<p>ಪೆರೇಸಂದ್ರ: ಬಿ.ಆರ್ ಅಂಬೇಡ್ಕರ್ ಕಾಲಗರ್ಭದಲ್ಲಿ ಸೇರಿ ಕಣ್ಮರೆ ಆಗುವ ವ್ಯಕ್ತಿತ್ವವಲ್ಲ. ವರ್ತಮಾನ ಹಾಗೂ ಭವಿಷ್ಯದ ಸುಭದ್ರ, ಸ್ವಾವಲಂಬಿ ಸಮಾಜ ನಿರ್ಮಾಣದ ಯುಗಪುರುಷರಾಗಿದ್ದಾರೆ ಎಂದು ಶಾಂತ ಸಮೂಹ ಸಂಸ್ಥೆಯ ನಿರ್ದೇಶಕ ಪ್ರೊ. ಕೋಡಿರಂಗಪ್ಪ ತಿಳಿಸಿದರು.</p>.<p>ಚಿಕ್ಕಬಳ್ಳಾಪುರ ತಾಲ್ಲೂಕಿನ ಪೆರೇಸಂದ್ರದ ಶಾಂತ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಅಂಬೇಡ್ಕರ್ ಜಯಂತಿ ಉದ್ಘಾಟಿಸಿ ಮಾತನಾಡಿದರು.</p>.<p>ಭಾರತೀಯ ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಜಾತಿ, ಧರ್ಮ ಮತ್ತು ಲಿಂಗ ಆಧಾರಿತ ತಾರತಮ್ಯಗಳು, ಅಸಮಾನತೆ ,ಅಸ್ಪೃಶ್ಯತೆ ಶೋಷಣೆಗಳನ್ನು ಸ್ವತಃ ಅನುಭವಿಸಿದರು. ಇದರಿಂದ ವಿಚಲಿತರಾಗದೆ ಆಳವಾದ ಅಧ್ಯಯನ ಹಾಗೂ ಹೋರಾಟಗಳಿಂದ ಸಮಾಜ ಜಾಗೃತಗೊಳಿಸಿದರು ಎಂದು ಹೇಳಿದರು.</p>.<p>ಅಂಬೇಡ್ಕರ್ ಭಾರತದಲ್ಲಿನ ಅಸಮಾನತೆ, ಜಾತೀಯತೆ ಮತ್ತು ಶೋಷಣೆಯ ಇತಿಹಾಸ ಬದಲಾಯಿಸಿ ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವದ ಮೇಲೆ ದೇಶ ಮರುರೂಪಿಸುವ ಚಿಂತನೆಗಳನ್ನು ನೀಡಿದರು. ಸಂವಿಧಾನದ ಮೂಲಕ ಸಮಾನತೆ, ಸ್ವಾವಲಂಬನೆ, ಸ್ವಾಭಿಮಾನ ಮತ್ತು ಸಾಮಾಜಿಕ ನ್ಯಾಯ ಎತ್ತಿ ಹಿಡಿದರು ಎಂದು ಹೇಳಿದರು.</p>.<p>ಸೈಮನ್, ಶಾಂತ ಫಾರ್ಮಸಿ ಕಾಲೇಜಿನ ಪ್ರಾಧ್ಯಾಪಕ ಸುರೇಂದ್ರ ಮಾತನಾಡಿದರು. ಅಧ್ಯಾಪಕಿ ರಾಧಾ, ಸಂವಿಧಾನದ ಪ್ರಸ್ತಾವ ಹಾಗೂ ಮುಖ್ಯ ವಿಧಿಗಳ ಬಗ್ಗೆ ಮಾಹಿತಿ ನೀಡಿದರು.</p>.<p>ಶಾಂತ ವಿದ್ಯಾನಿಕೇತನದ ಪ್ರಾಂಶುಪಾಲ ಪ್ರಸಾದ್ ಅಪ್ಪಲ್ಲ, ಪ್ರೊ. ಡಯಾನ, ಆಯಿಷಾ, ಪ್ರೊ. ನರೇಶ್, ಪ್ರೊ. ವಿಜಯಲಕ್ಷ್ಮಿ, ರಾಜೇಶ್, ಸಂದೇಶ್, ರಂಗರಾಜನ್, ಅಂಬಿಕಾ ವೆಂಕಟೇಶ್ ಮತ್ತಿತರರು ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260416-16-398683722</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪೆರೇಸಂದ್ರ: ಬಿ.