<p>ಮೈಸೂರು: ‘ಯುವ ಪೀಳಿಗೆಯು ಹಿರಿಯ ಸಾಹಿತಿಗಳ ಜೀವನ ತಿಳಿಯಬೇಕು. ಅವರ ಬಗ್ಗೆ, ಕೃತಿಗಳನ್ನು ಓದುವ ಮೂಲಕ ಅರಿಯಬೇಕು’ ಎಂದು ವಿದ್ವಾಂಸ ಟಿ.ವಿ ವೆಂಕಟಾಚಲ ಶಾಸ್ತ್ರಿ ಹೇಳಿದರು.</p>.<p>ಇಲ್ಲಿನ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಿಂದ ಮುದ್ದುರಾಮ ಬಳಗದ ಸಹಯೋಗದಲ್ಲಿ ಬಿಎಂಶ್ರೀ ಸಭಾಂಣದಲ್ಲಿ ಬುಧವಾರ ನಡೆದ ‘ಕೆಸಿಎಸ್ ಕಾವ್ಯ ಕುತೂಹಲ’ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.</p>.<p>‘ಸಾಹಿತ್ಯ ಕ್ಷೇತ್ರದಲ್ಲಿ ಕೊಡುಗೆ ನೀಡಲು, ಸಾಹಿತ್ಯಾಸಕ್ತಿ ಹೊಂದಲು ಇದು ಅಗತ್ಯ. ಕವಿಗಳೂ ಅಷ್ಟೇ ಯುವ ಬರಹಗಾರರನ್ನು ಪ್ರೋತ್ಸಾಹಿಸಲು ಮುಂದಾಗಬೇಕು. ಅವರ ಪ್ರಾಥಮಿಕ ಬರಹಗಳನ್ನು ಹೀಗಳಿಯದೆ ಮತ್ತಷ್ಟು ಬರೆಯುವಂತೆ ಉತ್ತೇಜಿಸಬೇಕು’ ಎಂದರು.</p>.<p>‘ಕೆ.ಸಿ.ಶಿವಪ್ಪ(ಕೆಸಿಎಸ್) ಅವರು ವಿನಯ, ವಿಶ್ವಾಸ, ವಿವೇಕಗಳ ಸಾರ್ಥಕ ಸಂವಹನದಲ್ಲಿ ಜೀವನ ರೂಪಿಸಿಕೊಂಡಿದ್ದಾರೆ. ಡಿವಿಜಿ, ಮಾಸ್ತಿ, ವಿ.ಸೀತಾರಾಮಯ್ಯ ಅವರಂಥ ಅನೇಕರಿಂದ ಉಪನ್ಯಾಸಗಳನ್ನು ಆಯೋಜಿಸಿ ಸಾಹಿತ್ಯ ಕ್ಷೇತ್ರದ ಪ್ರಗತಿಗೆ ಕೊಡುಗೆ ನೀಡಿದ್ದಾರೆ’ ಎಂದರು.</p>.<p>‘ಸ್ವತಃ ಸಾಹಿತ್ಯದ ಸಂಬಂಧದಲ್ಲಿ ಕವಿತೆಗಳು, ವಿಚಾರ ವಿಮರ್ಶೆಗಳು, ಮುಕ್ತಕಗಳ ಮಂಜರಿಗಳನ್ನು ರಚಿಸಿ ಸಾಕಷ್ಟು ಸಮೃದ್ಧಿಗೊಳಿಸಿದ್ದಾರೆ. ತಮ್ಮ 30 ಸಾವಿರ ಮುದ್ದುರಾಮ ಚೌಪದಿಗಳಲ್ಲಿ ಡಿವಿಜಿ ಅವರ ಮಂಕುತಿಮ್ಮನ ಕಗ್ಗ ಕೃತಿಗೆ ಸ್ಪರ್ಧಿಸುವಂತ ಮೌಲ್ಯ, ವಿಷಯ ವಿಸ್ತಾರವನ್ನು ತಲುಪಿದ್ದಾರೆ’ ಎಂದು ಶ್ಲಾಘಿಸಿದರು.</p>.<p>ಕಾರ್ಯಕ್ರಮದಲ್ಲಿ ಎಚ್ಟಿಎಂ ನಿವೃತ್ತ ಅಧ್ಯಕ್ಷ ಎನ್.ರಾಮಾನುಜ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪ್ರೊ.ಎನ್.ಕೆ.ಲೋಲಾಕ್ಷಿ, ಮುದ್ದುರಾಮ ಪ್ರತಿಷ್ಠಾನ ಉಪಾಧ್ಯಕ್ಷ ನೀಲಗಿರಿ ತಳವಾರ ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260514-51-430443034</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ‘ಯುವ ಪೀಳಿಗೆಯು ಹಿರಿಯ ಸಾಹಿತಿಗಳ ಜೀವನ ತಿಳಿಯಬೇಕು. ಅವರ ಬಗ್ಗೆ, ಕೃತಿಗಳನ್ನು ಓದುವ ಮೂಲಕ ಅರಿಯಬೇಕು’ ಎಂದು ವಿದ್ವಾಂಸ ಟಿ.