<p>ಮೈಸೂರು: ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ 22ನೇ ನಿರ್ದೇಶಕರಾಗಿ ಪ್ರೊ.ನಂಜಯ್ಯ ಹೊಂಗನೂರು ಮಂಗಳವಾರ ಅಧಿಕಾರ ಸ್ವೀಕರಿಸಿದರು.</p>.<p>ಪ್ರಸಾರಾಂಗದ ನಿರ್ದೇಶಕರಾಗಿದ್ದಅವರು, ಪ್ರೊ.ಎನ್.ಕೆ.ಲೋಲಾಕ್ಷಿ ಅವರ ಅವಧಿ ಪೂರ್ಣಗೊಂಡ ಕಾರಣ ಮಾತೃಸಂಸ್ಥೆಯ ಜವಾಬ್ದಾರಿಯನ್ನು ವಹಿಸಿಕೊಂಡರು.</p>.<p>‘ಕುವೆಂಪು, ದೇಜಗೌ, ಹಾಮಾನಾ, ಜೀಶಂಪ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇಂಥ ಸಂಸ್ಥೆಯಲ್ಲಿ ಕೆಲಸ ಮಾಡುವಾಗ ಭಯ ಮತ್ತು ಜವಾಬ್ದಾರಿ ಇರುತ್ತದೆ. ಪ್ರಸಾರಾಂಗ ನಿರ್ದೇಶಕರಾಗಿ ನಂಜಯ್ಯ ಅನೇಕ ಕೆಲಸ ಮಾಡಿದ್ದಾರೆ. ಶಕ್ತವಾದ ನಿರ್ದೇಶಕರು ಸಂಸ್ಥೆಗೆ ಸಿಕ್ಕಿದ್ದಾರೆ’ ಎಂದು ಪ್ರೊ.ಎನ್.ಕೆ.ಲೋಲಾಕ್ಷಿ ಹೇಳಿದರು.</p>.<p>ಜಾಲತಾಣ ರಚನೆ: ‘ಸಂಸ್ಥೆಯ ಜಾಲತಾಣ ಮತ್ತು ಲೋಗೊವನ್ನು ಶೀಘ್ರ ರಚಿಸಿಲಾಗುವುದು’ ಎಂದು ಪ್ರೊ.ನಂಜಯ್ಯ ಹೊಂಗನೂರು ಹೇಳಿದರು.</p>.<p>‘ಜಾಗತಿಕ ಮಟ್ಟದಲ್ಲಿ ಕನ್ನಡ ಅಧ್ಯಯನ ಸಂಸ್ಥೆಯ ಶ್ರೇಷ್ಠವಾದ ಕೆಲಸಗಳು ತಿಳಿಸಲು ವೆಬ್ಸೈಟ್ ಅಗತ್ಯವಾಗಿ ರೂಪಿಸಬೇಕಾಗಿದೆ. ಇದೇ ಡಿಸೆಂಬರ್ಗೆ 60ನೇ ವರ್ಷದ ಆಚರಣೆಯಿದ್ದು, ಪುಸ್ತಕ ಹೊರತರಲಾಗುವುದು’ ಎಂದರು.</p>.<p>ಸಂಸ್ಥೆ ಅಧೀಕ್ಷಕಿ ಹೇಮಲತಾ, ಪ್ರೊ.ಶಶಿಕಲಾ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260527-39-1563627690</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ 22ನೇ ನಿರ್ದೇಶಕರಾಗಿ ಪ್ರೊ.ನಂಜಯ್ಯ ಹೊಂಗನೂರು ಮಂಗಳವಾರ ಅಧಿಕಾರ ಸ್ವೀಕರಿಸಿದರು.</p>.<p>ಪ್ರಸಾರಾಂಗದ ನಿರ್ದೇಶಕರಾಗಿದ್ದಅವರು, ಪ್ರೊ.ಎನ್.ಕೆ.ಲೋಲಾಕ್ಷಿ ಅವರ ಅವಧಿ ಪೂರ್ಣಗೊಂಡ ಕಾರಣ ಮಾತೃಸಂಸ್ಥೆಯ ಜವಾಬ್ದಾರಿಯನ್ನು ವಹಿಸಿಕೊಂಡರು.</p>.<p>‘ಕುವೆಂಪು, ದೇಜಗೌ, ಹಾಮಾನಾ, ಜೀಶಂಪ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇಂಥ ಸಂಸ್ಥೆಯಲ್ಲಿ ಕೆಲಸ ಮಾಡುವಾಗ ಭಯ ಮತ್ತು ಜವಾಬ್ದಾರಿ ಇರುತ್ತದೆ. ಪ್ರಸಾರಾಂಗ ನಿರ್ದೇಶಕರಾಗಿ ನಂಜಯ್ಯ ಅನೇಕ ಕೆಲಸ ಮಾಡಿದ್ದಾರೆ. ಶಕ್ತವಾದ ನಿರ್ದೇಶಕರು ಸಂಸ್ಥೆಗೆ ಸಿಕ್ಕಿದ್ದಾರೆ’ ಎಂದು ಪ್ರೊ.ಎನ್.ಕೆ.ಲೋಲಾಕ್ಷಿ ಹೇಳಿದರು.</p>.<p>ಜಾಲತಾಣ ರಚನೆ: ‘ಸಂಸ್ಥೆಯ ಜಾಲತಾಣ ಮತ್ತು ಲೋಗೊವನ್ನು ಶೀಘ್ರ ರಚಿಸಿಲಾಗುವುದು’ ಎಂದು ಪ್ರೊ.ನಂಜಯ್ಯ ಹೊಂಗನೂರು ಹೇಳಿದರು.</p>.<p>‘ಜಾಗತಿಕ ಮಟ್ಟದಲ್ಲಿ ಕನ್ನಡ ಅಧ್ಯಯನ ಸಂಸ್ಥೆಯ ಶ್ರೇಷ್ಠವಾದ ಕೆಲಸಗಳು ತಿಳಿಸಲು ವೆಬ್ಸೈಟ್ ಅಗತ್ಯವಾಗಿ ರೂಪಿಸಬೇಕಾಗಿದೆ. ಇದೇ ಡಿಸೆಂಬರ್ಗೆ 60ನೇ ವರ್ಷದ ಆಚರಣೆಯಿದ್ದು, ಪುಸ್ತಕ ಹೊರತರಲಾಗುವುದು’ ಎಂದರು.</p>.<p>ಸಂಸ್ಥೆ ಅಧೀಕ್ಷಕಿ ಹೇಮಲತಾ, ಪ್ರೊ.ಶಶಿಕಲಾ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260527-39-1563627690</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>