<p>ನಂಜನಗೂಡು: ‘ಮಾನವೀಯತೆ ಮತ್ತು ಮೌಲ್ಯಗಳು ಜೀವನದ ಭಾಗವಾಗಬೇಕು. ಸಮಯದ ಸದ್ಬಳಕೆಯಿಂದ ಯಶಸ್ಸನ್ನು ಪಡೆಯಬಹುದು’ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೆ.ಎಸ್.ರಾಘವೇಂದ್ರ ಹೇಳಿದರು.</p>.<p>ಸುತ್ತೂರು ಕ್ಷೇತ್ರದಲ್ಲಿ ವೀರಸಿಂಹಾಸನ ಮಹಾಸಂಸ್ಥಾನ ಮಠ, ಶಿವರಾತ್ರೀಶ್ವರ ಧಾರ್ಮಿಕ ದತ್ತಿ ಹಾಗೂ ಜೆಎಸ್ಎಸ್ ಮಹಾವಿದ್ಯಾಪೀಠದಿಂದ ನಡೆದ ಆಯುರ್ವೇದ, ವಾಕ್–ಶ್ರವಣ, ನರ್ಸಿಂಗ್ ವಿದ್ಯಾರ್ಥಿಗಳ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.</p>.<p>‘ಜೀವನದ ಪ್ರತಿಯೊಂದು ಕ್ಷಣವೂ ಅಮೂಲ್ಯ. ಅರ್ಥಪೂರ್ಣವಾಗಿ ಬದುಕಬೇಕು’ ಎಂದರು.</p>.<p>ಜೆಎಸ್ಎಸ್ ಆಯುರ್ವೇದ ವೈದ್ಯಕೀಯ ವಿದ್ಯಾಲಯದ ಪಂಚಕರ್ಮ ವಿಭಾಗದ ಮುಖ್ಯಸ್ಥೆ ಡಾ.ವೀಣಾ ಜಿ.ರಾವ್ ಮಾತನಾಡಿ, ‘ವಿದ್ಯಾರ್ಥಿಗಳು ಸರಳ ಜೀವನ, ಮಿತ ಆಹಾರ ಮತ್ತು ಸಮಯಪ್ರಜ್ಞೆಗಳನ್ನು ಮೈಗೂಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.</p>.<p>‘ವೈದ್ಯರು ನಿರ್ವಹಿಸುವ ಅನೇಕ ಕಾರ್ಯಗಳನ್ನು ಕೃತಕ ಬುದ್ಧಿಮತ್ತೆಯು ನಿರ್ವಹಿಸುತ್ತದೆ. ಆದರೆ, ಪ್ರೀತಿ, ದಯೆ ಕರುಣೆ ಮತ್ತು ಭಾವನೆಗಳನ್ನು ಅದು ನೀಡಲು ಸಾಧ್ಯವಿಲ್ಲ’ ಎಂದು ಹೇಳಿದರು.</p>.<p>ದಿಶಾಭಾರತಿ ಸಂಸ್ಥೆಯ ನಿರ್ದೇಶಕಿ ಲಾವಣ್ಯ ರಾಧಾಕೃಷ್ಣ, ‘ಪ್ರತಿಯೊಬ್ಬರಲ್ಲಿಯೂ ಭಿನ್ನ ಭಿನ್ನ ಪ್ರತಿಭೆಗಳಿರುತ್ತವೆ. ಕ್ರೀಡೆ, ಕಲೆ, ವಿಜ್ಞಾನ ಮೊದಲಾದ ಕ್ಷೇತ್ರಗಳಲ್ಲಿ ಇವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು’ ಎಂದರು.</p>.<p>ಯೋಗ ಮತ್ತು ಧ್ಯಾನ ತರಬೇತುದಾರರಾದ ರಾಧಿಕ ಪಾರ್ಥಸಾರಥಿ ಮಾತನಾಡಿದರು.</p>.<p>ಪವಿತ್ರ ಬಸವರಾಜ್ ತೋಟದ್, ವಿಘ್ನೇಶ್ವರ್ ಜಿ. ಹೆಗ್ಗಡೆ, ಬಿ.ಎಸ್.ಸಾನಿಕ, ಆರ್.ಕೆ.ಸೋಮನಾಥ್, ಎನ್.ಎಲ್.ಕುಸುಮಶ್ರೀ, ಎಂ.ಪ್ರಿಶಾ ತಿಮ್ಮಯ್ಯ ಮತ್ತು ಆರ್.ರೋಷಿಣಿ ಸಂತೋಷ್ ಬಾಬು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.</p>.<p>ಎಂ.ಎಲ್.ರಾಜೇಂದ್ರ ಪ್ರಸಾದ್ ಶಿಬಿರದ ವರದಿ ಮಂಡಿಸಿದರು. ಬಿ.ಕೆ.ವಿನಯ್ ಕುಮಾರ್, ಆರ್. ಕಾವ್ಯಶ್ರೀ, ಎಸ್.ಅನುಷಾ, ಎಂ.