<p>ಮೈಸೂರು: ಎಲ್ಅಂಡ್ಟಿ ಟೆಕ್ನಾಲಜಿ ಸರ್ವೀಸಸ್ ಸಂಸ್ಥೆಯು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಎಂಜಿನಿಯರಿಂಗ್ ಸ್ಪರ್ಧಾ ವೇದಿಕೆಯಾದ ‘ಟೆಕ್ಜಿಯಂ’ 9ನೇ ಆವೃತ್ತಿಯು ಇಲ್ಲಿನ ಎಲ್ಟಿಟಿಎಸ್ ಮೈಸೂರು ಕ್ಯಾಂಪಸ್ನಲ್ಲಿ ಈಚೆಗೆ ಯಶಸ್ವಿಯಾಗಿ ನಡೆಯಿತು.</p>.<p>ದೇಶದ ವಿವಿಧೆಡೆಯ 540ಕ್ಕೂ ಹೆಚ್ಚು ಎಂಜಿನಿಯರಿಂಗ್ ಸಂಸ್ಥೆಗಳಿಂದ ಸ್ಪರ್ಧಿಗಳು ಹೆಸರು ನೋಂದಾಯಿಸಿದ್ದರು. ದಾಖಲೆಯ 62ಸಾವಿರಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಸಿದ್ದರು. ಈ ಹಿಂದಿನ ಆವೃತ್ತಿಗೆ ಹೋಲಿಸಿದರೆ ಈ ಸಂಖ್ಯೆ ಶೇ. 60ರಷ್ಟು ಹೆಚ್ಚಳವಾಗಿದ್ದು, 2016ರಲ್ಲಿ ಈ ವೇದಿಕೆ ಆರಂಭವಾದಾಗಿನಿಂದ ಶೇ. 800ರಷ್ಟು ಬೆಳವಣಿಗೆ ಕಂಡಿದೆ. ಸ್ಪರ್ಧಿಗಳು ವಿವಿಧ ತಂತ್ರಜ್ಞಾನಗಳಲ್ಲಿ ನವೀನ ಪರಿಕಲ್ಪನೆಗಳನ್ನು ಪ್ರದರ್ಶಿಸಿದರು.</p>.<p>ಮುಖ್ಯ ಅತಿಥಿಯಾಗಿದ್ದ ಸಿಎಸ್ಐಆರ್–ಎನ್ಎಎಲ್ನ ಹಿರಿಯ ವಿಜ್ಞಾನಿ ಶುಭಾ ವಿ. ಅಯ್ಯಂಗಾರ್ ಮಾತನಾಡಿ, ‘ವಿದ್ಯಾರ್ಥಿಗಳ ಪರಿಕಲ್ಪನೆಗಳನ್ನು ನೈಜ ಜಗತ್ತಿನ ಪರಿಣಾಮಕಾರಿ ಮತ್ತು ಕೈಗಾರಿಕೆಗೆ ಪೂರಕವಾದ ಪರಿಹಾರಗಳನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಈ ವೇದಿಕೆ ಸಹಕಾರಿಯಾಗಿದೆ. ಮುಂದಿನ ತಲೆಮಾರಿನ ಎಂಜಿನಿಯರಿಂಗ್ ಆವಿಷ್ಕಾರಗಳನ್ನು ಪೋಷಿಸಲು ಇಂತಹ ಯೋಜನೆಗಳು ಅತ್ಯಗತ್ಯ’ ಎಂದರು.</p>.<p>ಅಂತಿಮ ಹಂತಕ್ಕೆ ಆಯ್ಕೆಯಾದ 34 ತಂಡಗಳು ಮಾದರಿಗಳನ್ನು ಪ್ರದರ್ಶಿಸಿದವು. ವಿಜೇತರಿಗೆ ಒಟ್ಟು ₹ 18 ಲಕ್ಷ ಮೊತ್ತದ ಬಹುಮಾನ ವಿತರಿಸಲಾಯಿತು.</p>.<p>ಫಲಿತಾಂಶ: ಪ್ರಥಮ ಬಹುಮಾನ: ಎಂ.ಎಸ್. ರಾಮಯ್ಯ ಎಂಜಿನಿಯರಿಂಗ್ ಕಾಲೇಜು (ಬೆಂಗಳೂರು) ತಂಡ ಅಭಿವೃದ್ಧಿಪಡಿಸಿದ ‘ನೆಕ್ಸ್ಟ್ ಜೆನ್ ಸೆಲ್ಫ್- ಚಾರ್ಜಿಂಗ್ ಹೈಬ್ರಿಡ್ ಸ್ಕೂಟರ್’ ಯೋಜನೆ.</p>.