<p>ಮೈಸೂರು: ‘ಸಂಸ್ಕೃತಿ ಮತ್ತು ಆಲೋಚನೆಗಳನ್ನು ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಯಥಾವತ್ತಾಗಿ ದಾಟಿಸುವ ಅನುವಾದ ಪ್ರಕ್ರಿಯೆಯು ಅತ್ಯಂತ ಸೃಜನಶೀಲ ಕೆಲಸ’ ಎಂದು ಲೇಖಕ ಪ್ರಸನ್ನಕುಮಾರ್ ಕೆರಗೋಡು ಅಭಿಪ್ರಾಯಪಟ್ಟರು.</p>.<p>ನಗರದ ಸರಸ್ವತಿಪುರಂನ ರೋಟರಿ ಕ್ಲಬ್ ಪಶ್ಚಿಮ ಶಾಲೆ ಸಭಾಂಗಣದಲ್ಲಿ ಪ್ರೊ.ಕೆ.ವೆಂಕಟಗಿರಿಗೌಡ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಪರಿಷತ್ ಹಾಗೂ ಹನ್ಯಾಳು ಪ್ರಕಾಶನದ ವತಿಯಿಂದ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ, ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಹೆಚ್ಚುವರಿ ಆಯುಕ್ತ ಆಲಕೆರೆ ಜೆ.ರಾಮಲಿಂಗೇಗೌಡ ಅವರು ಅನುವಾದಿಸಿದ 4 ಕೃತಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.</p>.<p>‘ಅನುವಾದ ಕೇವಲ ಪದಗಳ ಭಾಷಾಂತರವಲ್ಲ. ಅದು ಒಂದು ದೇಶ ಅಥವಾ ಪ್ರಾಂತ್ಯದ ಸಂಸ್ಕೃತಿಯನ್ನು ವರ್ಗಾಯಿಸುವ ಸೂಕ್ಷ್ಮ ಪ್ರಕ್ರಿಯೆ. ಮೂಲ ಲೇಖಕರ ಆಶಯಕ್ಕೆ ಧಕ್ಕೆಯಾಗದಂತೆ ಮತ್ತೊಂದು ಭಾಷೆಗೆ ತರುವುದು ಸವಾಲಿನ ಕೆಲಸ. ಸಾಹಿತ್ಯ ಲೋಕದಲ್ಲಿ ಅನುವಾದವನ್ನು ಎರಡನೇ ದರ್ಜೆಯ ಕೆಲಸ ಎಂದು ಪರಿಗಣಿಸಬಾರದು; ಅದು ಮೂಲ ಕೃತಿ ರಚನೆಯಷ್ಟೇ ಶ್ರಮದಾಯಕ ಮತ್ತು ಕ್ರಿಯಾತ್ಮಕವಾದುದು’ ಎಂದರು.</p>.<p>ಬಿಡುಗಡೆಯಾದ ಕೃತಿಗಳು: ಆಲಕೆರೆ ಜೆ.ರಾಮಲಿಂಗೇಗೌಡರು ಅನುವಾದಿಸಿದ ‘ನಂಬಲಸಾಧ್ಯವಾದ ಸಾಯಿಬಾಬಾ’, ‘ಡೀಪ್ ವರ್ಕ್’, ‘ನೇತಾಜಿ’ ಹಾಗೂ ‘ಸಮುದ್ರದತ್ತ ಸವಾರರು’ ಕೃತಿಗಳನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು.</p>.<p>ಮಹಾರಾಣಿ ಮಹಿಳಾ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಸಹ ಪ್ರಾಧ್ಯಾಪಕಿ ಬಿ.ಎಸ್.ದಿವ್ಯಾ, ನಿವೃತ್ತ ಹಿಂದಿ ಪ್ರಾಧ್ಯಾಪಕ ಪ್ರೊ.ಜಿ.ಚಂದ್ರಶೇಖರ್, ಮಹಾರಾಣಿ ಕಲಾ ಕಾಲೇಜಿನ ಸಹ ಪ್ರಾಧ್ಯಾಪಕಿ ರೇಖಾ ಮ್ಯಾಥ್ಯೂ ಕೃತಿಗಳನ್ನು ಪರಿಚಯಿಸಿದರು.</p>.<p>ಪರಿಷತ್ ಕಾರ್ಯದರ್ಶಿ ಎನ್.ಸಿ.ತಮ್ಮಣ್ಣಗೌಡ, ಪ್ರಕಾಶಕ ಎಚ್.ಎಸ್.