.ಮಲ್ಲಿಕಾರ್ಜುನ್ ಎಂ., ಹಾಗೂ ಪ್ರೊ.ಎ.ಎನ್.ಬಾಗೇವಾಡಿ ಮಾತನಾಡಿದರು.</p>.<p>ಇದೇ ಸಂದರ್ಭದಲ್ಲಿ ಈಚೆಗೆ ಬೆಳಗಾವಿ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದ ಪ್ರಾಚಾರ್ಯ ಎಂ.ಎಂ.ಹಿರೇಮಠ ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದ ಎನ್.ಎನ್. ಬಾರಕೇರ ಅವರನ್ನು ಸತ್ಕರಿಸಲಾಯಿತು. ಕ್ರೀಡೆ, ಸಾಂಸ್ಕೃತಿಕ ರಂಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.</p>.<p>ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಎಂ.ಎಂ.ಹಿರೇಮಠ ಮಾತನಾಡಿದರು.</p>.<p>ಸಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಪ್ರೊ.ಎಸ್.ಕೆ.ಸಾರವಾಡ ಸ್ವಾಗತಿಸಿದರು, ಪಿ.ವಿ.ಮನಗೂಳಿ ಅತಿಥಿಗಳನ್ನು ಪರಿಚಯಿಸಿದರು, ಪ್ರೊ.ಎಂ.ಎಸ್.ಲಂಗೋಟಿ ವರದಿ ವಾಚಿಸಿದರು. ಪ್ರೊ.ಎಲ್.ಬಿ.ಹನಮರ ವಂದಿಸಿದರು, ಹಾಗೂ ಪ್ರೊ.ಎ.ಸಿ.ಕೆರೂರ ಮತ್ತು ಪ್ರೊ.ಸೌರಭ ಜಿಗಬಡ್ಡಿ ನಿರೂಪಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260516-19-642984918</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮುಧೋಳ: ‘ಜೀವನದಲ್ಲಿ ಸಾಧನೆಗೆ ವಿದ್ಯೆ ಮುಖ್ಯವೇ ಹೊರತು ಯಾವುದೇ ಜಾತಿ, ಧರ್ಮ, ಬಣ್ಣ, ಆಕಾರ, ರೂಪವಲ್ಲ. ಶಿಕ್ಷಣದಲ್ಲಿ ಓದಿನ ಜೊತೆಗೆ ಉತ್ತಮ ಆಚಾರ-ನಡೆ-ನುಡಿಗಳನ್ನು ಕಲಿಯಬೇಕು. ಹಿರಿಯರನ್ನು ಗೌರವಿಸುವುದು, ತಂದೆ-ತಾಯಿ, ಕಲಿಸಿದ ಗುರುವಿಗೆ ಗೌರವ ತರುವಂತ ಸಂಸ್ಕಾರಯುತ ಜೀವನ ನಡೆಸಬೇಕು. ಉತ್ತಮ ಸಂಸ್ಕಾರ ಅಳವಡಿಸಿಕೊಂಡರೆ ಆದರ್ಶ ಬದುಕು ನಿಮ್ಮದಾಗುತ್ತದೆ’ ಎಂದು ಬ.ವೀ.ವಿ.ಸಂಘದ ಕಾಲೇಜುಗಳ ಆಡಳಿತ ಮಂಡಳಿ ಸದಸ್ಯ ರವೀಂದ್ರ ಎಸ್. ಸಾವಳಗಿಮಠ ಹೇಳಿದರು.</p>.<p>ನಗರದ ದಾನಮ್ಮದೇವಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಿಳಾ ಕಾಲೇಜಿನ 2025-26ನೇ ಸಾಲಿನ ಶೈಕ್ಷಣಿಕ ವರ್ಷದ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಹಾಗೂ ಬಿ.ಎ., ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿನಿಯರ ಬೀಳ್ಕೊಡುವ ಸಮಾರಂಭದಲ್ಲಿ ಶುಕ್ರವಾರ ಮಾತನಾಡಿದರು.</p>.<p>ನಗರದ ಆರ್.ಎಂ.ಜಿ. ಪದವಿ-ಪೂರ್ವ ಕಾಲೇಜಿನ ಪ್ರಾಚಾರ್ಯ ಬಿ.ಎ.ಗಂಜಿಹಾಳ ಮಾತನಾಡಿ, ‘ಸಾಧಿಸುವ ಛಲವಿದ್ದರೆ ಸಾಧನೆಗೆ ಸಾವಿರ ದಾರಿಗಳಿವೆ. ಸಾಧನೆ ಮಾಡುವವರಿಗೆ ವಿವೇಚನೆ, ವೈಚಾರಿಕತೆ, ತಾತ್ವಿಕ ಚಿಂತನೆ ಇರಬೇಕು’ ಎಂದರು.</p>.<p>ಅಂತಿಮ ವರ್ಷದ ವಿದ್ಯಾರ್ಥಿನಿಯರಾದ ಸುಷ್ಮಿತಾ ಮಾಸರೆಡ್ಡಿ, ರಂಜಿತಾ ಯತ್ನಾಳ, ದೀಪಾ ಹುದ್ದಾರ, ಜ್ಯೋತಿ ತೇಲಿ, ಕೃತಿ ಕೋರಿ, ಲಕ್ಷ್ಮಿ ಸಿಂಗಾಡೆ, ಮೇಘಾ ಬಾರಕೇರ, ಸವೀತಾ ಕೋರೆಡ್ಡಿ ಅನುಭವ ಹಂಚಿಕೊಂಡರು.</p>.<p>ಪ್ರೊ.ಮಲ್ಲಿಕಾರ್ಜುನ್ ಎಂ., ಹಾಗೂ ಪ್ರೊ.ಎ.ಎನ್.ಬಾಗೇವಾಡಿ ಮಾತನಾಡಿದರು.</p>.<p>ಇದೇ ಸಂದರ್ಭದಲ್ಲಿ ಈಚೆಗೆ ಬೆಳಗಾವಿ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದ ಪ್ರಾಚಾರ್ಯ ಎಂ.ಎಂ.ಹಿರೇಮಠ ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದ ಎನ್.ಎನ್. ಬಾರಕೇರ ಅವರನ್ನು ಸತ್ಕರಿಸಲಾಯಿತು. ಕ್ರೀಡೆ, ಸಾಂಸ್ಕೃತಿಕ ರಂಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.</p>.<p>ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಎಂ.ಎಂ.ಹಿರೇಮಠ ಮಾತನಾಡಿದರು.</p>.<p>ಸಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಪ್ರೊ.ಎಸ್.ಕೆ.ಸಾರವಾಡ ಸ್ವಾಗತಿಸಿದರು, ಪಿ.ವಿ.ಮನಗೂಳಿ ಅತಿಥಿಗಳನ್ನು ಪರಿಚಯಿಸಿದರು, ಪ್ರೊ.ಎಂ.ಎಸ್.ಲಂಗೋಟಿ ವರದಿ ವಾಚಿಸಿದರು. ಪ್ರೊ.ಎಲ್.ಬಿ.ಹನಮರ ವಂದಿಸಿದರು, ಹಾಗೂ ಪ್ರೊ.ಎ.ಸಿ.ಕೆರೂರ ಮತ್ತು ಪ್ರೊ.ಸೌರಭ ಜಿಗಬಡ್ಡಿ ನಿರೂಪಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260516-19-642984918</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>