ಆರ್ ಅಂಬೇಡ್ಕರ್ ಕಾಲಗರ್ಭದಲ್ಲಿ ಸೇರಿ ಕಣ್ಮರೆ ಆಗುವ ವ್ಯಕ್ತಿತ್ವವಲ್ಲ. ವರ್ತಮಾನ ಹಾಗೂ ಭವಿಷ್ಯದ ಸುಭದ್ರ, ಸ್ವಾವಲಂಬಿ ಸಮಾಜ ನಿರ್ಮಾಣದ ಯುಗಪುರುಷರಾಗಿದ್ದಾರೆ ಎಂದು ಶಾಂತ ಸಮೂಹ ಸಂಸ್ಥೆಯ ನಿರ್ದೇಶಕ ಪ್ರೊ. ಕೋಡಿರಂಗಪ್ಪ ತಿಳಿಸಿದರು.</p>.<p>ಚಿಕ್ಕಬಳ್ಳಾಪುರ ತಾಲ್ಲೂಕಿನ ಪೆರೇಸಂದ್ರದ ಶಾಂತ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಅಂಬೇಡ್ಕರ್ ಜಯಂತಿ ಉದ್ಘಾಟಿಸಿ ಮಾತನಾಡಿದರು.</p>.<p>ಭಾರತೀಯ ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಜಾತಿ, ಧರ್ಮ ಮತ್ತು ಲಿಂಗ ಆಧಾರಿತ ತಾರತಮ್ಯಗಳು, ಅಸಮಾನತೆ ,ಅಸ್ಪೃಶ್ಯತೆ ಶೋಷಣೆಗಳನ್ನು ಸ್ವತಃ ಅನುಭವಿಸಿದರು. ಇದರಿಂದ ವಿಚಲಿತರಾಗದೆ ಆಳವಾದ ಅಧ್ಯಯನ ಹಾಗೂ ಹೋರಾಟಗಳಿಂದ ಸಮಾಜ ಜಾಗೃತಗೊಳಿಸಿದರು ಎಂದು ಹೇಳಿದರು.</p>.<p>ಅಂಬೇಡ್ಕರ್ ಭಾರತದಲ್ಲಿನ ಅಸಮಾನತೆ, ಜಾತೀಯತೆ ಮತ್ತು ಶೋಷಣೆಯ ಇತಿಹಾಸ ಬದಲಾಯಿಸಿ ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವದ ಮೇಲೆ ದೇಶ ಮರುರೂಪಿಸುವ ಚಿಂತನೆಗಳನ್ನು ನೀಡಿದರು. ಸಂವಿಧಾನದ ಮೂಲಕ ಸಮಾನತೆ, ಸ್ವಾವಲಂಬನೆ, ಸ್ವಾಭಿಮಾನ ಮತ್ತು ಸಾಮಾಜಿಕ ನ್ಯಾಯ ಎತ್ತಿ ಹಿಡಿದರು ಎಂದು ಹೇಳಿದರು.</p>.<p>ಸೈಮನ್, ಶಾಂತ ಫಾರ್ಮಸಿ ಕಾಲೇಜಿನ ಪ್ರಾಧ್ಯಾಪಕ ಸುರೇಂದ್ರ ಮಾತನಾಡಿದರು. ಅಧ್ಯಾಪಕಿ ರಾಧಾ, ಸಂವಿಧಾನದ ಪ್ರಸ್ತಾವ ಹಾಗೂ ಮುಖ್ಯ ವಿಧಿಗಳ ಬಗ್ಗೆ ಮಾಹಿತಿ ನೀಡಿದರು.</p>.<p>ಶಾಂತ ವಿದ್ಯಾನಿಕೇತನದ ಪ್ರಾಂಶುಪಾಲ ಪ್ರಸಾದ್ ಅಪ್ಪಲ್ಲ, ಪ್ರೊ. ಡಯಾನ, ಆಯಿಷಾ, ಪ್ರೊ. ನರೇಶ್, ಪ್ರೊ. ವಿಜಯಲಕ್ಷ್ಮಿ, ರಾಜೇಶ್, ಸಂದೇಶ್, ರಂಗರಾಜನ್, ಅಂಬಿಕಾ ವೆಂಕಟೇಶ್ ಮತ್ತಿತರರು ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260416-16-398683722</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>