ಗೋವಿಂದಗೌಡ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260504-39-1204261686</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ‘ಸಂಸ್ಕೃತಿ ಮತ್ತು ಆಲೋಚನೆಗಳನ್ನು ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಯಥಾವತ್ತಾಗಿ ದಾಟಿಸುವ ಅನುವಾದ ಪ್ರಕ್ರಿಯೆಯು ಅತ್ಯಂತ ಸೃಜನಶೀಲ ಕೆಲಸ’ ಎಂದು ಲೇಖಕ ಪ್ರಸನ್ನಕುಮಾರ್ ಕೆರಗೋಡು ಅಭಿಪ್ರಾಯಪಟ್ಟರು.</p>.<p>ನಗರದ ಸರಸ್ವತಿಪುರಂನ ರೋಟರಿ ಕ್ಲಬ್ ಪಶ್ಚಿಮ ಶಾಲೆ ಸಭಾಂಗಣದಲ್ಲಿ ಪ್ರೊ.ಕೆ.ವೆಂಕಟಗಿರಿಗೌಡ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಪರಿಷತ್ ಹಾಗೂ ಹನ್ಯಾಳು ಪ್ರಕಾಶನದ ವತಿಯಿಂದ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ, ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಹೆಚ್ಚುವರಿ ಆಯುಕ್ತ ಆಲಕೆರೆ ಜೆ.ರಾಮಲಿಂಗೇಗೌಡ ಅವರು ಅನುವಾದಿಸಿದ 4 ಕೃತಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.</p>.<p>‘ಅನುವಾದ ಕೇವಲ ಪದಗಳ ಭಾಷಾಂತರವಲ್ಲ. ಅದು ಒಂದು ದೇಶ ಅಥವಾ ಪ್ರಾಂತ್ಯದ ಸಂಸ್ಕೃತಿಯನ್ನು ವರ್ಗಾಯಿಸುವ ಸೂಕ್ಷ್ಮ ಪ್ರಕ್ರಿಯೆ. ಮೂಲ ಲೇಖಕರ ಆಶಯಕ್ಕೆ ಧಕ್ಕೆಯಾಗದಂತೆ ಮತ್ತೊಂದು ಭಾಷೆಗೆ ತರುವುದು ಸವಾಲಿನ ಕೆಲಸ. ಸಾಹಿತ್ಯ ಲೋಕದಲ್ಲಿ ಅನುವಾದವನ್ನು ಎರಡನೇ ದರ್ಜೆಯ ಕೆಲಸ ಎಂದು ಪರಿಗಣಿಸಬಾರದು; ಅದು ಮೂಲ ಕೃತಿ ರಚನೆಯಷ್ಟೇ ಶ್ರಮದಾಯಕ ಮತ್ತು ಕ್ರಿಯಾತ್ಮಕವಾದುದು’ ಎಂದರು.</p>.<p>ಬಿಡುಗಡೆಯಾದ ಕೃತಿಗಳು: ಆಲಕೆರೆ ಜೆ.ರಾಮಲಿಂಗೇಗೌಡರು ಅನುವಾದಿಸಿದ ‘ನಂಬಲಸಾಧ್ಯವಾದ ಸಾಯಿಬಾಬಾ’, ‘ಡೀಪ್ ವರ್ಕ್’, ‘ನೇತಾಜಿ’ ಹಾಗೂ ‘ಸಮುದ್ರದತ್ತ ಸವಾರರು’ ಕೃತಿಗಳನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು.</p>.<p>ಮಹಾರಾಣಿ ಮಹಿಳಾ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಸಹ ಪ್ರಾಧ್ಯಾಪಕಿ ಬಿ.ಎಸ್.ದಿವ್ಯಾ, ನಿವೃತ್ತ ಹಿಂದಿ ಪ್ರಾಧ್ಯಾಪಕ ಪ್ರೊ.ಜಿ.ಚಂದ್ರಶೇಖರ್, ಮಹಾರಾಣಿ ಕಲಾ ಕಾಲೇಜಿನ ಸಹ ಪ್ರಾಧ್ಯಾಪಕಿ ರೇಖಾ ಮ್ಯಾಥ್ಯೂ ಕೃತಿಗಳನ್ನು ಪರಿಚಯಿಸಿದರು.</p>.<p>ಪರಿಷತ್ ಕಾರ್ಯದರ್ಶಿ ಎನ್.ಸಿ.ತಮ್ಮಣ್ಣಗೌಡ, ಪ್ರಕಾಶಕ ಎಚ್.ಎಸ್.ಗೋವಿಂದಗೌಡ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260504-39-1204261686</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>