<p>ಮೈಸೂರು: ‘ಬದಲಾದ ಜೀವನ ಶೈಲಿಯು ಸಂಬಂಧಗಳಲ್ಲಿ ಬಿರುಕು ಮೂಡಿಸಿದೆ’ ಎಂದು ಲೇಖಕ ಜಯಂತ ಕಾಯ್ಕಿಣಿ ಕಳವಳ ವ್ಯಕ್ತಪಡಿಸಿದರು.</p>.<p>ನಗರದ ವನರಂಗದಲ್ಲಿ ನಿರಂತರ ಫೌಂಡೇಷನ್ ಮತ್ತು ಅಭಿರುಚಿ ಪ್ರಕಾಶನದಿಂದ ಶನಿವಾರ ಆಯೋಜಿಸಿದ್ದ ರಂಗಕರ್ಮಿ ಪ್ರಸಾದ್ ಕುಂದೂರು ಅನುವಾದಿಸಿರುವ, ಮರಾಠಿ ನಾಟಕಕಾರ ಮಹೇಶ್ ಎಲಂಕುಂಚವಾರ್ ಅವರ ‘ಪಾರ್ಟಿ’ ನಾಟಕ ಬಿಡುಗಡೆ ಮಾತನಾಡಿದರು.</p>.<p>‘ಈಗಿನ ಯುವಕರು ಮನೆಯಲ್ಲೇ ಐರನ್ ಮಾಡಿದ ಬಟ್ಟೆ, ಚಪ್ಪಲಿ ಧರಿಸುತ್ತಾರೆ. ಹಳ್ಳಿಯಿಂದ ನಗರಕ್ಕೆ ಬರುವ ತಂದೆ– ತಾಯಿಯರು ಯುವಕರನ್ನು ನೋಡಿ ಹೆದರುವಂತಾಗಿದೆ. ಮಹೇಶ್ ಎಲಂಕುಂಚವಾರ್ ಅವರು 50 ವರ್ಷದ ಹಿಂದೆ ಬರೆದ ನಾಟಕ ಕೃತಿ ವರ್ತಮಾನದ ಪರಿಸ್ಥಿತಿಯನ್ನು ಹೇಳುತ್ತದೆ’ ಎಂದರು.</p>.<p>‘ಮನುಷ್ಯನ ನಿತ್ಯ ಜೀವನದಲ್ಲಿ ನಾಟಕವೂ ಒಂದು ಭಾಗ. ಇದೀಗ ಅಕ್ಷರ ರೂಪದಲ್ಲಿ ಬಂದಿರುವ ನಾಟಕ ಸಮಾಜದ ಪ್ರತಿಬಿಂಬ ಆಗಿದೆ. ಮಹೇಶ್ ಎಲಕುಂಚವಾರ್ ತಮ್ಮ ನಾಟಕಗಳಲ್ಲಿ ಅನಗತ್ಯ ಪದಗಳನ್ನು ಸೇರಿಸಲು ಇಷ್ಟಪಡುತ್ತಿರಲಿಲ್ಲ. ಆ ಸಂಭಾಷಣೆಗೆ ಎಷ್ಟು ಪದಗಳು ಅವಶ್ಯವೊ ಅಷ್ಟು ಮಾತ್ರ ಸೇರಿಸುತ್ತಿದ್ದರು’ ಎಂದರು.</p>.<p>ವಿಮರ್ಶಕ ಪ್ರೊ.ಓ.ಎಲ್.ನಾಗಭೂಷಣಸ್ವಾಮಿ ಮಾತನಾಡಿ, ‘ನಗರ ಪ್ರದೇಶಗಳಲ್ಲಿ ಬದುಕುತ್ತಿರುವ ಸಭ್ಯ ಸಮಾಜ ಒಂಟಿತನದಿಂದ ಬಳಲುತ್ತಿದೆ. ಸಭ್ಯ ಸಮಾಜದ ಹಾವಭಾವಗಳನ್ನು ಗಮನಿಸುವ ತಳ ಸಮುದಾಯವು, ತಮ್ಮನ್ನು ಈ ವ್ಯವಸ್ಥೆಯಿಂದ ದೂರವಿಟ್ಟ ಸಮುದಾಯವನ್ನು ಸದಾ ಶಪಿಸುತ್ತದೆ’ ಎಂದು ಹೇಳಿದರು.</p>.<p>‘ಎಲಕುಂಚವಾರ್ ನಾಟಕವನ್ನು ಕನ್ನಡದ ನೆಲಕ್ಕೆ ಹೊಂದುವಂತೆ ಪ್ರಸಾದ್ ಕುಂದೂರು ಅನುವಾದಿಸಿರುವುದು ವಿಶೇಷ’ ಎಂದು ಶ್ಲಾಘಿಸಿದರು.</p>.<p>ರಂಗಕರ್ಮಿ ಚಿದಂಬರರಾವ್ ಜಂಬೆ, ಲೇಖಕ ಡಿ.ಎಸ್.ಚೌಗಲೆ, ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು, ಪ್ರಕಾಶಕ ಅಭಿರುಚಿ ಗಣೇಶ್, ಅನುವಾದಕ ಪ್ರಸಾದ್ ಕುಂದೂರು ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260330-37-763761060</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ‘ಬದಲಾದ ಜೀವನ ಶೈಲಿಯು ಸಂಬಂಧಗಳಲ್ಲಿ ಬಿರುಕು ಮೂಡಿಸಿದೆ’ ಎಂದು ಲೇಖಕ ಜಯಂತ ಕಾಯ್ಕಿಣಿ ಕಳವಳ ವ್ಯಕ್ತಪಡಿಸಿದರು.