ಎನ್. ರಾಜೇಶ್ವರಿ ಹಾಜರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260412-38-183979936</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಂಜನಗೂಡು: ‘ಮಾನವೀಯತೆ ಮತ್ತು ಮೌಲ್ಯಗಳು ಜೀವನದ ಭಾಗವಾಗಬೇಕು. ಸಮಯದ ಸದ್ಬಳಕೆಯಿಂದ ಯಶಸ್ಸನ್ನು ಪಡೆಯಬಹುದು’ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೆ.ಎಸ್.ರಾಘವೇಂದ್ರ ಹೇಳಿದರು.</p>.<p>ಸುತ್ತೂರು ಕ್ಷೇತ್ರದಲ್ಲಿ ವೀರಸಿಂಹಾಸನ ಮಹಾಸಂಸ್ಥಾನ ಮಠ, ಶಿವರಾತ್ರೀಶ್ವರ ಧಾರ್ಮಿಕ ದತ್ತಿ ಹಾಗೂ ಜೆಎಸ್ಎಸ್ ಮಹಾವಿದ್ಯಾಪೀಠದಿಂದ ನಡೆದ ಆಯುರ್ವೇದ, ವಾಕ್–ಶ್ರವಣ, ನರ್ಸಿಂಗ್ ವಿದ್ಯಾರ್ಥಿಗಳ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.</p>.<p>‘ಜೀವನದ ಪ್ರತಿಯೊಂದು ಕ್ಷಣವೂ ಅಮೂಲ್ಯ. ಅರ್ಥಪೂರ್ಣವಾಗಿ ಬದುಕಬೇಕು’ ಎಂದರು.</p>.<p>ಜೆಎಸ್ಎಸ್ ಆಯುರ್ವೇದ ವೈದ್ಯಕೀಯ ವಿದ್ಯಾಲಯದ ಪಂಚಕರ್ಮ ವಿಭಾಗದ ಮುಖ್ಯಸ್ಥೆ ಡಾ.ವೀಣಾ ಜಿ.ರಾವ್ ಮಾತನಾಡಿ, ‘ವಿದ್ಯಾರ್ಥಿಗಳು ಸರಳ ಜೀವನ, ಮಿತ ಆಹಾರ ಮತ್ತು ಸಮಯಪ್ರಜ್ಞೆಗಳನ್ನು ಮೈಗೂಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.</p>.<p>‘ವೈದ್ಯರು ನಿರ್ವಹಿಸುವ ಅನೇಕ ಕಾರ್ಯಗಳನ್ನು ಕೃತಕ ಬುದ್ಧಿಮತ್ತೆಯು ನಿರ್ವಹಿಸುತ್ತದೆ. ಆದರೆ, ಪ್ರೀತಿ, ದಯೆ ಕರುಣೆ ಮತ್ತು ಭಾವನೆಗಳನ್ನು ಅದು ನೀಡಲು ಸಾಧ್ಯವಿಲ್ಲ’ ಎಂದು ಹೇಳಿದರು.</p>.<p>ದಿಶಾಭಾರತಿ ಸಂಸ್ಥೆಯ ನಿರ್ದೇಶಕಿ ಲಾವಣ್ಯ ರಾಧಾಕೃಷ್ಣ, ‘ಪ್ರತಿಯೊಬ್ಬರಲ್ಲಿಯೂ ಭಿನ್ನ ಭಿನ್ನ ಪ್ರತಿಭೆಗಳಿರುತ್ತವೆ. ಕ್ರೀಡೆ, ಕಲೆ, ವಿಜ್ಞಾನ ಮೊದಲಾದ ಕ್ಷೇತ್ರಗಳಲ್ಲಿ ಇವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು’ ಎಂದರು.</p>.<p>ಯೋಗ ಮತ್ತು ಧ್ಯಾನ ತರಬೇತುದಾರರಾದ ರಾಧಿಕ ಪಾರ್ಥಸಾರಥಿ ಮಾತನಾಡಿದರು.</p>.<p>ಪವಿತ್ರ ಬಸವರಾಜ್ ತೋಟದ್, ವಿಘ್ನೇಶ್ವರ್ ಜಿ. ಹೆಗ್ಗಡೆ, ಬಿ.ಎಸ್.ಸಾನಿಕ, ಆರ್.ಕೆ.ಸೋಮನಾಥ್, ಎನ್.ಎಲ್.ಕುಸುಮಶ್ರೀ, ಎಂ.ಪ್ರಿಶಾ ತಿಮ್ಮಯ್ಯ ಮತ್ತು ಆರ್.ರೋಷಿಣಿ ಸಂತೋಷ್ ಬಾಬು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.</p>.<p>ಎಂ.ಎಲ್.ರಾಜೇಂದ್ರ ಪ್ರಸಾದ್ ಶಿಬಿರದ ವರದಿ ಮಂಡಿಸಿದರು. ಬಿ.ಕೆ.ವಿನಯ್ ಕುಮಾರ್, ಆರ್. ಕಾವ್ಯಶ್ರೀ, ಎಸ್.ಅನುಷಾ, ಎಂ.ಎನ್. ರಾಜೇಶ್ವರಿ ಹಾಜರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260412-38-183979936</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>