<p>ಮೈಸೂರು: ‘ಚಿಣ್ಣರ ಕಲಾ ಪ್ರತಿಭೆಯನ್ನು ಅರಳಿಸುವ, ಪ್ರೋತ್ಸಾಹ ಕೊಡುವ ಕೆಲಸವನ್ನು ಪೋಷಕರು ಮಾಡಬೇಕು’ ಎಂದು ರಂಗಕರ್ಮಿ ಇಂದಿರಾ ನಾಯರ್ ಹೇಳಿದರು.</p>.<p>ನಗರದ ಹೊರವಲಯದ ಎಸ್ಬಿಎಂ ಬಡಾವಣೆಯ ‘ಚಾರು ಸಾಂಸ್ಕೃತಿಕ ಪ್ರತಿಷ್ಠಾನ’ದಲ್ಲಿ ಆಯೋಜಿಸಿದ್ದ ‘ಆಡೋಣ ಬಾ’ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಮಾತನಾಡಿ, ‘ಪ್ರತಿ ಮಗುವಿನ ಆಸಕ್ತಿಯನ್ನು ತಿಳಿಯಬೇಕು. ಕಲೆಯಲ್ಲಿ ತೊಡಗಿಸಿಕೊಂಡಿದ್ದರೆ ಅದರಲ್ಲಿ ಕೌಶಲ ಸಾಧಿಸಲು ನೆರವಾಗಬೇಕು. ಮಕ್ಕಳಿಗಾಗಿ ಸಮಯವನ್ನು ಕೊಡಬೇಕು’ ಎಂದರು.</p>.<p>ಶಿಬಿರದ ಸಂಚಾಲಕಿಯೂ ಆದ ರಂಗ ನಟಿ ರಾಜಲಕ್ಷ್ಮಿ ಕೆ. ಮೂರ್ತಿ ಮಾತನಾಡಿದರು. ಪ್ರತಿಷ್ಠಾನದ ಅಧ್ಯಕ್ಷೆ ಡಿ.ಶೀಲಾ ಕುಮಾರಿ, ಭೂಪತಿ, ಗಿರೀಶ್, ಭವ್ಯಾ, ವಿನುತಾ ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260423-39-2069225973</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ‘ಚಿಣ್ಣರ ಕಲಾ ಪ್ರತಿಭೆಯನ್ನು ಅರಳಿಸುವ, ಪ್ರೋತ್ಸಾಹ ಕೊಡುವ ಕೆಲಸವನ್ನು ಪೋಷಕರು ಮಾಡಬೇಕು’ ಎಂದು ರಂಗಕರ್ಮಿ ಇಂದಿರಾ ನಾಯರ್ ಹೇಳಿದರು.</p>.<p>ನಗರದ ಹೊರವಲಯದ ಎಸ್ಬಿಎಂ ಬಡಾವಣೆಯ ‘ಚಾರು ಸಾಂಸ್ಕೃತಿಕ ಪ್ರತಿಷ್ಠಾನ’ದಲ್ಲಿ ಆಯೋಜಿಸಿದ್ದ ‘ಆಡೋಣ ಬಾ’ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಮಾತನಾಡಿ, ‘ಪ್ರತಿ ಮಗುವಿನ ಆಸಕ್ತಿಯನ್ನು ತಿಳಿಯಬೇಕು. ಕಲೆಯಲ್ಲಿ ತೊಡಗಿಸಿಕೊಂಡಿದ್ದರೆ ಅದರಲ್ಲಿ ಕೌಶಲ ಸಾಧಿಸಲು ನೆರವಾಗಬೇಕು. ಮಕ್ಕಳಿಗಾಗಿ ಸಮಯವನ್ನು ಕೊಡಬೇಕು’ ಎಂದರು.</p>.<p>ಶಿಬಿರದ ಸಂಚಾಲಕಿಯೂ ಆದ ರಂಗ ನಟಿ ರಾಜಲಕ್ಷ್ಮಿ ಕೆ. ಮೂರ್ತಿ ಮಾತನಾಡಿದರು. ಪ್ರತಿಷ್ಠಾನದ ಅಧ್ಯಕ್ಷೆ ಡಿ.ಶೀಲಾ ಕುಮಾರಿ, ಭೂಪತಿ, ಗಿರೀಶ್, ಭವ್ಯಾ, ವಿನುತಾ ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260423-39-2069225973</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>