</p>.<p>ನಗರದ ವನರಂಗದಲ್ಲಿ ನಿರಂತರ ಫೌಂಡೇಷನ್ ಮತ್ತು ಅಭಿರುಚಿ ಪ್ರಕಾಶನದಿಂದ ಶನಿವಾರ ಆಯೋಜಿಸಿದ್ದ ರಂಗಕರ್ಮಿ ಪ್ರಸಾದ್ ಕುಂದೂರು ಅನುವಾದಿಸಿರುವ, ಮರಾಠಿ ನಾಟಕಕಾರ ಮಹೇಶ್ ಎಲಂಕುಂಚವಾರ್ ಅವರ ‘ಪಾರ್ಟಿ’ ನಾಟಕ ಬಿಡುಗಡೆ ಮಾತನಾಡಿದರು.</p>.<p>‘ಈಗಿನ ಯುವಕರು ಮನೆಯಲ್ಲೇ ಐರನ್ ಮಾಡಿದ ಬಟ್ಟೆ, ಚಪ್ಪಲಿ ಧರಿಸುತ್ತಾರೆ. ಹಳ್ಳಿಯಿಂದ ನಗರಕ್ಕೆ ಬರುವ ತಂದೆ– ತಾಯಿಯರು ಯುವಕರನ್ನು ನೋಡಿ ಹೆದರುವಂತಾಗಿದೆ. ಮಹೇಶ್ ಎಲಂಕುಂಚವಾರ್ ಅವರು 50 ವರ್ಷದ ಹಿಂದೆ ಬರೆದ ನಾಟಕ ಕೃತಿ ವರ್ತಮಾನದ ಪರಿಸ್ಥಿತಿಯನ್ನು ಹೇಳುತ್ತದೆ’ ಎಂದರು.</p>.<p>‘ಮನುಷ್ಯನ ನಿತ್ಯ ಜೀವನದಲ್ಲಿ ನಾಟಕವೂ ಒಂದು ಭಾಗ. ಇದೀಗ ಅಕ್ಷರ ರೂಪದಲ್ಲಿ ಬಂದಿರುವ ನಾಟಕ ಸಮಾಜದ ಪ್ರತಿಬಿಂಬ ಆಗಿದೆ. ಮಹೇಶ್ ಎಲಕುಂಚವಾರ್ ತಮ್ಮ ನಾಟಕಗಳಲ್ಲಿ ಅನಗತ್ಯ ಪದಗಳನ್ನು ಸೇರಿಸಲು ಇಷ್ಟಪಡುತ್ತಿರಲಿಲ್ಲ. ಆ ಸಂಭಾಷಣೆಗೆ ಎಷ್ಟು ಪದಗಳು ಅವಶ್ಯವೊ ಅಷ್ಟು ಮಾತ್ರ ಸೇರಿಸುತ್ತಿದ್ದರು’ ಎಂದರು.</p>.<p>ವಿಮರ್ಶಕ ಪ್ರೊ.ಓ.ಎಲ್.ನಾಗಭೂಷಣಸ್ವಾಮಿ ಮಾತನಾಡಿ, ‘ನಗರ ಪ್ರದೇಶಗಳಲ್ಲಿ ಬದುಕುತ್ತಿರುವ ಸಭ್ಯ ಸಮಾಜ ಒಂಟಿತನದಿಂದ ಬಳಲುತ್ತಿದೆ. ಸಭ್ಯ ಸಮಾಜದ ಹಾವಭಾವಗಳನ್ನು ಗಮನಿಸುವ ತಳ ಸಮುದಾಯವು, ತಮ್ಮನ್ನು ಈ ವ್ಯವಸ್ಥೆಯಿಂದ ದೂರವಿಟ್ಟ ಸಮುದಾಯವನ್ನು ಸದಾ ಶಪಿಸುತ್ತದೆ’ ಎಂದು ಹೇಳಿದರು.</p>.<p>‘ಎಲಕುಂಚವಾರ್ ನಾಟಕವನ್ನು ಕನ್ನಡದ ನೆಲಕ್ಕೆ ಹೊಂದುವಂತೆ ಪ್ರಸಾದ್ ಕುಂದೂರು ಅನುವಾದಿಸಿರುವುದು ವಿಶೇಷ’ ಎಂದು ಶ್ಲಾಘಿಸಿದರು.</p>.<p>ರಂಗಕರ್ಮಿ ಚಿದಂಬರರಾವ್ ಜಂಬೆ, ಲೇಖಕ ಡಿ.ಎಸ್.ಚೌಗಲೆ, ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು, ಪ್ರಕಾಶಕ ಅಭಿರುಚಿ ಗಣೇಶ್, ಅನುವಾದಕ ಪ್ರಸಾದ್ ಕುಂದೂರು ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260330-37-763761060</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>