<p>ಮುಧೋಳ: ‘ಉತ್ತಮ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯವಾಗಿದೆ. ಸಾಮಾಜಿಕ ಸಮಸ್ಯೆಗಳನ್ನು ಅರಿತು ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಮತ್ತು ಸಾಮಾಜಿಕ ಸಾಮರಸ್ಯವನ್ನು ಎನ್.ಎಸ್.ಎಸ್ ಕಲಿಸಿಕೊಡುತ್ತದೆ’ ಎಂದು ಸೋಮೇಶ್ವರ ಪ್ರೌಢಶಾಲೆಯ ಅಧ್ಯಕ್ಷ ಸದಪ್ಪ ಬಟಕುರ್ಕಿ ಹೇಳಿದರು.</p>.<p>ತಾಲ್ಲೂಕಿನ ಗುಲಗಾಲ ಜಂಬಗಿ ಗ್ರಾಮದಲ್ಲಿ ಈಚೆಗೆ ನಡೆದ ದಾನಮ್ಮದೇವಿ ಮಹಿಳಾ ಕಾಲೇಜಿನ 2025-26ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಹಾಗೂ 2ರ ವಾರ್ಷಿಕ ಸೇವಾ ಶಿಬಿರ ಉದ್ಘಾಟಿಸಿ ಮಾತನಾಡಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಂ.ಎಂ.ಹಿರೇಮಠ ಮಾತನಾಡಿ, ‘ವಿದ್ಯಾರ್ಥಿಗಳಲ್ಲಿ ನಿಸ್ವಾರ್ಥ ಸೇವೆ, ಸೇವಾ ಮನೋಭಾವವನ್ನು ಈ ಶಿಬಿರ ಕಲಿಸುತ್ತದೆ. ಸಮಾಜದಲ್ಲಿ ಶಿಸ್ತು, ಸಂಯಮದಿಂದ ಹೇಗೆ ಬದುಕಲು ಸಾಧ್ಯ ಎಂಬುದನ್ನು ಕಲಿಸಿಕೊಡುತ್ತದೆ. ಅದನ್ನು ತಮ್ಮ ಮುಂದಿನ ಬದುಕಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.</p>.<p>ಎನ್.ಎಸ್.ಎಸ್ ಘಟಕ-2 ಶಿಬಿರಾಧಿಕಾರಿ ಪಿ.ವಿ.ಮನಗೂಳಿ ಸ್ವಾಗತಿಸಿದರು. ಪ್ರೊ.ಎಸ್.ಕೆ.ಸಾರವಾಡ ಪ್ರಾಸ್ತಾವಿಕ ಮಾತನಾಡಿದರು. ಎನ್.ಎಸ್.ಎಸ್ ಘಟಕ- 1 ರ ಶಿಬಿರಾಧಿಕಾರಿ ಪ್ರೊ. ಎಸ್.ಬಿ. ಕಬ್ಬಿಣದ ವಂದಿಸಿದರು. ಪ್ರೊ.ಜಿ.ಎ.ಮೇತ್ರಿ ನಿರೂಪಿಸಿದರು. ಅಕ್ಷತಾ ಬಡಿಗೇರ ಹಾಗೂ ಸಂಗಡಿಗರು ಪ್ರಾರ್ಥಿಸಿ, ಎನ್.ಎಸ್.ಎಸ್ ಗೀತೆ ಹೇಳಿದರು.</p>.<p>ಪ್ರಮುಖರಾದ ಸೋಮಪ್ಪ ಮುಳ್ಳೂರ, ಸಂಗಪ್ಪ ಬಟಕುರ್ಕಿ, ಬಸಪ್ಪ ಮುಳ್ಳೂರ, ದುಂಡಪ್ಪ ಲಿಂಗರೆಡ್ಡಿ, ಜಗದೀಶ ಮುಳ್ಳೂರ, ಸಿದ್ಧಲಿಂಗಪ್ಪ ಅಕ್ಕಮರಡಿ, ಗುರುಲಿಂಗಪ್ಪ ರಾಮತೀರ್ಥ, ಗದಿಗೆಪ್ಪ ಕಳ್ಳಿಗುದ್ದಿ, ಅಪ್ಪಾಸಾಬ ಬಾಡಗಿ ಮುಂತಾದವರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260421-19-1039212508</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮುಧೋಳ: ‘ಉತ್ತಮ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯವಾಗಿದೆ. ಸಾಮಾಜಿಕ ಸಮಸ್ಯೆಗಳನ್ನು ಅರಿತು ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಮತ್ತು ಸಾಮಾಜಿಕ ಸಾಮರಸ್ಯವನ್ನು ಎನ್.