ವಿ ವೆಂಕಟಾಚಲ ಶಾಸ್ತ್ರಿ ಹೇಳಿದರು.</p>.<p>ಇಲ್ಲಿನ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಿಂದ ಮುದ್ದುರಾಮ ಬಳಗದ ಸಹಯೋಗದಲ್ಲಿ ಬಿಎಂಶ್ರೀ ಸಭಾಂಣದಲ್ಲಿ ಬುಧವಾರ ನಡೆದ ‘ಕೆಸಿಎಸ್ ಕಾವ್ಯ ಕುತೂಹಲ’ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.</p>.<p>‘ಸಾಹಿತ್ಯ ಕ್ಷೇತ್ರದಲ್ಲಿ ಕೊಡುಗೆ ನೀಡಲು, ಸಾಹಿತ್ಯಾಸಕ್ತಿ ಹೊಂದಲು ಇದು ಅಗತ್ಯ. ಕವಿಗಳೂ ಅಷ್ಟೇ ಯುವ ಬರಹಗಾರರನ್ನು ಪ್ರೋತ್ಸಾಹಿಸಲು ಮುಂದಾಗಬೇಕು. ಅವರ ಪ್ರಾಥಮಿಕ ಬರಹಗಳನ್ನು ಹೀಗಳಿಯದೆ ಮತ್ತಷ್ಟು ಬರೆಯುವಂತೆ ಉತ್ತೇಜಿಸಬೇಕು’ ಎಂದರು.</p>.<p>‘ಕೆ.ಸಿ.ಶಿವಪ್ಪ(ಕೆಸಿಎಸ್) ಅವರು ವಿನಯ, ವಿಶ್ವಾಸ, ವಿವೇಕಗಳ ಸಾರ್ಥಕ ಸಂವಹನದಲ್ಲಿ ಜೀವನ ರೂಪಿಸಿಕೊಂಡಿದ್ದಾರೆ. ಡಿವಿಜಿ, ಮಾಸ್ತಿ, ವಿ.ಸೀತಾರಾಮಯ್ಯ ಅವರಂಥ ಅನೇಕರಿಂದ ಉಪನ್ಯಾಸಗಳನ್ನು ಆಯೋಜಿಸಿ ಸಾಹಿತ್ಯ ಕ್ಷೇತ್ರದ ಪ್ರಗತಿಗೆ ಕೊಡುಗೆ ನೀಡಿದ್ದಾರೆ’ ಎಂದರು.</p>.<p>‘ಸ್ವತಃ ಸಾಹಿತ್ಯದ ಸಂಬಂಧದಲ್ಲಿ ಕವಿತೆಗಳು, ವಿಚಾರ ವಿಮರ್ಶೆಗಳು, ಮುಕ್ತಕಗಳ ಮಂಜರಿಗಳನ್ನು ರಚಿಸಿ ಸಾಕಷ್ಟು ಸಮೃದ್ಧಿಗೊಳಿಸಿದ್ದಾರೆ. ತಮ್ಮ 30 ಸಾವಿರ ಮುದ್ದುರಾಮ ಚೌಪದಿಗಳಲ್ಲಿ ಡಿವಿಜಿ ಅವರ ಮಂಕುತಿಮ್ಮನ ಕಗ್ಗ ಕೃತಿಗೆ ಸ್ಪರ್ಧಿಸುವಂತ ಮೌಲ್ಯ, ವಿಷಯ ವಿಸ್ತಾರವನ್ನು ತಲುಪಿದ್ದಾರೆ’ ಎಂದು ಶ್ಲಾಘಿಸಿದರು.</p>.<p>ಕಾರ್ಯಕ್ರಮದಲ್ಲಿ ಎಚ್ಟಿಎಂ ನಿವೃತ್ತ ಅಧ್ಯಕ್ಷ ಎನ್.ರಾಮಾನುಜ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪ್ರೊ.ಎನ್.ಕೆ.ಲೋಲಾಕ್ಷಿ, ಮುದ್ದುರಾಮ ಪ್ರತಿಷ್ಠಾನ ಉಪಾಧ್ಯಕ್ಷ ನೀಲಗಿರಿ ತಳವಾರ ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260514-51-430443034</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>