<p>ರಾಯಚೂರು: ‘ರಜಾ ದಿನಗಳಲ್ಲಿ ಹೊಸ ಕೌಶಲ ಕಲಿತುಕೊಳ್ಳಬೇಕು. ಗಾಯನ, ನೃತ್ಯ, ಚಿತ್ರಕಲೆ, ವಿವಿಧ ಕ್ರೀಡೆಗಳು ಹೀಗೆ ಇನ್ನೂ ಮುಂತಾದ ಹವ್ಯಾಸಗಳನ್ನು ಬೆಳೆಸಿಕೊಳ್ಳಲು ಬೇಸಿಗೆ ಶಿಬಿರಗಳು ಸಹಾಯಕವಾಗುತ್ತವೆ’ ಎಂದು ಲೇಖಕ ಈರಣ್ಣ ಬೆಂಗಾಲಿ ಹೇಳಿದರು.</p>.<p>ತಾಲ್ಲೂಕಿನ ಮಮದಾಪುರದ ಗಧಾರ ಮಾರಿಕಾಂಬಾ ದೇವಸ್ಥಾನ ಸೇವಾ ಸಮಿತಿಯ ಗುರುಕುಲ ಶಿಕ್ಷಣ, ಗ್ರಾಮ ಪಂಚಾಯಿತಿ ಮತ್ತು ಅರಿವು ಕೇಂದ್ರದ ಆಶ್ರಯದಲ್ಲಿ ಆಯೋಜಿಸಿರುವ ಉಚಿತ ಬೇಸಿಗೆ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.</p>.<p>‘ಮಕ್ಕಳು ಶಾಲಾ ಹಂತದಲ್ಲಿ ಚೆನ್ನಾಗಿ ಅಭ್ಯಾಸ ಮಾಡಿ ತಂದೆ–ತಾಯಿ, ಶಾಲೆ, ಊರಿಗೆ ಹೆಸರು ತರಬೇಕು’ ಎಂದರು.</p>.<p>ತಾ.ಪಂ ಇಒ ಚಂದ್ರಶೇಖರ ಪವಾರ, ಸಹಾಯಕ ನಿರ್ದೇಶಕ ಶಿವಪ್ಪ ನೆಲಹಾಳ ಮಾತನಾಡಿದರು. ಸಹಾಯಕ ನಿರ್ದೇಶಕ ಹನುಮಂತಪ್ಪ, ಪಿಡಿಒ ನಾಗರತ್ನ ಇದ್ದರು. ಶಿಕ್ಷಕ ವೃಂದ, ಶಿಬಿರ ಆಯೋಜನೆ ಮಾಡಿದ ಸೌರಪ್ಪ, ಪೂಜಾ, ಬಸವರೆಡ್ಡಿ ಯಾದವ, ಹುಸೇನ್ ಸಾಬ್, ಸುಗ್ರೀವ್, ಜಂಬಣ್ಣ, ರಮೇಶ್, ಪ್ರಜ್ವಲ್ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260413-32-1974182128</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಯಚೂರು: ‘ರಜಾ ದಿನಗಳಲ್ಲಿ ಹೊಸ ಕೌಶಲ ಕಲಿತುಕೊಳ್ಳಬೇಕು. ಗಾಯನ, ನೃತ್ಯ, ಚಿತ್ರಕಲೆ, ವಿವಿಧ ಕ್ರೀಡೆಗಳು ಹೀಗೆ ಇನ್ನೂ ಮುಂತಾದ ಹವ್ಯಾಸಗಳನ್ನು ಬೆಳೆಸಿಕೊಳ್ಳಲು ಬೇಸಿಗೆ ಶಿಬಿರಗಳು ಸಹಾಯಕವಾಗುತ್ತವೆ’ ಎಂದು ಲೇಖಕ ಈರಣ್ಣ ಬೆಂಗಾಲಿ ಹೇಳಿದರು.</p>.<p>ತಾಲ್ಲೂಕಿನ ಮಮದಾಪುರದ ಗಧಾರ ಮಾರಿಕಾಂಬಾ ದೇವಸ್ಥಾನ ಸೇವಾ ಸಮಿತಿಯ ಗುರುಕುಲ ಶಿಕ್ಷಣ, ಗ್ರಾಮ ಪಂಚಾಯಿತಿ ಮತ್ತು ಅರಿವು ಕೇಂದ್ರದ ಆಶ್ರಯದಲ್ಲಿ ಆಯೋಜಿಸಿರುವ ಉಚಿತ ಬೇಸಿಗೆ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.</p>.<p>‘ಮಕ್ಕಳು ಶಾಲಾ ಹಂತದಲ್ಲಿ ಚೆನ್ನಾಗಿ ಅಭ್ಯಾಸ ಮಾಡಿ ತಂದೆ–ತಾಯಿ, ಶಾಲೆ, ಊರಿಗೆ ಹೆಸರು ತರಬೇಕು’ ಎಂದರು.</p>.<p>ತಾ.ಪಂ ಇಒ ಚಂದ್ರಶೇಖರ ಪವಾರ, ಸಹಾಯಕ ನಿರ್ದೇಶಕ ಶಿವಪ್ಪ ನೆಲಹಾಳ ಮಾತನಾಡಿದರು. ಸಹಾಯಕ ನಿರ್ದೇಶಕ ಹನುಮಂತಪ್ಪ, ಪಿಡಿಒ ನಾಗರತ್ನ ಇದ್ದರು. ಶಿಕ್ಷಕ ವೃಂದ, ಶಿಬಿರ ಆಯೋಜನೆ ಮಾಡಿದ ಸೌರಪ್ಪ, ಪೂಜಾ, ಬಸವರೆಡ್ಡಿ ಯಾದವ, ಹುಸೇನ್ ಸಾಬ್, ಸುಗ್ರೀವ್, ಜಂಬಣ್ಣ, ರಮೇಶ್, ಪ್ರಜ್ವಲ್ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260413-32-1974182128</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>