<p>ಸಾಗರ: ‘ಕೃತಕ ಬುದ್ಧಿಮತ್ತೆ ತಂತ್ರಜ್ಞಾನ (ಎಐ) ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ವಿದ್ಯಾರ್ಥಿಗಳು ಅದರ ಕುರಿತು ಅರಿವು ಬೆಳೆಸಿಕೊಳ್ಳುವುದು ಅತ್ಯವಶ್ಯಕ’ ಎಂದು ಬೆಂಗಳೂರಿನ ಪೈರ್ ಸ್ಪೈಕ್ ಎಜುಕೇಷನ್ ಆ್ಯಂಡ್ ಟೆಕ್ನಾಲಜಿಸ್ ಸಂಸ್ಥೆಯ ಸಂಸ್ಥಾಪಕ ರವಿ ಹೆಗ್ಡೆ ಹೇಳಿದರು.</p>.<p>ಸಮೀಪದ ಹೆಗ್ಗೋಡಿನಲ್ಲಿ ಕಾಕಾಲ್ ಪ್ರಥಮದರ್ಜೆ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜು ವರ್ಲ್ಡ್ ವೈಸ್ ಲಾಂಗ್ವೇಜ್ ಲ್ಯಾಬ್ನ ಸಹಯೋಗದೊಂದಿಗೆ ಶನಿವಾರ ಏರ್ಪಡಿಸಿದ್ದ ಕೃತಕ ಬುದ್ಧಿಮತ್ತೆ ತಿಳಿವಳಿಕೆ, ಕಲಿಕೆ-ಗಳಿಕೆ ಕುರಿತ ಮಾಹಿತಿ ಶಿಬಿರದಲ್ಲಿ ಅವರು ಮಾತನಾಡಿದರು.</p>.<p>‘ಊಹಿಸಲು ಸಾಧ್ಯವಿಲ್ಲದ ವೇಗದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬೆಳೆಯುತ್ತಿದೆ. ಈ ಕಾರಣ ಹಲವು ಆತಂಕ ಹಾಗೂ ಅನುಮಾನಗಳು ಸೃಷ್ಟಿಯಾಗಿವೆ. ಮುಂದಿನ ದಿನಗಳಲ್ಲಿ ಈ ತಂತ್ರಜ್ಞಾನದ ಮೇಲಿನ ಅವಲಂಬನೆ ಅನಿವಾರ್ಯವಾಗಲಿದೆ. ಆದರೆ ನಿರುದ್ಯೋಗ ಹೆಚ್ಚಲಿದೆ ಎಂಬ ಆತಂಕ ಬೇಡ’ ಎಂದು ಹೇಳಿದರು.</p>.<p>‘ಪ್ರತಿ ಹೊಸ ತಂತ್ರಜ್ಞಾನ ಜಗತ್ತನ್ನು ಪ್ರವೇಶಿಸಿದಾಗ ಅನೇಕ ಕ್ಷೇತ್ರಗಳಲ್ಲಿ ಅನಿಶ್ಚಿತತೆ ಮೂಡುತ್ತದೆ. ಕಂಪ್ಯೂಟರ್ ಬಳಕೆ ಆರಂಭವಾದಾಗಲೂ ಇದೇ ರೀತಿ ಆಗಿತ್ತು. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡೆ ಅವಕಾಶಗಳನ್ನು ಯುವಜನತೆ ಸೃಷ್ಟಿಸಿಕೊಳ್ಳಬಹುದು’ ಎಂದು ವರ್ಲ್ಡ್ ವೈಸ್ ಲಾಂಗ್ವೇಜ್ ಲ್ಯಾಬ್ನ ಸಂಸ್ಥಾಪಕ ಅವಿನಾಶ್ ಅಭಿಪ್ರಾಯಪಟ್ಟರು.</p>.<p>ಪ್ರಾಂಶುಪಾಲ ಗಣಪತಿ ಎ.ಎಸ್., ಪ್ರಮುಖರಾದ ಕೇಶವ ಸಂಪೆಕೈ, ಬಾಗಿ ಸತ್ಯನಾರಾಯಣ, ವಿ.ಜಿ.