<p>ನವಲಗುಂದ: ‘ಜನಗಣತಿ ಕಾರ್ಯದಿಂದ ದೇಶದ ಅಭಿವೃದ್ಧಿಗೆ ಯೋಜನೆ ರೂಪಿಸಲು ಸಹಕಾರಿಯಾಗುತ್ತದೆ. ಈ ಬಾರಿಯ ಜನಗಣತಿ ಸುಲಭ ಹಾಗೂ ಸರಳವಾಗಿದ್ದು, ಡಿಜಿಟಲ್ ಮೊಬೈಲ್ ಆಧಾರಿತವಾಗಿದೆ ’ಎಂದು ಜನಗಣತಿ ನೋಡಲ್ ಅಧಿಕಾರಿ ಆರ್.ದೇವರಾಜ ಹೇಳಿದರು.</p>.<p>ಸ್ಥಳೀಯ ಶಂಕರ ಮಹಾವಿದ್ಯಾಲಯದಲ್ಲಿ ಮಂಗಳವಾರ ಭಾರತ ಜನಗಣತಿ 2027ರ ಅಂಗವಾಗಿ ಮೇಲ್ವಿಚಾರಕರು ಹಾಗೂ ಗಣತಿದಾರರಿಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.</p>.<p>ಏ.1 ರಿಂದ 15ರವರೆಗೆ ಸ್ವಯಂ ಗಣತಿಗೆ ಅವಕಾಶ ನೀಡಿದ್ದು, ಏ.16ರಿಂದ ಗಣತಿದಾರರು ಮನೆಬಾಗಿಲಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ಗಣತಿದಾರರು ಗೊಂದಲ ಮಾಡಿಕೊಳ್ಳದೇ ತರಬೇತಿದಾರರ ಮಾರ್ಗದರ್ಶನದ ಮೇರೆಗೆ ಮಾಹಿತಿ ಸಂಗ್ರಹಿಸಿ ಎಂದರು.</p>.<p>ಡಿಜಿಟಲ್ ಜನಗಣತಿ ಕಾರ್ಯಕ್ರಮಕ್ಕೆ ತಾಲ್ಲೂಕು ಆಡಳಿತದಿಂದ ಗ್ರಾಮೀಣ ಭಾಗದಲ್ಲಿ 157 ಗಣತಿದಾರರು, 26 ಮೇಲ್ವಿಚಾರಕರು, 9 ತರಬೇತಿದಾರರು ಹಾಗೂ ಕಾಯ್ದಿದಿರಿಸಿದ 16 ಗಣತಿದಾರರು ಹಾಗೂ ಮೂವರು ಮೇಲ್ವಿಚಾರಕರು ಸೇರಿ ನೇಮಿಸಲಾಗಿದೆ ತಹಶೀಲ್ದಾರ್ ಸುಧೀರ್ ಸಾಹುಕಾರ್ ತಿಳಿಸಿದರು.</p>.<p>ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿ.ಡಿ.ರಂಗಣ್ಣವರ, ಎನ್.ವಿ. ಕುರವತ್ತಿಮಠ, ಜಿ.ಎಂ.ಮಾಕಣ್ಣವರ, ಉಪ ತಹಶೀಲ್ದಾರ್ ಗಣೇಶ ಚಳ್ಳಕೆರೆ, ಹನುಮರಡ್ಡಿ ದೇವರಡ್ಡಿ ಸೇರಿ ತರಬೇತಿದಾರರು, ಮೇಲ್ವಿಚಾರಕರು, ಗಣತಿದಾರರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260408-24-297812421</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವಲಗುಂದ: ‘ಜನಗಣತಿ ಕಾರ್ಯದಿಂದ ದೇಶದ ಅಭಿವೃದ್ಧಿಗೆ ಯೋಜನೆ ರೂಪಿಸಲು ಸಹಕಾರಿಯಾಗುತ್ತದೆ. ಈ ಬಾರಿಯ ಜನಗಣತಿ ಸುಲಭ ಹಾಗೂ ಸರಳವಾಗಿದ್ದು, ಡಿಜಿಟಲ್ ಮೊಬೈಲ್ ಆಧಾರಿತವಾಗಿದೆ ’ಎಂದು ಜನಗಣತಿ ನೋಡಲ್ ಅಧಿಕಾರಿ ಆರ್.ದೇವರಾಜ ಹೇಳಿದರು.</p>.<p>ಸ್ಥಳೀಯ ಶಂಕರ ಮಹಾವಿದ್ಯಾಲಯದಲ್ಲಿ ಮಂಗಳವಾರ ಭಾರತ ಜನಗಣತಿ 2027ರ ಅಂಗವಾಗಿ ಮೇಲ್ವಿಚಾರಕರು ಹಾಗೂ ಗಣತಿದಾರರಿಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.</p>.<p>ಏ.1 ರಿಂದ 15ರವರೆಗೆ ಸ್ವಯಂ ಗಣತಿಗೆ ಅವಕಾಶ ನೀಡಿದ್ದು, ಏ.16ರಿಂದ ಗಣತಿದಾರರು ಮನೆಬಾಗಿಲಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ಗಣತಿದಾರರು ಗೊಂದಲ ಮಾಡಿಕೊಳ್ಳದೇ ತರಬೇತಿದಾರರ ಮಾರ್ಗದರ್ಶನದ ಮೇರೆಗೆ ಮಾಹಿತಿ ಸಂಗ್ರಹಿಸಿ ಎಂದರು.</p>.<p>ಡಿಜಿಟಲ್ ಜನಗಣತಿ ಕಾರ್ಯಕ್ರಮಕ್ಕೆ ತಾಲ್ಲೂಕು ಆಡಳಿತದಿಂದ ಗ್ರಾಮೀಣ ಭಾಗದಲ್ಲಿ 157 ಗಣತಿದಾರರು, 26 ಮೇಲ್ವಿಚಾರಕರು, 9 ತರಬೇತಿದಾರರು ಹಾಗೂ ಕಾಯ್ದಿದಿರಿಸಿದ 16 ಗಣತಿದಾರರು ಹಾಗೂ ಮೂವರು ಮೇಲ್ವಿಚಾರಕರು ಸೇರಿ ನೇಮಿಸಲಾಗಿದೆ ತಹಶೀಲ್ದಾರ್ ಸುಧೀರ್ ಸಾಹುಕಾರ್ ತಿಳಿಸಿದರು.</p>.<p>ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿ.ಡಿ.ರಂಗಣ್ಣವರ, ಎನ್.ವಿ. ಕುರವತ್ತಿಮಠ, ಜಿ.ಎಂ.ಮಾಕಣ್ಣವರ, ಉಪ ತಹಶೀಲ್ದಾರ್ ಗಣೇಶ ಚಳ್ಳಕೆರೆ, ಹನುಮರಡ್ಡಿ ದೇವರಡ್ಡಿ ಸೇರಿ ತರಬೇತಿದಾರರು, ಮೇಲ್ವಿಚಾರಕರು, ಗಣತಿದಾರರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260408-24-297812421</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>