ಎಸ್.ಎಸ್ ಕಲಿಸಿಕೊಡುತ್ತದೆ’ ಎಂದು ಸೋಮೇಶ್ವರ ಪ್ರೌಢಶಾಲೆಯ ಅಧ್ಯಕ್ಷ ಸದಪ್ಪ ಬಟಕುರ್ಕಿ ಹೇಳಿದರು.</p>.<p>ತಾಲ್ಲೂಕಿನ ಗುಲಗಾಲ ಜಂಬಗಿ ಗ್ರಾಮದಲ್ಲಿ ಈಚೆಗೆ ನಡೆದ ದಾನಮ್ಮದೇವಿ ಮಹಿಳಾ ಕಾಲೇಜಿನ 2025-26ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಹಾಗೂ 2ರ ವಾರ್ಷಿಕ ಸೇವಾ ಶಿಬಿರ ಉದ್ಘಾಟಿಸಿ ಮಾತನಾಡಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಂ.ಎಂ.ಹಿರೇಮಠ ಮಾತನಾಡಿ, ‘ವಿದ್ಯಾರ್ಥಿಗಳಲ್ಲಿ ನಿಸ್ವಾರ್ಥ ಸೇವೆ, ಸೇವಾ ಮನೋಭಾವವನ್ನು ಈ ಶಿಬಿರ ಕಲಿಸುತ್ತದೆ. ಸಮಾಜದಲ್ಲಿ ಶಿಸ್ತು, ಸಂಯಮದಿಂದ ಹೇಗೆ ಬದುಕಲು ಸಾಧ್ಯ ಎಂಬುದನ್ನು ಕಲಿಸಿಕೊಡುತ್ತದೆ. ಅದನ್ನು ತಮ್ಮ ಮುಂದಿನ ಬದುಕಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.</p>.<p>ಎನ್.ಎಸ್.ಎಸ್ ಘಟಕ-2 ಶಿಬಿರಾಧಿಕಾರಿ ಪಿ.ವಿ.ಮನಗೂಳಿ ಸ್ವಾಗತಿಸಿದರು. ಪ್ರೊ.ಎಸ್.ಕೆ.ಸಾರವಾಡ ಪ್ರಾಸ್ತಾವಿಕ ಮಾತನಾಡಿದರು. ಎನ್.ಎಸ್.ಎಸ್ ಘಟಕ- 1 ರ ಶಿಬಿರಾಧಿಕಾರಿ ಪ್ರೊ. ಎಸ್.ಬಿ. ಕಬ್ಬಿಣದ ವಂದಿಸಿದರು. ಪ್ರೊ.ಜಿ.ಎ.ಮೇತ್ರಿ ನಿರೂಪಿಸಿದರು. ಅಕ್ಷತಾ ಬಡಿಗೇರ ಹಾಗೂ ಸಂಗಡಿಗರು ಪ್ರಾರ್ಥಿಸಿ, ಎನ್.ಎಸ್.ಎಸ್ ಗೀತೆ ಹೇಳಿದರು.</p>.<p>ಪ್ರಮುಖರಾದ ಸೋಮಪ್ಪ ಮುಳ್ಳೂರ, ಸಂಗಪ್ಪ ಬಟಕುರ್ಕಿ, ಬಸಪ್ಪ ಮುಳ್ಳೂರ, ದುಂಡಪ್ಪ ಲಿಂಗರೆಡ್ಡಿ, ಜಗದೀಶ ಮುಳ್ಳೂರ, ಸಿದ್ಧಲಿಂಗಪ್ಪ ಅಕ್ಕಮರಡಿ, ಗುರುಲಿಂಗಪ್ಪ ರಾಮತೀರ್ಥ, ಗದಿಗೆಪ್ಪ ಕಳ್ಳಿಗುದ್ದಿ, ಅಪ್ಪಾಸಾಬ ಬಾಡಗಿ ಮುಂತಾದವರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260421-19-1039212508</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>