<p>ಶಿಗ್ಗಾವಿ: ‘ಪ್ರತಿಭೆಗಳಿಗೆ ತಕ್ಕ ಪ್ರೋತ್ಸಾಹ ನೀಡುವ ಜತೆಗೆ ಅವರ ಭವಿಷ್ಯದ ಯಶಸ್ವಿಗೆ ಪ್ರೇರಣೆಯಾಗಬೇಕು. ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ ಬೆಳೆಸುವ ಮೂಲಕ ನಾಡಿಗೆ ಉತ್ತಮ ಕೊಡುಗೆ ನೀಡುವಂತಾಗಬೇಕು’ ಎಂದು ಹೋತನಹಳ್ಳಿ ಸಿಂದಗಿಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.</p>.<p>ತಾಲ್ಲೂಕಿನ ಹೋತನಹಳ್ಳಿ ಗ್ರಾಮದಲ್ಲಿ ಸಿಂದಗಿ ಶಾಂತವೀರೇಶ್ವರ ಸ್ವಾಮಿ ಜಾತ್ರೆ ಹಾಗೂ ಬಸವ ಜಯಂತಿ ಅಂಗವಾಗಿ ಗ್ರಾಮ ಸುಧಾರಣಾ ಸಮಿತಿಯಿಂದ ಮಂಗಳವಾರ ನಡೆದ ಜಿಲ್ಲಾ ಮಟ್ಟದ ವಚನ ವಾಚನ ಸ್ಪರ್ಧೆ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ವಿದ್ಯಾರ್ಥಿಗಳ ವಯೋಮಾನ ಅನುಸಾರ ಮೂರು ಪ್ರತ್ಯೇಕ ವಿಭಾಗಗಳಲ್ಲಿ ವಚನ ವಾಚನ ಸ್ಪರ್ಧೆ ನಡೆಸಲಾಗಿದ್ದು, ಅಂದಾಜು 250 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಬಸವಣ್ಣವರ ಕಾಯಕ ಮತ್ತು ಸಾಮಾಜಿಕ ಸಮಾನತೆ ಸಂದೇಶಗಳನ್ನು ಮರುಕಳಿಸಲು ಸ್ಪರ್ಧೆಗಳು ಸಹಕಾರಿ’ ಎಂದರು.</p>.<p>ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಶಂಕ್ರಿಕೊಪ್ಪದ ಅಮೃತ ಜಾಡಬಡಿಗೇರ ಪ್ರಥಮ, ಬಮ್ಮನಹಳ್ಳಿಯ ಸಾತ್ವಿಕ ಪೂಜಾರ ದ್ವಿತೀಯ, ಕುಳೇನೂರದ ತನುಶ್ರೀ ಹೊನ್ನತ್ತಿ ತೃತೀಯ ಪಡೆದರು. ವಿಜೇತರಿಗೆ ಕ್ರಮವಾಗಿ ₹10 ಸಾವಿರ, ₹7.5 ಸಾವಿರ, ₹5 ಸಾವಿರ ನಗದು ಬಹುಮಾನ ನೀಡಲಾಯಿತು.</p>.<p>ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಶಿವಪುರದ ಅಮೃತ ಓಣಿಕೇರಿ ಪ್ರಥಮ, ಹುಣಸಿಕಟ್ಟಿ ಹರ್ಷಿತ ಪ್ಯಾಟಿ ದ್ವಿತೀಯ, ಹುಲಿಕಟ್ಟಿ ಚೈತ್ರಾ ಹೆಗಡೆ ತೃತೀಯ ಪಡೆದರು.</p>.<p>ಪ್ರೌಢ ಶಾಲೆ ಹಾಗೂ ಕಾಲೇಜು ವಿಭಾಗದಲ್ಲಿ ಸಾವಿತ್ರಿ ಎಂ.ಕೋಟಿ ಪ್ರಥಮ, ಕೀರ್ತನ ಬಸವರಾಜ ಭಂಗಿ ದ್ವಿತೀಯ, ಮಂಗಳ ಕರಬಸಪ್ಪ ಬೈಲವಾಳ ಹಾಗೂ ಪೈಜಾ ಅಂಜುಮ ತೃತೀಯ ಸ್ಥಾನ ಪಡೆದರು. ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.</p>.<p>ಜ್ಞಾನನಿಧಿ ಸವೋದಯ ಕೋಚಿಂಗ್ ಸೆಂಟರ್ ಮುಖ್ಯಸ್ಥ ರಾಜಪ್ಪ ಪಾಪೋಜಿ, ಶಿಕ್ಷಕ ಬಸವರಾಜ ವಡ್ಡರ ನೇತೃತ್ವ ವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260423-22-285511824</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿಗ್ಗಾವಿ: ‘ಪ್ರತಿಭೆಗಳಿಗೆ ತಕ್ಕ ಪ್ರೋತ್ಸಾಹ ನೀಡುವ ಜತೆಗೆ ಅವರ ಭವಿಷ್ಯದ ಯಶಸ್ವಿಗೆ ಪ್ರೇರಣೆಯಾಗಬೇಕು. ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ ಬೆಳೆಸುವ ಮೂಲಕ ನಾಡಿಗೆ ಉತ್ತಮ ಕೊಡುಗೆ ನೀಡುವಂತಾಗಬೇಕು’ ಎಂದು ಹೋತನಹಳ್ಳಿ ಸಿಂದಗಿಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.</p>.<p>ತಾಲ್ಲೂಕಿನ ಹೋತನಹಳ್ಳಿ ಗ್ರಾಮದಲ್ಲಿ ಸಿಂದಗಿ ಶಾಂತವೀರೇಶ್ವರ ಸ್ವಾಮಿ ಜಾತ್ರೆ ಹಾಗೂ ಬಸವ ಜಯಂತಿ ಅಂಗವಾಗಿ ಗ್ರಾಮ ಸುಧಾರಣಾ ಸಮಿತಿಯಿಂದ ಮಂಗಳವಾರ ನಡೆದ ಜಿಲ್ಲಾ ಮಟ್ಟದ ವಚನ ವಾಚನ ಸ್ಪರ್ಧೆ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ವಿದ್ಯಾರ್ಥಿಗಳ ವಯೋಮಾನ ಅನುಸಾರ ಮೂರು ಪ್ರತ್ಯೇಕ ವಿಭಾಗಗಳಲ್ಲಿ ವಚನ ವಾಚನ ಸ್ಪರ್ಧೆ ನಡೆಸಲಾಗಿದ್ದು, ಅಂದಾಜು 250 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಬಸವಣ್ಣವರ ಕಾಯಕ ಮತ್ತು ಸಾಮಾಜಿಕ ಸಮಾನತೆ ಸಂದೇಶಗಳನ್ನು ಮರುಕಳಿಸಲು ಸ್ಪರ್ಧೆಗಳು ಸಹಕಾರಿ’ ಎಂದರು.</p>.<p>ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಶಂಕ್ರಿಕೊಪ್ಪದ ಅಮೃತ ಜಾಡಬಡಿಗೇರ ಪ್ರಥಮ, ಬಮ್ಮನಹಳ್ಳಿಯ ಸಾತ್ವಿಕ ಪೂಜಾರ ದ್ವಿತೀಯ, ಕುಳೇನೂರದ ತನುಶ್ರೀ ಹೊನ್ನತ್ತಿ ತೃತೀಯ ಪಡೆದರು. ವಿಜೇತರಿಗೆ ಕ್ರಮವಾಗಿ ₹10 ಸಾವಿರ, ₹7.5 ಸಾವಿರ, ₹5 ಸಾವಿರ ನಗದು ಬಹುಮಾನ ನೀಡಲಾಯಿತು.</p>.<p>ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಶಿವಪುರದ ಅಮೃತ ಓಣಿಕೇರಿ ಪ್ರಥಮ, ಹುಣಸಿಕಟ್ಟಿ ಹರ್ಷಿತ ಪ್ಯಾಟಿ ದ್ವಿತೀಯ, ಹುಲಿಕಟ್ಟಿ ಚೈತ್ರಾ ಹೆಗಡೆ ತೃತೀಯ ಪಡೆದರು.</p>.<p>ಪ್ರೌಢ ಶಾಲೆ ಹಾಗೂ ಕಾಲೇಜು ವಿಭಾಗದಲ್ಲಿ ಸಾವಿತ್ರಿ ಎಂ.ಕೋಟಿ ಪ್ರಥಮ, ಕೀರ್ತನ ಬಸವರಾಜ ಭಂಗಿ ದ್ವಿತೀಯ, ಮಂಗಳ ಕರಬಸಪ್ಪ ಬೈಲವಾಳ ಹಾಗೂ ಪೈಜಾ ಅಂಜುಮ ತೃತೀಯ ಸ್ಥಾನ ಪಡೆದರು. ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.</p>.<p>ಜ್ಞಾನನಿಧಿ ಸವೋದಯ ಕೋಚಿಂಗ್ ಸೆಂಟರ್ ಮುಖ್ಯಸ್ಥ ರಾಜಪ್ಪ ಪಾಪೋಜಿ, ಶಿಕ್ಷಕ ಬಸವರಾಜ ವಡ್ಡರ ನೇತೃತ್ವ ವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260423-22-285511824</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>