<p>ದ್ವಿತೀಯ: ಆರ್ಎನ್ಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬೆಂಗಳೂರು) ವಿದ್ಯಾರ್ಥಿಗಳು ಸಿದ್ಧಪಡಿಸಿದ ‘ಟೆಟ್ರೋಬೋಟ್ - ಮಾಡ್ಯುಲರ್ ರೋಬೊಟಿಕ್ ಆರ್ಮ್ ಯೋಜನೆ’.</p>.<p>ತೃತೀಯ: ಪಿಎಸ್ಎನ್ಎ ಕಾಲೇಜ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ (ದಿಂಡಿಗಲ್, ತಮಿಳುನಾಡು) ವಿದ್ಯಾರ್ಥಿಗಳು ತಯಾರಿಸಿದ ‘ಏರಿಸ್ - ಸ್ಟೆಬಿಲಿಟಿ ಸ್ಟಾರ್ಟ್ಸ್ ವಿತ್ ಕಂಫರ್ಟ್ ಯೋಜನೆ’ ಬಹುಮಾನ ಗಳಿಸಿತು.</p>.<p>ಪೀಪಲ್ಸ್ ಚಾಯ್ಸ್ ಅವಾರ್ಡ್: ಇನ್ಸ್ಟಿಟ್ಯೂಟ್ ಆಫ್ ಟೆಕ್ನಿಕಲ್ ಎಜುಕೇಷನ್ ಆಂಡ್ ರಿಸರ್ಚ್ - ಐಟಿಇಆರ್ (ಭುವನೇಶ್ವರ, ಒಡಿಶಾ) ತಂಡ ರೂಪಿಸಿರುವ ‘ಚಿರಂಜೀವಿ ಯೋಜನೆ’.</p>.<p>ಎಲ್ಅಂಡ್ಟಿ ಟೆಕ್ನಾಲಜಿ ಸರ್ವೀಸಸ್ನ ಕಾರ್ಯನಿರ್ವಾಹಕ ನಿರ್ದೇಶಕ ರಾಜೀವ್ ಗುಪ್ತ ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260517-39-1965393386</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ಎಲ್ಅಂಡ್ಟಿ ಟೆಕ್ನಾಲಜಿ ಸರ್ವೀಸಸ್ ಸಂಸ್ಥೆಯು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಎಂಜಿನಿಯರಿಂಗ್ ಸ್ಪರ್ಧಾ ವೇದಿಕೆಯಾದ ‘ಟೆಕ್ಜಿಯಂ’ 9ನೇ ಆವೃತ್ತಿಯು ಇಲ್ಲಿನ ಎಲ್ಟಿಟಿಎಸ್ ಮೈಸೂರು ಕ್ಯಾಂಪಸ್ನಲ್ಲಿ ಈಚೆಗೆ ಯಶಸ್ವಿಯಾಗಿ ನಡೆಯಿತು.</p>.<p>ದೇಶದ ವಿವಿಧೆಡೆಯ 540ಕ್ಕೂ ಹೆಚ್ಚು ಎಂಜಿನಿಯರಿಂಗ್ ಸಂಸ್ಥೆಗಳಿಂದ ಸ್ಪರ್ಧಿಗಳು ಹೆಸರು ನೋಂದಾಯಿಸಿದ್ದರು. ದಾಖಲೆಯ 62ಸಾವಿರಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಸಿದ್ದರು. ಈ ಹಿಂದಿನ ಆವೃತ್ತಿಗೆ ಹೋಲಿಸಿದರೆ ಈ ಸಂಖ್ಯೆ ಶೇ. 60ರಷ್ಟು ಹೆಚ್ಚಳವಾಗಿದ್ದು, 2016ರಲ್ಲಿ ಈ ವೇದಿಕೆ ಆರಂಭವಾದಾಗಿನಿಂದ ಶೇ. 800ರಷ್ಟು ಬೆಳವಣಿಗೆ ಕಂಡಿದೆ. ಸ್ಪರ್ಧಿಗಳು ವಿವಿಧ ತಂತ್ರಜ್ಞಾನಗಳಲ್ಲಿ ನವೀನ ಪರಿಕಲ್ಪನೆಗಳನ್ನು ಪ್ರದರ್ಶಿಸಿದರು.</p>.