ಶ್ರೀಧರ್, ಪ್ರಕಾಶ್ ಕಾಕಾಲ್ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260601-42-1888704764</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಾಗರ: ‘ಕೃತಕ ಬುದ್ಧಿಮತ್ತೆ ತಂತ್ರಜ್ಞಾನ (ಎಐ) ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ವಿದ್ಯಾರ್ಥಿಗಳು ಅದರ ಕುರಿತು ಅರಿವು ಬೆಳೆಸಿಕೊಳ್ಳುವುದು ಅತ್ಯವಶ್ಯಕ’ ಎಂದು ಬೆಂಗಳೂರಿನ ಪೈರ್ ಸ್ಪೈಕ್ ಎಜುಕೇಷನ್ ಆ್ಯಂಡ್ ಟೆಕ್ನಾಲಜಿಸ್ ಸಂಸ್ಥೆಯ ಸಂಸ್ಥಾಪಕ ರವಿ ಹೆಗ್ಡೆ ಹೇಳಿದರು.</p>.<p>ಸಮೀಪದ ಹೆಗ್ಗೋಡಿನಲ್ಲಿ ಕಾಕಾಲ್ ಪ್ರಥಮದರ್ಜೆ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜು ವರ್ಲ್ಡ್ ವೈಸ್ ಲಾಂಗ್ವೇಜ್ ಲ್ಯಾಬ್ನ ಸಹಯೋಗದೊಂದಿಗೆ ಶನಿವಾರ ಏರ್ಪಡಿಸಿದ್ದ ಕೃತಕ ಬುದ್ಧಿಮತ್ತೆ ತಿಳಿವಳಿಕೆ, ಕಲಿಕೆ-ಗಳಿಕೆ ಕುರಿತ ಮಾಹಿತಿ ಶಿಬಿರದಲ್ಲಿ ಅವರು ಮಾತನಾಡಿದರು.</p>.<p>‘ಊಹಿಸಲು ಸಾಧ್ಯವಿಲ್ಲದ ವೇಗದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬೆಳೆಯುತ್ತಿದೆ. ಈ ಕಾರಣ ಹಲವು ಆತಂಕ ಹಾಗೂ ಅನುಮಾನಗಳು ಸೃಷ್ಟಿಯಾಗಿವೆ. ಮುಂದಿನ ದಿನಗಳಲ್ಲಿ ಈ ತಂತ್ರಜ್ಞಾನದ ಮೇಲಿನ ಅವಲಂಬನೆ ಅನಿವಾರ್ಯವಾಗಲಿದೆ. ಆದರೆ ನಿರುದ್ಯೋಗ ಹೆಚ್ಚಲಿದೆ ಎಂಬ ಆತಂಕ ಬೇಡ’ ಎಂದು ಹೇಳಿದರು.</p>.<p>‘ಪ್ರತಿ ಹೊಸ ತಂತ್ರಜ್ಞಾನ ಜಗತ್ತನ್ನು ಪ್ರವೇಶಿಸಿದಾಗ ಅನೇಕ ಕ್ಷೇತ್ರಗಳಲ್ಲಿ ಅನಿಶ್ಚಿತತೆ ಮೂಡುತ್ತದೆ. ಕಂಪ್ಯೂಟರ್ ಬಳಕೆ ಆರಂಭವಾದಾಗಲೂ ಇದೇ ರೀತಿ ಆಗಿತ್ತು. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡೆ ಅವಕಾಶಗಳನ್ನು ಯುವಜನತೆ ಸೃಷ್ಟಿಸಿಕೊಳ್ಳಬಹುದು’ ಎಂದು ವರ್ಲ್ಡ್ ವೈಸ್ ಲಾಂಗ್ವೇಜ್ ಲ್ಯಾಬ್ನ ಸಂಸ್ಥಾಪಕ ಅವಿನಾಶ್ ಅಭಿಪ್ರಾಯಪಟ್ಟರು.</p>.<p>ಪ್ರಾಂಶುಪಾಲ ಗಣಪತಿ ಎ.ಎಸ್., ಪ್ರಮುಖರಾದ ಕೇಶವ ಸಂಪೆಕೈ, ಬಾಗಿ ಸತ್ಯನಾರಾಯಣ, ವಿ.ಜಿ.ಶ್ರೀಧರ್, ಪ್ರಕಾಶ್ ಕಾಕಾಲ್ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260601-42-1888704764</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>