<p>ರಾಯಚೂರು: ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಸರ್ಕಾರಿ ವಸ್ತು ಸಂಗ್ರಹಾಲಯ ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹಯೋಗದಲ್ಲಿ ನಗರದ ನವರಂಗ ದರ್ವಾಜಾ ಬಳಿಯ ಸರ್ಕಾರಿ ವಸ್ತು ಸಂಗ್ರಹಾಲಯದ ಆವರಣದಲ್ಲಿ ಸೋಮವಾರ ಅಂತರರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನ ಆಚರಿಸಲಾಯಿತು.</p>.<p>ಸರ್ಕಾರಿ ಮಹಿಳಾ ಕಾಲೇಜಿನ ಇತಿಹಾಸ ಉಪನ್ಯಾಸಕಿ ರೇಖಾ ಪಾಟೀಲ ಮಾತನಾಡಿ, ‘ವಸ್ತು ಸಂಗ್ರಹಾಲಯ ದಿನಾಚರಣೆ ಬಹುಮುಖ್ಯ. ಇದರಿಂದ ನಮ್ಮ ಪೂರ್ವದ ಇತಿಹಾಸವನ್ನು ಅವಲೋಕಿಸಿದಂತಾಗುತ್ತದೆ. ಇತಿಹಾಸವು ಎಲ್ಲ ಸಮಾಜ ವಿಜ್ಞಾನಗಳ ಮಾತೃ ವಿಷಯ. ಇತಿಹಾಸದ ಅರಿವು ಎಲ್ಲರಿಗೂ ಅತ್ಯವಶ್ಯಕವಾಗಿದೆ’ ಎಂದು ಅವರು ಹೇಳಿದರು.</p>.<p>ಸೇಂಟ್ ಮೇರಿ ಮಹಿಳಾ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಲಕ್ಷ್ಮಣ ಜಾಲಿಬೆಂಚಿ ಮಾತನಾಡಿ,‘ಪುರಾತತ್ವ ಇಲಾಖೆ ಬೆಳೆದು ಬಂದ ದಾರಿ, ಹರಪ್ಪ-ಮೊಹೆಂಜೋದಾರೋ ಉತ್ಖನನ, ವಸ್ತು ಸಂಗ್ರಹಾಲಯಗಳ ಮಹತ್ವ ಹಾಗೂ ಜಿಲ್ಲೆಯ ಪ್ರಮುಖ ಸ್ಮಾರಕಗಳ ಕುರಿತು ವಿವರಿಸಿದರು. ಜೊತೆಗೆ ಬೇಲೂರು, ಹಳೆಬೀಡು, ಹಂಪಿ, ತಂಜಾವೂರು, ಮಹಾರಾಷ್ಟ್ರದ ಸ್ಮಾರಕಗಳ ಬಗ್ಗೆಯೂ ಮಾಹಿತಿ ನೀಡಿದರು.</p>.<p>ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಸಂತೋಷ ಕುಮಾರ ಮಾತನಾಡಿ ಮಲಿಯಾಬಾದ ಕೋಟೆ, ಅಲ್ಲಿನ ಕಲ್ಲಿನ ಆನೆಗಳು ಹಾಗೂ ರಾಯಚೂರು ಕೋಟೆ ನಿರ್ಮಾಣ, ಕಾಕತೀಯರ ಸ್ಮಾರಕಗಳ ಕುರಿತು ಮಾಹಿತಿ ನೀಡಿದರು.</p>.<p>ಸರ್ಕಾರಿ ವಸ್ತು ಸಂಗ್ರಹಾಲಯದ ಪ್ರಭಾರ ಕ್ಯುರೇಟರ್ ಶಿವಪ್ರಕಾಶ ಮಾತನಾಡಿ, ‘ವಸ್ತು ಸಂಗ್ರಹಾಲಯಗಳು ಸಾಂಸ್ಕೃತಿಕ ವಿದ್ಯಾ ಕೇಂದ್ರಗಳು. ಇವುಗಳ ಸದುಪಯೋಗ ಪಡೆಯಬೇಕು. ವಿಭಜಿತ ಜಗತ್ತನ್ನು ಒಂದುಗೂಡಿಸುವ ವಸ್ತು ಸಂಗ್ರಹಾಲಯಗಳು ಈ ವರ್ಷದ ಘೋಷ ವಾಕ್ಯವಾಗಿದೆ’ ಎಂದು ಅವರು ಹೇಳಿದರು.</p>.<p>ಬಜರಂಗ ಬಲಿ ಹನುಮಾನ ದೇವಸ್ಥಾನದ ಪುರೋಹಿತ ಸಂದೀಪ ಕುಮಾರ ಕಾರ್ಯಕ್ರಮ ಉದ್ಘಾಟಿಸಿದರು.</p>.<p>ವಿದ್ಯಾರ್ಥಿನಿಯರಾದ ಜಮುನಾ ಹಾಗೂ ಸಾದಿಯಾ ಪ್ರಾರ್ಥನಾ ಗೀತೆ ಹಾಡಿದರು.</p>.<p>ಆಯುರ್ವೇದ ತಜ್ಞ ವೈದ್ಯ ಪ್ರಮೋದ ನಿಜಾಂಕಾರಿ, ಹರೀಶ ನಿಜಾಂಕಾರಿ, ಸೈಯದ್ ಅಬ್ದುಲ್ ರಹೀಂ, ಕಿರಣ ಕುಮಾರ, ಅಬ್ದುಲ್ ಖದೀರ್, ಪ್ರವಾಸಿ ಮಿತ್ರರಾದ ತಿಮ್ಮಪ್ಪ, ರಾಧಾ ಸೇರಿದಂತೆ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260520-32-426836448</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಯಚೂರು: ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಸರ್ಕಾರಿ ವಸ್ತು ಸಂಗ್ರಹಾಲಯ ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹಯೋಗದಲ್ಲಿ ನಗರದ ನವರಂಗ ದರ್ವಾಜಾ ಬಳಿಯ ಸರ್ಕಾರಿ ವಸ್ತು ಸಂಗ್ರಹಾಲಯದ ಆವರಣದಲ್ಲಿ ಸೋಮವಾರ ಅಂತರರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನ ಆಚರಿಸಲಾಯಿತು.</p>.<p>ಸರ್ಕಾರಿ ಮಹಿಳಾ ಕಾಲೇಜಿನ ಇತಿಹಾಸ ಉಪನ್ಯಾಸಕಿ ರೇಖಾ ಪಾಟೀಲ ಮಾತನಾಡಿ, ‘ವಸ್ತು ಸಂಗ್ರಹಾಲಯ ದಿನಾಚರಣೆ ಬಹುಮುಖ್ಯ. ಇದರಿಂದ ನಮ್ಮ ಪೂರ್ವದ ಇತಿಹಾಸವನ್ನು ಅವಲೋಕಿಸಿದಂತಾಗುತ್ತದೆ. ಇತಿಹಾಸವು ಎಲ್ಲ ಸಮಾಜ ವಿಜ್ಞಾನಗಳ ಮಾತೃ ವಿಷಯ. ಇತಿಹಾಸದ ಅರಿವು ಎಲ್ಲರಿಗೂ ಅತ್ಯವಶ್ಯಕವಾಗಿದೆ’ ಎಂದು ಅವರು ಹೇಳಿದರು.</p>.<p>ಸೇಂಟ್ ಮೇರಿ ಮಹಿಳಾ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಲಕ್ಷ್ಮಣ ಜಾಲಿಬೆಂಚಿ ಮಾತನಾಡಿ,‘ಪುರಾತತ್ವ ಇಲಾಖೆ ಬೆಳೆದು ಬಂದ ದಾರಿ, ಹರಪ್ಪ-ಮೊಹೆಂಜೋದಾರೋ ಉತ್ಖನನ, ವಸ್ತು ಸಂಗ್ರಹಾಲಯಗಳ ಮಹತ್ವ ಹಾಗೂ ಜಿಲ್ಲೆಯ ಪ್ರಮುಖ ಸ್ಮಾರಕಗಳ ಕುರಿತು ವಿವರಿಸಿದರು. ಜೊತೆಗೆ ಬೇಲೂರು, ಹಳೆಬೀಡು, ಹಂಪಿ, ತಂಜಾವೂರು, ಮಹಾರಾಷ್ಟ್ರದ ಸ್ಮಾರಕಗಳ ಬಗ್ಗೆಯೂ ಮಾಹಿತಿ ನೀಡಿದರು.</p>.<p>ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಸಂತೋಷ ಕುಮಾರ ಮಾತನಾಡಿ ಮಲಿಯಾಬಾದ ಕೋಟೆ, ಅಲ್ಲಿನ ಕಲ್ಲಿನ ಆನೆಗಳು ಹಾಗೂ ರಾಯಚೂರು ಕೋಟೆ ನಿರ್ಮಾಣ, ಕಾಕತೀಯರ ಸ್ಮಾರಕಗಳ ಕುರಿತು ಮಾಹಿತಿ ನೀಡಿದರು.</p>.<p>ಸರ್ಕಾರಿ ವಸ್ತು ಸಂಗ್ರಹಾಲಯದ ಪ್ರಭಾರ ಕ್ಯುರೇಟರ್ ಶಿವಪ್ರಕಾಶ ಮಾತನಾಡಿ, ‘ವಸ್ತು ಸಂಗ್ರಹಾಲಯಗಳು ಸಾಂಸ್ಕೃತಿಕ ವಿದ್ಯಾ ಕೇಂದ್ರಗಳು. ಇವುಗಳ ಸದುಪಯೋಗ ಪಡೆಯಬೇಕು. ವಿಭಜಿತ ಜಗತ್ತನ್ನು ಒಂದುಗೂಡಿಸುವ ವಸ್ತು ಸಂಗ್ರಹಾಲಯಗಳು ಈ ವರ್ಷದ ಘೋಷ ವಾಕ್ಯವಾಗಿದೆ’ ಎಂದು ಅವರು ಹೇಳಿದರು.</p>.<p>ಬಜರಂಗ ಬಲಿ ಹನುಮಾನ ದೇವಸ್ಥಾನದ ಪುರೋಹಿತ ಸಂದೀಪ ಕುಮಾರ ಕಾರ್ಯಕ್ರಮ ಉದ್ಘಾಟಿಸಿದರು.</p>.<p>ವಿದ್ಯಾರ್ಥಿನಿಯರಾದ ಜಮುನಾ ಹಾಗೂ ಸಾದಿಯಾ ಪ್ರಾರ್ಥನಾ ಗೀತೆ ಹಾಡಿದರು.</p>.<p>ಆಯುರ್ವೇದ ತಜ್ಞ ವೈದ್ಯ ಪ್ರಮೋದ ನಿಜಾಂಕಾರಿ, ಹರೀಶ ನಿಜಾಂಕಾರಿ, ಸೈಯದ್ ಅಬ್ದುಲ್ ರಹೀಂ, ಕಿರಣ ಕುಮಾರ, ಅಬ್ದುಲ್ ಖದೀರ್, ಪ್ರವಾಸಿ ಮಿತ್ರರಾದ ತಿಮ್ಮಪ್ಪ, ರಾಧಾ ಸೇರಿದಂತೆ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260520-32-426836448</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>