<p>ಮುಖ್ಯ ಅತಿಥಿಯಾಗಿದ್ದ ಸಿಎಸ್ಐಆರ್–ಎನ್ಎಎಲ್ನ ಹಿರಿಯ ವಿಜ್ಞಾನಿ ಶುಭಾ ವಿ. ಅಯ್ಯಂಗಾರ್ ಮಾತನಾಡಿ, ‘ವಿದ್ಯಾರ್ಥಿಗಳ ಪರಿಕಲ್ಪನೆಗಳನ್ನು ನೈಜ ಜಗತ್ತಿನ ಪರಿಣಾಮಕಾರಿ ಮತ್ತು ಕೈಗಾರಿಕೆಗೆ ಪೂರಕವಾದ ಪರಿಹಾರಗಳನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಈ ವೇದಿಕೆ ಸಹಕಾರಿಯಾಗಿದೆ. ಮುಂದಿನ ತಲೆಮಾರಿನ ಎಂಜಿನಿಯರಿಂಗ್ ಆವಿಷ್ಕಾರಗಳನ್ನು ಪೋಷಿಸಲು ಇಂತಹ ಯೋಜನೆಗಳು ಅತ್ಯಗತ್ಯ’ ಎಂದರು.</p>.<p>ಅಂತಿಮ ಹಂತಕ್ಕೆ ಆಯ್ಕೆಯಾದ 34 ತಂಡಗಳು ಮಾದರಿಗಳನ್ನು ಪ್ರದರ್ಶಿಸಿದವು. ವಿಜೇತರಿಗೆ ಒಟ್ಟು ₹ 18 ಲಕ್ಷ ಮೊತ್ತದ ಬಹುಮಾನ ವಿತರಿಸಲಾಯಿತು.</p>.<p>ಫಲಿತಾಂಶ: ಪ್ರಥಮ ಬಹುಮಾನ: ಎಂ.ಎಸ್. ರಾಮಯ್ಯ ಎಂಜಿನಿಯರಿಂಗ್ ಕಾಲೇಜು (ಬೆಂಗಳೂರು) ತಂಡ ಅಭಿವೃದ್ಧಿಪಡಿಸಿದ ‘ನೆಕ್ಸ್ಟ್ ಜೆನ್ ಸೆಲ್ಫ್- ಚಾರ್ಜಿಂಗ್ ಹೈಬ್ರಿಡ್ ಸ್ಕೂಟರ್’ ಯೋಜನೆ.</p>.<p>ದ್ವಿತೀಯ: ಆರ್ಎನ್ಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬೆಂಗಳೂರು) ವಿದ್ಯಾರ್ಥಿಗಳು ಸಿದ್ಧಪಡಿಸಿದ ‘ಟೆಟ್ರೋಬೋಟ್ - ಮಾಡ್ಯುಲರ್ ರೋಬೊಟಿಕ್ ಆರ್ಮ್ ಯೋಜನೆ’.</p>.<p>ತೃತೀಯ: ಪಿಎಸ್ಎನ್ಎ ಕಾಲೇಜ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ (ದಿಂಡಿಗಲ್, ತಮಿಳುನಾಡು) ವಿದ್ಯಾರ್ಥಿಗಳು ತಯಾರಿಸಿದ ‘ಏರಿಸ್ - ಸ್ಟೆಬಿಲಿಟಿ ಸ್ಟಾರ್ಟ್ಸ್ ವಿತ್ ಕಂಫರ್ಟ್ ಯೋಜನೆ’ ಬಹುಮಾನ ಗಳಿಸಿತು.</p>.<p>ಪೀಪಲ್ಸ್ ಚಾಯ್ಸ್ ಅವಾರ್ಡ್: ಇನ್ಸ್ಟಿಟ್ಯೂಟ್ ಆಫ್ ಟೆಕ್ನಿಕಲ್ ಎಜುಕೇಷನ್ ಆಂಡ್ ರಿಸರ್ಚ್ - ಐಟಿಇಆರ್ (ಭುವನೇಶ್ವರ, ಒಡಿಶಾ) ತಂಡ ರೂಪಿಸಿರುವ ‘ಚಿರಂಜೀವಿ ಯೋಜನೆ’.</p>.<p>ಎಲ್ಅಂಡ್ಟಿ ಟೆಕ್ನಾಲಜಿ ಸರ್ವೀಸಸ್ನ ಕಾರ್ಯನಿರ್ವಾಹಕ ನಿರ್ದೇಶಕ ರಾಜೀವ್ ಗುಪ್ತ ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260517-39-1965393386</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>